ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಹಿಮ್ಮೇಳ

Last Updated 26 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯದ ಜತೆ ರಾಜಕೀಯ ಹಿಮ್ಮೇಳವೂ ಇತ್ತು. ಅಧ್ಯಕ್ಷರ ಭಾಷಣದಲ್ಲಿ ಸಾಹಿತ್ಯೇತರ ವಿಷಯಗಳ ಪ್ರಸ್ತಾಪ ಎದ್ದು ಕಾಣುತ್ತಿತ್ತು. ದೇವಸ್ಥಾನದ ಒಳಗೆ ಹೋಗಲು ಮುಜುಗರಪಟ್ಟವರು ದೇವರಂತೆ ಮೆರವಣಿಗೆಯಲ್ಲಿ ಹೋದದ್ದು ವಿಪರ್ಯಾಸವೇ ಸರಿ.

ಕನ್ನಡ ಶಾಲೆಗಳು ಮುಚ್ಚದಂತೆ ನೋಡಿಕೊಳ್ಳುವುದು, ಗಡಿನಾಡ ಕನ್ನಡಿಗರಿಗೆ ರಕ್ಷಣೆ, ಎಲ್ಲಾ ಕಡೆಗಳಲ್ಲೂ ಕನ್ನಡದ ಬಳಕೆ ಮುಂತಾದ ವಿಚಾರಗಳಿಗೆ ಸರ್ಕಾರ ಒತ್ತು ಕೊಟ್ಟು ನಡೆದರೆ ಇಂತಹ ಸಮ್ಮೇಳನಕ್ಕೆ ಅರ್ಥ ಬರುತ್ತದೆ.

ಇಷ್ಟೊಂದು ಖರ್ಚು ಮಾಡಿ ಪ್ರತಿ ವರ್ಷ ಸಮ್ಮೇಳನ ನಡೆಸುವ ಔಚಿತ್ಯ ಪ್ರಶ್ನಾರ್ಹ. ಎರಡು ಅಥವಾ ಮೂರು ವರ್ಷಕ್ಕೊಮ್ಮೆ ನಡೆಸಿದರೂ ತಪ್ಪೇನಿಲ್ಲ. ಮನದಲ್ಲಿ ಕನ್ನಡದ ಜಾಗೃತಿಯಿದ್ದು, ಕನ್ನಡೇತರರಿಗೆ ಕನ್ನಡ ಕಲಿಸಿ ಮಾತನಾಡುವುದಕ್ಕೆ ಉತ್ತೇಜಿಸಿದರೆ ಅದಕ್ಕಿಂತ ಉತ್ತಮ ಕನ್ನಡ ಸೇವೆ ಇನ್ನೊಂದಿಲ್ಲ.

ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT