<p>ಸಾಹಿತ್ಯ ಶ್ರೇಷ್ಠತೆಯ ವ್ಯಸನ ಏನೆಲ್ಲಾ ಮಾಡಿಸಬಹುದೆಂಬುದಕ್ಕೆ `ಧಾರವಾಡದ ಸಾಹಿತ್ಯ ಉತ್ಸವ' ಇತ್ತೀಚಿನ ತಾಜಾ ಉದಾಹರಣೆ.<br /> `ಸಾಹಿತ್ಯ ಸಂಭ್ರಮ'ದಲ್ಲಿ ಎಲಿಟಿಸಂ ಧೋರಣೆಯಿದೆ. ಪದೇ ಪದೇ ಕನ್ನಡದ ಸಾಹಿತ್ಯಕ ಸಂದರ್ಭದಲ್ಲಿ ಎದ್ದೇಳುತ್ತಿರುವ ಇಂತಹ ವಿವಾದಗಳನ್ನು ಇನ್ನಷ್ಟು ಗಂಭೀರವಾದ ಸಂವಾದವಾಗಿಸಿ ಪರೀಕ್ಷಿಸಬೇಕಾದ ಜರೂರಿ ಯುವಕರ ಮುಂದಿದೆ.</p>.<p>ಬಂಡಾಯ ಪಂಥದ ಆಶಯವನ್ನು ಒಪ್ಪಿಯೂ ಅದರ ವಾಚ್ಯಗುಣವನ್ನು ಅಮಾನತ್ತಿನಲ್ಲಿರಿಸುವ, ನವ್ಯದ ಕಸುಬುಗಾರಿಕೆಯನ್ನು ಅನುಸರಿಸಿಯೂ ಅದರ ವ್ಯಕ್ತಿಗತ ಸಾಹಿತ್ಯಕ ನಿಲುವನ್ನು ನಿರಾಕರಿಸುವ ನಮ್ಮಂತಹ ಹೊಸಕಾಲದ ಬರಹಗಾರರ ತಾತ್ವಿಕತೆ ಈ ನೆವದಲ್ಲಾದರೂ ಪ್ರಕಟಗೊಳ್ಳಬೇಕಿದೆ.<br /> <br /> ಚಂಪಾರಂತಹ ಹಿರಿಯರು ಉತ್ಸವದಲ್ಲಿ ಭಾಗವಹಿಸಿ ಬರುತ್ತೇನೆನ್ನುವುದು, ಕೆ.ವಿ.ತಿರುಮಲೇಶ ರಂತವರು ಸಾರಾಸಗಟಾಗಿ ತಿರಸ್ಕರಿಸಿರುವುದರ ಭಯಂಕರ ವೈರುಧ್ಯದ ಸಂಕೀರ್ಣತೆ ಅರ್ಥಮಾಡಿಕೊಳ್ಳಬೇಕು. ನನಗೆ ಒಟ್ಟಾರೆ ಅನ್ನಿಸುವುದು ವರ್ತಮಾನದ ಕನ್ನಡ ಸಾಹಿತ್ಯದ ಧೋರಣೆಗಳು ಬದಲಾಗುತ್ತಿವೆ. ಹೊಸ ಗಾಳಿ ಬೀಸುತ್ತಿದೆ. ನಾವು ಸರಿಯಾಗಿ ಗಮನಿಸುತ್ತಿಲ್ಲ.</p>.<p>ಈಗ ಮಾಡಬೇಕಾಗಿರುವುದು ಸ್ವೀಕರಿಸುವ ತಿರಸ್ಕರಿಸುವ ಸರಳ ಕ್ರಿಯೆಯ ಬದಲು ಹೊಸಬರು ಈ ಇವತ್ತಿನ ಹೊಸ ಟ್ರೆಂಡ್ನ ಸಾಮಾನ್ಯ ಗುಣಲಕ್ಷಣಗಳನ್ನು(ಪಂಥಾತೀತತೆ!?) ಕ್ರೋಢೀಕರಿಸಿ ನವಸಾಹಿತ್ಯಕ ಪಂಥದ ಉದಯವನ್ನು ಸಾರಬೇಕಾಗಿರುವುದು.<br /> ಇಂಗ್ಲಿಷ್ ಮೀಡಿಯಾ ಹಾಗೂ ಬೂಕರಿನಂತಹ ಹೆಸರಿನ ಪ್ರಶಸ್ತಿಗಳ ಮೂಲಭೂತ ತಂತ್ರವಾಗಿರುವ ಗಿಮಿಕ್ ಎಲ್ಲಾ ಕಡೆ ಹಬ್ಬುತ್ತಿರುವುದು ಕಳವಳಕಾರಿ ಸಂಗತಿ.</p>.<p>ಸಾಹಿತ್ಯ ಸೇವೆಯಲ್ಲೂ ದುಡ್ಡಿದ್ದವರು ಥೈಲಿ ಹಿಡಿದು ಬಂದು ತಮ್ಮ ಬೇಳೆ ಕಾಳು ಬೇಯಿಸಿಕೊಂಡು ಹೋಗಬಹುದಾದರೆ ಇದೊಂದು ರೀತಿ ಮತ್ತೆ ಆಸ್ಥಾನ ಕವಿ-ಕಲಾವಿದರನ್ನು ಸೃಷ್ಟಿಸುವ ಖಾಸಗಿ ಪ್ರಭುತ್ವದ (ಬಂಡವಾಳಗಾರರ) ಪುರಾತನ ಗುಲಾಮಗಿರಿಯ ನವ ಅವತರಿಣಿಕೆಯಾಗುವ ಅಪಾಯ ಬಹುದೂರವಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಹಿತ್ಯ ಶ್ರೇಷ್ಠತೆಯ ವ್ಯಸನ ಏನೆಲ್ಲಾ ಮಾಡಿಸಬಹುದೆಂಬುದಕ್ಕೆ `ಧಾರವಾಡದ ಸಾಹಿತ್ಯ ಉತ್ಸವ' ಇತ್ತೀಚಿನ ತಾಜಾ ಉದಾಹರಣೆ.