ಪ್ರತಿಯೊಬ್ಬ ಆಟಗಾರನ ವೃತ್ತಿ ಜೀವನದಲ್ಲಿ ಏರು ಪೇರುಗಳಾಗುವುದು ಸಹಜವೆ. ವೀರೇಂದ್ರ ಸೆಹ್ವಾಗ್ ಸಾಮರ್ಥ್ಯದ ಬಗ್ಗೆ ಭಿನ್ನಾಭಿಪ್ರಾಯವಿಲ್ಲ. ಆದರೆ ಸತತ ವೈಫಲ್ಯದಿಂದಾಗಿ ತಂಡದಲ್ಲಿ ಅವರು ತಮ್ಮ ಸ್ಥಾನ ಕಳೆದುಕೊಂಡಿದ್ದಾರಷ್ಟೆ. ಗೌತಮ್ ಗಂಭೀರ್ ತಂಡಕ್ಕೆ ಆಯ್ಕೆಯೇ ಆಗಲಿಲ್ಲ. ಸೆಹ್ವಾಗ್ ತಂಡದಲ್ಲಿದ್ದರೂ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಇದರ ಹೊರತಾಗಿಯೂ ಆಡಿರುವ ಎರಡೂ ಟೆಸ್ಟ್ ಪಂದ್ಯದಲ್ಲಿ ಭಾರತ ಗೆದ್ದಿದೆ. ತಂಡದಲ್ಲಿ ಯಾರೂ ಅನಿವಾರ್ಯವಲ್ಲ ಹಾಗೂ ಆ ರೀತಿ ಭಾವಿಸಲೂಬಾರದು. ಈ ದೃಷ್ಟಿಯಿಂದ ಸೆಹ್ವಾಗ್ರನ್ನು ಕೈಬಿಟ್ಟಿರುವುದು ಸರಿಯಾದ ಕ್ರಮ.