ಬೆಂಗಳೂರು ರಾಜಾಜಿನಗರ ವೆಸ್್ಟ ಆಫ್ ಕಾರ್ಡ್ ರಸ್ತೆಯಲ್ಲಿನ ಮಾಗಡಿ ರಸ್ತೆ, ಟೋಲ್ಗೇಟ್ನಿಂದ ಪ್ರಾರಂಭಗೊಂಡು ಮಹಾಲಕ್ಷ್ಮೀಪುರದ ಆಭರಣ ಮಳಿಗೆಯ ತನಕ ರಸ್ತೆಯ ಬಲಭಾಗದಲ್ಲಿ ಸರ್ವೀಸ್ ರಸ್ತೆ ಇದೆ. ಅಲ್ಲಿಂದಾಚೆಗೆ ಸರ್ವೀಸ್ ರಸ್ತೆ ವಿಸ್ತರಣೆಗೊಂಡಿಲ್ಲ. ಇದರಿಂದ ಇಸ್ಕಾನ್ ದೇವಾಲಯಕ್ಕೆ ಬಂದು ಹೋಗುವ ಭಕ್ತರಿಗೆ ತುಂಬಾ ತೊಂದರೆಯಾಗಿದೆ.
ಸರ್ವೀಸ್ ರಸ್ತೆಯನ್ನು ಸರ್ಕಾರಿ ಸಾಬೂನು ಕಾರ್ಖಾನೆಯಿಂದ ಯಶವಂತಪುರ ರೈಲ್ವೆ ನಿಲ್ದಾಣದವರೆಗೆ ವಿಸ್ತರಿಸಬೇಕು. ಇಸ್ಕಾನ್ ದೇವಾಲಯದ ಬಳಿ ಸರ್ವೀಸ್ ರಸ್ತೆಯಲ್ಲಿ ಅಂಡರ್ಪಾಸ್ ನಿರ್ಮಿಸಬೇಕು. ಇದರಿಂದ ಇಸ್ಕಾನ್ಗೆ ಬಂದು– ಹೋಗುವ ಯಾತ್ರಿಕರಿಗೆ ಮತ್ತು ಸಾಬೂನು ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅನುಕೂಲವಾಗುತ್ತದೆ. ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶೀಘ್ರ ಇತ್ತ ಗಮನ ಹರಿಸಬೇಕು.