ಸಾಂಸ್ಕೃತಿಕ ನೀತಿಯು ಎಲ್ಲ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳನ್ನು ಏಕರೂಪದಲ್ಲಿ ಕಾಣಬೇಕು. ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಲಲಿತಕಲಾ ಅಕಾಡೆಮಿಗಳು ವರ್ಷಕ್ಕೆ ಒಂದು ತಿಂಗಳು ಕಡ್ಡಾಯವಾಗಿ ಗಡಿಯಂಚಿನಲ್ಲಿ ಹಾಗೂ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ ಹಾಗೂ ಗೋವಾ ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆ ಮೂಲಕ ಅಲ್ಲಿನ ಕನ್ನಡಿಗರಲ್ಲಿನ ಅಸುರಕ್ಷ ಭಾವನೆಯನ್ನು ತೆಗೆದುಹಾಕಲು ಪ್ರಯತ್ನಿಸಬೇಕು.
ಬೆಂಗಳೂರಿನ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸುವ ಸಂಪ್ರದಾಯಕ್ಕೆ ಕೊನೆ ಹಾಡಿ ಇತರ ಜಿಲ್ಲೆಗಳಲ್ಲಿಯೂ ಸಮಾರಂಭಗಳನ್ನು ನಡೆಸಬೇಕು. ಅತ್ತಿಮಬ್ಬೆ ಪ್ರಶಸ್ತಿಯನ್ನು ಲಕ್ಕುಂಡಿಯಲ್ಲಿ, ಪಂಪ ಪ್ರಶಸ್ತಿಯನ್ನು ಅಣ್ಣಿಗೇರಿಯಲ್ಲಿ ನೀಡಲು ಸರ್ಕಾರ ಮುಂದಾಗಬೇಕು.