ಅತಿಯಾದ ಹೊರೆಯಿಂದ ಹೆಣಗುತ್ತಾ, ವಿವಾದಗಳ ಕೇಂದ್ರವಾಗಿ ಶೈಕ್ಷಣಿಕವಾಗಿ ಸೊರಗುತ್ತಿರುವ ಬೆಂಗಳೂರು ವಿಶ್ವವಿದ್ಯಾಲಯದ ಸ್ಥಿತಿ ಚಿಂತಾಜನಕವಾಗಿದೆ. ಈಗ ಸರ್ಕಾರವು ಬೆಂಗಳೂರು ವಿಶ್ವವಿದ್ಯಾಲಯವನ್ನು ವಿಭಜಿಸಿ ಎರಡು ಪ್ರತ್ಯೇಕ ವಿಶ್ವವಿದ್ಯಾಲಯಗಳನ್ನಾಗಿ ಮಾಡುತ್ತಿರುವುದು.
ಸ್ವಾಗತಾರ್ಹ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಹಾಗೂ ಬೆಂಗಳೂರು ಗ್ರಾಮಾಂತರದ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರಗಳ ಕಾಲೇಜುಗಳನ್ನು ಹೊಸಕೋಟೆಯಲ್ಲಿ ಸ್ಥಾಪಿತವಾಗುತ್ತಿರುವ ಹೊಸ ವಿಶ್ವವಿದ್ಯಾಲಯದ ವ್ಯಾಪ್ತಿಗೆ ತಂದಿರುವುದು ಸೂಕ್ತವಾದ ನಿರ್ಧಾರ. ಇದಕ್ಕೆ ಸರ್ಕಾರವು ಡಿ. ವಿ. ಗುಂಡಪ್ಪನವರ ಹೆಸರನ್ನಿಟ್ಟಿರುವುದು ಅತ್ಯಂತ ಸಂತಸದ ಹಾಗೂ ಸ್ವಾಗತಾರ್ಹ ಸಂಗತಿ.