<br /> `ಸಾಹಿತ್ಯ ಸಂಭ್ರಮ'ದಲ್ಲಿ ಎಲಿಟಿಸಂ ಧೋರಣೆಯಿದೆ. ಪದೇ ಪದೇ ಕನ್ನಡದ ಸಾಹಿತ್ಯಕ ಸಂದರ್ಭದಲ್ಲಿ ಎದ್ದೇಳುತ್ತಿರುವ ಇಂತಹ ವಿವಾದಗಳನ್ನು ಇನ್ನಷ್ಟು ಗಂಭೀರವಾದ ಸಂವಾದವಾಗಿಸಿ ಪರೀಕ್ಷಿಸಬೇಕಾದ ಜರೂರಿ ಯುವಕರ ಮುಂದಿದೆ.</p>.<p>ಬಂಡಾಯ ಪಂಥದ ಆಶಯವನ್ನು ಒಪ್ಪಿಯೂ ಅದರ ವಾಚ್ಯಗುಣವನ್ನು ಅಮಾನತ್ತಿನಲ್ಲಿರಿಸುವ, ನವ್ಯದ ಕಸುಬುಗಾರಿಕೆಯನ್ನು ಅನುಸರಿಸಿಯೂ ಅದರ ವ್ಯಕ್ತಿಗತ ಸಾಹಿತ್ಯಕ ನಿಲುವನ್ನು ನಿರಾಕರಿಸುವ ನಮ್ಮಂತಹ ಹೊಸಕಾಲದ ಬರಹಗಾರರ ತಾತ್ವಿಕತೆ ಈ ನೆವದಲ್ಲಾದರೂ ಪ್ರಕಟಗೊಳ್ಳಬೇಕಿದೆ.<br /> <br /> ಚಂಪಾರಂತಹ ಹಿರಿಯರು ಉತ್ಸವದಲ್ಲಿ ಭಾಗವಹಿಸಿ ಬರುತ್ತೇನೆನ್ನುವುದು, ಕೆ.ವಿ.ತಿರುಮಲೇಶ ರಂತವರು ಸಾರಾಸಗಟಾಗಿ ತಿರಸ್ಕರಿಸಿರುವುದರ ಭಯಂಕರ ವೈರುಧ್ಯದ ಸಂಕೀರ್ಣತೆ ಅರ್ಥಮಾಡಿಕೊಳ್ಳಬೇಕು. ನನಗೆ ಒಟ್ಟಾರೆ ಅನ್ನಿಸುವುದು ವರ್ತಮಾನದ ಕನ್ನಡ ಸಾಹಿತ್ಯದ ಧೋರಣೆಗಳು ಬದಲಾಗುತ್ತಿವೆ. ಹೊಸ ಗಾಳಿ ಬೀಸುತ್ತಿದೆ. ನಾವು ಸರಿಯಾಗಿ ಗಮನಿಸುತ್ತಿಲ್ಲ.</p>.<p>ಈಗ ಮಾಡಬೇಕಾಗಿರುವುದು ಸ್ವೀಕರಿಸುವ ತಿರಸ್ಕರಿಸುವ ಸರಳ ಕ್ರಿಯೆಯ ಬದಲು ಹೊಸಬರು ಈ ಇವತ್ತಿನ ಹೊಸ ಟ್ರೆಂಡ್ನ ಸಾಮಾನ್ಯ ಗುಣಲಕ್ಷಣಗಳನ್ನು(ಪಂಥಾತೀತತೆ!?) ಕ್ರೋಢೀಕರಿಸಿ ನವಸಾಹಿತ್ಯಕ ಪಂಥದ ಉದಯವನ್ನು ಸಾರಬೇಕಾಗಿರುವುದು.<br /> ಇಂಗ್ಲಿಷ್ ಮೀಡಿಯಾ ಹಾಗೂ ಬೂಕರಿನಂತಹ ಹೆಸರಿನ ಪ್ರಶಸ್ತಿಗಳ ಮೂಲಭೂತ ತಂತ್ರವಾಗಿರುವ ಗಿಮಿಕ್ ಎಲ್ಲಾ ಕಡೆ ಹಬ್ಬುತ್ತಿರುವುದು ಕಳವಳಕಾರಿ ಸಂಗತಿ.</p>.<p>ಸಾಹಿತ್ಯ ಸೇವೆಯಲ್ಲೂ ದುಡ್ಡಿದ್ದವರು ಥೈಲಿ ಹಿಡಿದು ಬಂದು ತಮ್ಮ ಬೇಳೆ ಕಾಳು ಬೇಯಿಸಿಕೊಂಡು ಹೋಗಬಹುದಾದರೆ ಇದೊಂದು ರೀತಿ ಮತ್ತೆ ಆಸ್ಥಾನ ಕವಿ-ಕಲಾವಿದರನ್ನು ಸೃಷ್ಟಿಸುವ ಖಾಸಗಿ ಪ್ರಭುತ್ವದ (ಬಂಡವಾಳಗಾರರ) ಪುರಾತನ ಗುಲಾಮಗಿರಿಯ ನವ ಅವತರಿಣಿಕೆಯಾಗುವ ಅಪಾಯ ಬಹುದೂರವಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>