ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಮೇ ಒಂದರಿಂದ ಅನ್ವಯವಾಗುವಂತೆ ವಿದ್ಯುತ್ ದರಗಳನ್ನೇನೋ ಏರಿಸಿದೆ. ಆದರೆ ತಾನು ಗ್ರಾಹಕರಿಗೆ ಕೊಡುವ ರಿಯಾಯಿತಿ ಮೊತ್ತವನ್ನು ಹೆಚ್ಚು ಮಾಡುವ ಬಗ್ಗೆ ಚಕಾರವೆತ್ತದೆ ಮೌನ ವಹಿಸಿದೆ.
ಉದಾಹರಣೆಗೆ ಅನೇಕ ಗ್ರಾಹಕರು ಸಾವಿರಾರು ರೂಪಾಯಿ ವ್ಯಯಿಸಿ ಬಿಸಿನೀರು ಪಡೆಯಲು ಸೋಲಾರ್ ಹೀಟರ್ಗಳನ್ನು ಅಳವಡಿಸಿಕೊಂಡಿದ್ದು, ಅವರಿಗೆ ಮೊದಲಿನಿಂದಲೂ ಮಾಸಿಕ ವಿದ್ಯುತ್ ಬಿಲ್ಲಿನಲ್ಲಿ ಪ್ರತಿ ಯೂನಿಟ್ಗೆ ಕೇವಲ 50 ಪೈಸೆಯಂತೆ ಗರಿಷ್ಠ ₨ 50 ರಿಯಾಯಿತಿ ಕೊಡಲಾಗುತ್ತಿದೆ.
ಹಣದುಬ್ಬರದ ಇಂದಿನ ದಿನಗಳಲ್ಲಿ ಕನಿಷ್ಠ ಪ್ರಮಾಣದ ಈ ರಿಯಾಯಿತಿ ಏನೂ ಅಲ್ಲ.
ನಾನಾ ಸಬೂಬು ಹೇಳಿ ಆಗಾಗ ದರ ಹೆಚ್ಚಿಸುವ ವಿದ್ಯುತ್ ಮಂಡಳಿಯು ತನ್ನ ಗ್ರಾಹಕರಿಗೆ ಕೊಡುವ ರಿಯಾಯಿತಿ ಮೊತ್ತವನ್ನು ಹೆಚ್ಚಿಸುವಲ್ಲಿಯೂ ಧಾರಾಳತನ ತೋರಲಿ.
–ಆರ್.ಜಿ. ಬ್ಯಾಕೋಡ, ವಿಜಾಪುರ