<p><span style="font-size:48px;">ಯ</span>ಥಾಪ್ರಕಾರ ವರ್ಷಕ್ಕೊಮ್ಮೆ ಸಾಹಿತ್ಯ ಸಮ್ಮೇಳನ ಬರುತ್ತದೆ, ಹೋಗುತ್ತದೆ. ಅಧ್ಯಕ್ಷರ ಮಾತುಗಳು ಆಡಿಯಾದ ಮೇಲೆ ಕಳೆದೂ ಹೋಗುತ್ತಿವೆ. ನಿರ್ಣಯಗಳೂ ಪಾಸಾಗುತ್ತವೆ. ಜಾರಿಗೆ ಬಾರದೇ ಫೇಲೂ ಆಗುತ್ತಿವೆ. ಹಾಗೆಯೇ ಈ ಮಾತು ಮತ್ತು ನಿರ್ಣಯಗಳ ದಯನೀಯ ಸ್ಥಿತಿಗೆ ಯಾರು ಕಾರಣರು? ಈ ಪ್ರಶ್ನೆಗೆ ಉತ್ತರವನ್ನು ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಇವೆಲ್ಲ ಕಾರ್ಯಗತವಾಗಲಿ ಎನ್ನುವ ಬೇಡಿಕೆಗೆ ಮಾತ್ರ ಶತಮಾನದ ‘ಸಂಭ್ರಮ’...!<br /> <br /> ಸಮ್ಮೇಳನಾಧ್ಯಕ್ಷರ ಮಾತುಗಳಿಗೆ ಯಾವಾಗಿನಿಂದಲೂ ಸಮಯ ಪರಿಪಾಲನೆಯ ನೆಪದಲ್ಲಿ ಕತ್ತರಿ ಪ್ರಯೋಗದ ಶಿಕ್ಷೆ ನೀಡುತ್ತಲೂ ಬರಲಾಗಿದೆ. ಈ ಕುರಿತು ಪಾಟೀಲ ಪುಟ್ಟಪ್ಪ ತಾವು ಸಮ್ಮೇಳನಾಧ್ಯಕ್ಷರಾದ ಹೊತ್ತಲ್ಲಿ ಆಗಿನ ಮುಖ್ಯಮಂತ್ರಿಗಳನ್ನೇ ತರಾಟೆ ತೆಗೆದುಕೊಂಡಿದ್ದು ಇತಿಹಾಸದ ಒಂದು ಭಾಗ ಮಾತ್ರವಾಗಿ ಉಳಿದು ಯಥಾ ಸ್ಥಿತಿ ಮುಂದುವರಿದಿದೆ. ಹೌದು, ಹಾಗಾದರೆ ಸದ್ಯ ಪರಿಷತ್ತಾದರೂ ಈಗ ಈ ಕುರಿತು ಏನು ಮಾಡಬೇಕು..? ಎಂಬುದಕ್ಕೆ ನನ್ನದೊಂದು ಸಲಹೆ ಏನೆಂದರೆ: ಈವರೆಗೂ ನಡೆದ ಎಂಬತ್ತು ಸಮ್ಮೇಳನಗಳ ಅಧ್ಯಕ್ಷರ ಭಾಷಣಗಳನ್ನು ಹಲವು ಸಂಪುಟಗಳಲ್ಲಿ ಸಾಹಿತ್ಯ ಪರಿಷತ್ತು ಹೊರತರಬೇಕು.</p>.<p>ಈ ಯೋಜನೆಗೆ ಸರ್ಕಾರವೂ ತುಟಿಯೆರಡು ಮಾಡದೇ ಸಹಕರಿಸಬೇಕು. ಹಾಗೇ, ಆ ಕೃತಿಗಳು ಸುಲಭ ಬೆಲೆಯಲ್ಲಿ ಶ್ರೀಮಾನ್ ಕನ್ನಡಿಗನಿಗೆ ದೊರಕುವಂತಾಗಬೇಕು. ಪರಿಷತ್ತು ಮತ್ತು ಸರ್ಕಾರಕ್ಕೆ ಈ ಕೆಲಸ ಆಗದಿದ್ದರೆ, ಖಾಸಗಿ ಪ್ರಕಾಶನ ಸಂಸ್ಥೆಗಳಾದರೂ ಈ ಹೊರೆ ಹೊತ್ತು ಮೌಲಿಕವಾದ ಕನ್ನಡ ಕಟ್ಟೋಣದ ಬರೀ ಮಾತಲ್ಲದ ಕನ್ನಡ ನೆತ್ತರಿನ ಈ ನುಡಿಗಳನ್ನು ಪ್ರಕಟಿಸಲು ಮುಂದಾದಲ್ಲಿ ಅವು ಕನ್ನಡ ಬದುಕಿರುವವರೆಗೂ ಕನ್ನಡದ ಭಗವದ್ಗೀತೆಯಾಗಿ ಉಳಿಯಬಲ್ಲವು. ಸಮ್ಮೇಳನದ ನಿರ್ಣಯಗಳನ್ನು ಈಗಾಗಲೇ ಬೆಂಗಳೂರಿನ ಸುಮುಖ ಪ್ರಕಾಶನ ಹೊರತಂದಿದ್ದು ಶ್ಲಾಘನೀಯವೂ ಹೌದು. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಲಿ ಎಂಬ ಕೂಗಿಗೆ ಮನ್ನಣೆ ಸಿಗಬಹುದೇ..?