ಆಡಳಿತಗಾರರು ತಮ್ಮನ್ನು ತಾವೇ ವಿಮರ್ಶೆಗೆ ಒಳಪಡಿಸಿಕೊಂಡು ಖಜಾನೆಯ ಧನ–ದ್ರವ್ಯಗಳನ್ನು ಅಪವ್ಯಯ ಮಾಡಿ ಅಪಹಾಸ್ಯಕ್ಕೆ ಗುರಿಯಾಗುವುದನ್ನು ಬಿಟ್ಟು, ಅದೇ ಧನವನ್ನು ಸತ್ಕಾರ್ಯಗಳಿಗೆ ವಿನಿಯೋಗಿಸುವುದು ಅತ್ಯುತ್ತಮ. ಪುರಾಣ, ಐತಿಹಾಸಿಕ ವ್ಯಕ್ತಿ, ಕಟ್ಟಡಗಳ ನೆಪದಲ್ಲಿ ಜಯಂತಿ, ಉತ್ಸವಗಳಿಗೆ ಖಜಾನೆಯ ಹಣವನ್ನು ಪೋಲು ಮಾಡುವುದು ಸಲ್ಲ. ಈ ಆಡಳಿತಗಾರರ ಧೋರಣೆ, ಉತ್ಸಾಹ, ವಿಜೃಂಭಣೆಗಳನ್ನು ನೋಡಿದರೆ ಪುರಾಣ ಮತ್ತು ಐತಿಹಾಸಿಕ ರಾಜರುಗಳ, ವಂದಿಮಾಗಧರ ಮನಸ್ಥಿತಿ ನೆನಪಾಗುತ್ತದೆ. ಈ ಕಳಕಳಿ ಎಲ್ಲ ಪಕ್ಷಗಳ ಧೋರಣೆಗಳಿಗೂ ಅನ್ವಯ.