ನಡೆದಾಡುವ ಕನ್ನಡ ವಿಶ್ವಕೋಶವೆಂದೇ ವಿಖ್ಯಾತರಾದ ಭಾಷಾ ತಜ್ಞ, ಶತಾಯುಷಿ ಪ್ರೊ.ಜಿ ವೆಂಕಟಸುಬ್ಬಯ್ಯ ಇನ್ನು ನೆನಪು ಮಾತ್ರ. ಸಾರಸ್ವತ ಲೋಕದ ಮಹಾನ್ ಸಾಧಕನನ್ನು ಚಿತ್ರಗಳ ಮೂಲಕ ಕಟ್ಟಿಕೊಡುವ ಯತ್ನ ಇಲ್ಲಿದೆ. (ಪ್ರಜಾವಾಣಿ ಎಕ್ಸ್ಕ್ಲೂಸಿವ್ಚಿತ್ರಗಳು).ಓದಿ:ನಿಘಂಟು ತಜ್ಞ, ಶತಾಯುಷಿ ಪದ್ಮಶ್ರೀ ಪ್ರೊ.ಜಿ ವೆಂಕಟಸುಬ್ಬಯ್ಯ ಇನ್ನಿಲ್ಲ
1965ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಜಿ.ವೆಂಕಟಸುಬ್ಬಯ್ಯ– ಪ್ರಜಾವಾಣಿ ಸಂಗ್ರಹ ಚಿತ್ರ
ADVERTISEMENT
2005ರ ಡಿಸೆಂಬರ್ನಲ್ಲಿ ನಡೆದ ಕನ್ನಡ ವಿಶ್ವವಿದ್ಯಾಲಯ ಹಂಪಿಯ ನುಡಿಹಬ್ಬದಲ್ಲಿ ಪ್ರೊ. ಜಿ ವೆಂಕಟಸುಬ್ಬಯ್ಯ ಅವರಿಗೆ ಅಂದಿನ ರಾಜ್ಯಪಾಲರಾದ ಟಿ.ಎನ್ ಚತುರ್ವೇದಿಯವರು ನಾಡೋಜ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು .ಕುಲಪತಿ ಡಾ . ಬಿಎ ವಿವೇಕ ರೈ ಮತ್ತು ಮುಖ್ಯ ಅತಿಥಿ ಜಸ್ಟಿಸ್ ಶಿವರಾಜ ಪಾಟೀಲ್ ಅವರು ಚಿತ್ರದಲ್ಲಿ ಇದ್ದಾರೆ. – ಚಿತ್ರ ಕೃಪೆ: ಗಣೇಶ ಯಾಜಿ , ಕವಿವಿ ಹಂಪಿ
ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಜತೆಗೆ ಜಿ.ವೆಂಕಟಸುಬ್ಬಯ್ಯ – ಪ್ರಜಾವಾಣಿ ಸಂಗ್ರಹ ಚಿತ್ರ
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜತೆ ‘ಜೀವಿ’ – ಪ್ರಜಾವಾಣಿ ಸಂಗ್ರಹ ಚಿತ್ರ
77ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ಜತೆ ಜಿ.ವೆಂಕಟಸುಬ್ಬಯ್ಯ – ಪ್ರಜಾವಾಣಿ ಸಂಗ್ರಹ ಚಿತ್ರ
1965ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಜಿ.ವೆಂಕಟಸುಬ್ಬಯ್ಯ – ಪ್ರಜಾವಾಣಿ ಸಂಗ್ರಹ ಚಿತ್ರ
ಪತ್ನಿ ಜತೆ ಜಿ.ವೆಂಕಟಸುಬ್ಬಯ್ಯನವರು – 2-8-1968ರ ಪ್ರಜಾವಾಣಿ ಸಂಗ್ರಹ ಚಿತ್ರ