ಗೆಲುವಿಗೆ ಪ್ರಯತ್ನಿಸುತ್ತೇವೆ: ಮಯಂಕ್
‘ಫೈನಲ್ನಲ್ಲಿ ಶತಕ ಗಳಿಸುವುದು ಖುಷಿ ನೀಡುತ್ತದೆ. ಆದರೆ ಅಕೀಬ್ ನಬಿ ದಾರ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ತಂಡದ ಬೌಲರ್ಗಳು ಉತ್ತಮವಾಗಿ ಬೌಲಿಂಗ್ ಮಾಡಿ ಈ ಪಂದ್ಯದಲ್ಲಿ ನಮ್ಮ ಮೇಲೆ ಒತ್ತಡ ಹೇರಿದರು’ ಎಂದು ಕರ್ನಾಟಕ ತಂಡದ ಆರಂಭಿಕ ಬ್ಯಾಟರ್ ಮಯಂಕ್ ಅಗರವಾಲ್ ಹೇಳಿದರು.
‘ಈ ಪಂದ್ಯದಲ್ಲಿ ನಾವು ಬಹಳ ಹಿಂದೆ ಇದ್ದೇವೆ. ಕೊನೆಯ ದಿನದ ಆಟ ಬಾಕಿ ಇದೆ. ಜಮ್ಮು-ಕಾಶ್ಮೀರ ತಂಡದ ಉಳಿದ ವಿಕೆಟ್ಗಳನ್ನು ಬೇಗನೇ ಪಡೆದು ಲೀಗ್ ಹಂತದಲ್ಲಿ ಪಂಜಾಬ್ ವಿರುದ್ಧ ಆಡಿದ ರೀತಿ ಆಡಿದರೆ ಗೆಲ್ಲುವ ಅವಕಾಶವಿದೆ. ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತೇವೆ’ ಎಂದರು.