<p>ಇಂದಿರಾ ಗಾಂಧಿ ಹಂತಕರನ್ನು ‘ಹುತಾತ್ಮರು’ ಎಂದು ವೈಭವೀಕರಿಸಿ, ಅವರ ಕುಟುಂಬದವರನ್ನು ಸನ್ಮಾನಿಸಿರುವ ವಿಷಯ ತಿಳಿದು ನೋವಾಯಿತು. ಸಿಖ್ ವಿದ್ಯಾರ್ಥಿಗಳ ಒಕ್ಕೂಟದ ಆಶ್ರಯದಲ್ಲಿ, ಗುರುದ್ವಾರವೊಂದರಲ್ಲಿ ಅಕಾಲಿದಳದ ಹಿರಿಯರ ಸಮ್ಮುಖದಲ್ಲಿ ಈ ಸನ್ಮಾನ ನಡೆದಿರುವುದು ವಿಷಾದದ ಸಂಗತಿ.<br /> <br /> ಹಿಂಸೆಯ, ಕೊಲೆಯ ವೈಭವೀಕರಣ ಸಲ್ಲದು. ಹಿಂಸೆ ಯಾವುದೇ ಸಮಸ್ಯೆಗೂ ಪರಿಹಾರವಲ್ಲ. ಯಾವುದೇ ಧರ್ಮಕ್ಕಿಂತ ‘ರಾಷ್ಟ್ರಧರ್ಮ’ ಸಂವಿಧಾನ ದೊಡ್ಡದು. ಯುವಕರು ಧರ್ಮವನ್ನು ಅನುಸರಿಸುತ್ತಲೇ ಸಹಿಷ್ಣುಗಳಾಗಬೇಕಾದುದು ಇಂದಿನ ತುರ್ತು ಅಗತ್ಯ. ಇಂತಹ ‘ಸನ್ಮಾನ’ಗಳು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಂದಿರಾ ಗಾಂಧಿ ಹಂತಕರನ್ನು ‘ಹುತಾತ್ಮರು’ ಎಂದು ವೈಭವೀಕರಿಸಿ, ಅವರ ಕುಟುಂಬದವರನ್ನು ಸನ್ಮಾನಿಸಿರುವ ವಿಷಯ ತಿಳಿದು ನೋವಾಯಿತು. ಸಿಖ್ ವಿದ್ಯಾರ್ಥಿಗಳ ಒಕ್ಕೂಟದ ಆಶ್ರಯದಲ್ಲಿ, ಗುರುದ್ವಾರವೊಂದರಲ್ಲಿ ಅಕಾಲಿದಳದ ಹಿರಿಯರ ಸಮ್ಮುಖದಲ್ಲಿ ಈ ಸನ್ಮಾನ ನಡೆದಿರುವುದು ವಿಷಾದದ ಸಂಗತಿ.<br /> <br /> ಹಿಂಸೆಯ, ಕೊಲೆಯ ವೈಭವೀಕರಣ ಸಲ್ಲದು. ಹಿಂಸೆ ಯಾವುದೇ ಸಮಸ್ಯೆಗೂ ಪರಿಹಾರವಲ್ಲ. ಯಾವುದೇ ಧರ್ಮಕ್ಕಿಂತ ‘ರಾಷ್ಟ್ರಧರ್ಮ’ ಸಂವಿಧಾನ ದೊಡ್ಡದು. ಯುವಕರು ಧರ್ಮವನ್ನು ಅನುಸರಿಸುತ್ತಲೇ ಸಹಿಷ್ಣುಗಳಾಗಬೇಕಾದುದು ಇಂದಿನ ತುರ್ತು ಅಗತ್ಯ. ಇಂತಹ ‘ಸನ್ಮಾನ’ಗಳು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>