<br /> <strong>-–ವಿಜಯಕಾಂತ ಪಾಟೀಲ, ಕ್ಯಾಸನೂರು, (ಹಾನಗಲ್)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size:48px;">ಯ</span>ಥಾಪ್ರಕಾರ ವರ್ಷಕ್ಕೊಮ್ಮೆ ಸಾಹಿತ್ಯ ಸಮ್ಮೇಳನ ಬರುತ್ತದೆ, ಹೋಗುತ್ತದೆ. ಅಧ್ಯಕ್ಷರ ಮಾತುಗಳು ಆಡಿಯಾದ ಮೇಲೆ ಕಳೆದೂ ಹೋಗುತ್ತಿವೆ. ನಿರ್ಣಯಗಳೂ ಪಾಸಾಗುತ್ತವೆ. ಜಾರಿಗೆ ಬಾರದೇ ಫೇಲೂ ಆಗುತ್ತಿವೆ. ಹಾಗೆಯೇ ಈ ಮಾತು ಮತ್ತು ನಿರ್ಣಯಗಳ ದಯನೀಯ ಸ್ಥಿತಿಗೆ ಯಾರು ಕಾರಣರು? ಈ ಪ್ರಶ್ನೆಗೆ ಉತ್ತರವನ್ನು ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಇವೆಲ್ಲ ಕಾರ್ಯಗತವಾಗಲಿ ಎನ್ನುವ ಬೇಡಿಕೆಗೆ ಮಾತ್ರ ಶತಮಾನದ ‘ಸಂಭ್ರಮ’...!<br /> <br /> ಸಮ್ಮೇಳನಾಧ್ಯಕ್ಷರ ಮಾತುಗಳಿಗೆ ಯಾವಾಗಿನಿಂದಲೂ ಸಮಯ ಪರಿಪಾಲನೆಯ ನೆಪದಲ್ಲಿ ಕತ್ತರಿ ಪ್ರಯೋಗದ ಶಿಕ್ಷೆ ನೀಡುತ್ತಲೂ ಬರಲಾಗಿದೆ. ಈ ಕುರಿತು ಪಾಟೀಲ ಪುಟ್ಟಪ್ಪ ತಾವು ಸಮ್ಮೇಳನಾಧ್ಯಕ್ಷರಾದ ಹೊತ್ತಲ್ಲಿ ಆಗಿನ ಮುಖ್ಯಮಂತ್ರಿಗಳನ್ನೇ ತರಾಟೆ ತೆಗೆದುಕೊಂಡಿದ್ದು ಇತಿಹಾಸದ ಒಂದು ಭಾಗ ಮಾತ್ರವಾಗಿ ಉಳಿದು ಯಥಾ ಸ್ಥಿತಿ ಮುಂದುವರಿದಿದೆ. ಹೌದು, ಹಾಗಾದರೆ ಸದ್ಯ ಪರಿಷತ್ತಾದರೂ ಈಗ ಈ ಕುರಿತು ಏನು ಮಾಡಬೇಕು..? ಎಂಬುದಕ್ಕೆ ನನ್ನದೊಂದು ಸಲಹೆ ಏನೆಂದರೆ: ಈವರೆಗೂ ನಡೆದ ಎಂಬತ್ತು ಸಮ್ಮೇಳನಗಳ ಅಧ್ಯಕ್ಷರ ಭಾಷಣಗಳನ್ನು ಹಲವು ಸಂಪುಟಗಳಲ್ಲಿ ಸಾಹಿತ್ಯ ಪರಿಷತ್ತು ಹೊರತರಬೇಕು.</p>.<p>ಈ ಯೋಜನೆಗೆ ಸರ್ಕಾರವೂ ತುಟಿಯೆರಡು ಮಾಡದೇ ಸಹಕರಿಸಬೇಕು. ಹಾಗೇ, ಆ ಕೃತಿಗಳು ಸುಲಭ ಬೆಲೆಯಲ್ಲಿ ಶ್ರೀಮಾನ್ ಕನ್ನಡಿಗನಿಗೆ ದೊರಕುವಂತಾಗಬೇಕು. ಪರಿಷತ್ತು ಮತ್ತು ಸರ್ಕಾರಕ್ಕೆ ಈ ಕೆಲಸ ಆಗದಿದ್ದರೆ, ಖಾಸಗಿ ಪ್ರಕಾಶನ ಸಂಸ್ಥೆಗಳಾದರೂ ಈ ಹೊರೆ ಹೊತ್ತು ಮೌಲಿಕವಾದ ಕನ್ನಡ ಕಟ್ಟೋಣದ ಬರೀ ಮಾತಲ್ಲದ ಕನ್ನಡ ನೆತ್ತರಿನ ಈ ನುಡಿಗಳನ್ನು ಪ್ರಕಟಿಸಲು ಮುಂದಾದಲ್ಲಿ ಅವು ಕನ್ನಡ ಬದುಕಿರುವವರೆಗೂ ಕನ್ನಡದ ಭಗವದ್ಗೀತೆಯಾಗಿ ಉಳಿಯಬಲ್ಲವು. ಸಮ್ಮೇಳನದ ನಿರ್ಣಯಗಳನ್ನು ಈಗಾಗಲೇ ಬೆಂಗಳೂರಿನ ಸುಮುಖ ಪ್ರಕಾಶನ ಹೊರತಂದಿದ್ದು ಶ್ಲಾಘನೀಯವೂ ಹೌದು. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಲಿ ಎಂಬ ಕೂಗಿಗೆ ಮನ್ನಣೆ ಸಿಗಬಹುದೇ..?<br /> <strong>-–ವಿಜಯಕಾಂತ ಪಾಟೀಲ, ಕ್ಯಾಸನೂರು, (ಹಾನಗಲ್)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>