ಪಂಚರಾಜ್ಯಗಳ ಚುನಾವಣೆ ಸಮಯದಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಹರೀಶ್ ರಾವತ್ ಅವರನ್ನು ‘ಬಾಹುಬಲಿ’ಯಾಗಿಸಿರುವ ವಿಡಿಯೊ ಇದೀಗ ವೈರಲ್ ಆಗಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೂ ಇಲ್ಲಿ ಪಾತ್ರಧಾರಿಗಳಾಗಿದ್ದಾರೆ.
‘ಬಾಹುಬಲಿ’ ಚಿತ್ರದಲ್ಲಿ ಪ್ರಭಾಸ್ ಶಿವಲಿಂಗವನ್ನು ಎತ್ತುವಂತೆ ಈ ವಿಡಿಯೊದಲ್ಲಿ ರಾವತ್ ಉತ್ತಾರಖಂಡ ರಾಜ್ಯವನ್ನೇ ಎತ್ತಿಕೊಂಡು ಸಾಗುತ್ತಾರೆ. ಇತರ ರಾಜಕೀಯ ಮುಖಂಡರು ಈ ದೃಶ್ಯವನ್ನು ಆಶ್ಚರ್ಯದಿಂದ ನೋಡುತ್ತಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ಅಮಿತ್ ಶಾ ಮತ್ತು ಮೋದಿ ಬೆರಗುಗಣ್ಣಿಂದ ನೋಡುತ್ತಾರೆ.
ಹರೀಶ್ ರಾವತ್ ಉತ್ತರಾಖಂಡದ ರಕ್ಷಕ ಎಂಬಂತೆ ಬಿಂಬಿಸಿರುವ ಈ ವಿಡಿಯೊವನ್ನು ಫೇಸ್ಬುಕ್ನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಉತ್ತರಾಖಂಡ ವಿಧಾನ ಸಭೆಗೆ ಫೆ.15ರಂದು ಮತದಾನ ನಡೆಯಲಿದೆ.