ಕೃಷಿಯನ್ನು ನಂಬಿ ಕುಳಿತಿರುವ ರೈತರಿಗೆ ಕೃಷಿ ಮಾರುಕಟ್ಟೆಯಲ್ಲಿ ಅನ್ಯಾಯವಾಗುತ್ತಿದೆ. ಪ್ರಮುಖವಾಗಿ ಹತ್ತಿಯ ಬೆಲೆಯು ಕಳೆದ ಎರಡು ವರ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಈ ವರ್ಷ ಮಾರಾಟವಾಗುತ್ತಿರುವುದು ವಿಷಾದದ ಸಂಗತಿ. ಈ ಬೆಲೆಯು ರೈತನಿಗೆ ಯಾವುದಕ್ಕೂ ಸಾಲುವುದಿಲ್ಲ. ಕಷ್ಟಪಟ್ಟು ಬಿಸಿಲು ಚಳಿ ಎನ್ನದೆ ದುಡಿದರೂ ಗೊಬ್ಬರ, ಕೂಲಿ ಮುಂತಾದವುಗಳ ಬೆಲೆ ತುಟ್ಟಿಯಾಗಿವೆ. ಇದಕ್ಕೆ ದುಡ್ಡು ಖರ್ಚು ಮಾಡಿದರೆ ಏನು ಉಳಿಯುತ್ತದೆ? ಸಂಬಂಧಪಟ್ಟ ಅಧಿಕಾರಿಗಳು ಸೂಕ್ತವಾದ ಬೆಲೆಯನ್ನು ನಿರ್ಧರಿಸಿ ರೈತರ ಕಣ್ಣೀರು ಒರೆಸುವ ಕಾರ್ಯ ಮಾಡಲಿ.