<p><strong>ಮುಂಬೈ</strong>: ಟ್ವಿಂಟಿ–20ಕ್ರಿಕೆಟ್ ಭರಾಟೆಯಲ್ಲಿ ಏಕದಿನ ಮಾದರಿಯ ಕ್ರಿಕೆಟ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಭಾರತ ತಂಡದ ಆಫ್ಸ್ಪಿನ್ನರ್ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.</p>.<p>ವಾನಿ ಅ್ಯಂಡ್ ಟಫರ್ಸ್ ಕ್ರಿಕೆಟ್ ಕ್ಲಬ್ ಪಾಡ್ಕಾಸ್ಟ್ನಲ್ಲಿ ಮಾತನಾಡಿರುವ ಅವರು, ‘ಏಕದಿನ ಕ್ರಿಕೆಟ್ನ ಸೊಬಗೆಂದರೆ ಆಟದ ಏರಿಳಿತಗಳು. ಈ ಮಾದರಿಯಲ್ಲಿ ಬೌಲರ್ಗಳಿಗೂ ತಮ್ಮ ಸಾಮರ್ಥ್ಯ ಪಣಕ್ಕೊಡ್ಡುವ ಸೂಕ್ತ ವೇದಿಕೆ ಇರುತ್ತದೆ. ನೋಡುಗರಿಗೂ ಕ್ರಿಕೆಟ್ ಆಟವನ್ನು ಕಡಿಮೆ ಅವಧಿಯಲ್ಲಿ ಆಳವಾಗಿ ತಿಳಿದುಕೊಳ್ಳುವಂತಹ ಅವಕಾಶ ಇರುತ್ತದೆ’ ಎಂದರು.</p>.<p>‘ಏಕದಿನ ಮಾದರಿಯ ಕ್ರಿಕೆಟ್ ಈಗ ಟಿ20 ಮಾದರಿಯ ವಿಸ್ತೃತ ರೂಪವಾಗುತ್ತಿದೆ. 50–50 ಆಟದಲ್ಲಿ ಈ ಮುಂಚಿನ ಸೊಬಗು ಕಾಣುತ್ತಿಲ್ಲ. ಪಂದ್ಯದ ಒಂದು ಹಂತದಲ್ಲಿ ಏಕತಾನತೆ ಕಾಡುವುದರಿಂದ ಟಿವಿ ಸ್ವಿಚ್ ಆಫ್ ಮಾಡಿಬಿಡುತ್ತೇವೆ’ ಎಂದಿದ್ಧಾರೆ.</p>.<p>‘ಸದ್ಯದ ಏಕದಿನ ಮಾದರಿಯಲ್ಲಿ ಎರಡು ಹೊಸ ಚೆಂಡುಗಳನ್ನು ಬಳಸಲಾಗುತ್ತಿದೆ. ಆದರೆ, ಮೊದಲಿನಂತೆ ಒಂದೇ ಚೆಂಡು ಬಳಸಿದರೆ ಒಳ್ಳೆಯದು’ ಎಂದು ಸಲಹೆ ನೀಡಿದರು.</p>.<p>ಸ್ವಿಚ್ಹಿಟ್ಗೂ ಇರಲಿ ಎಲ್ಬಿಡಬ್ಲ್ಯು</p>.<p>ಲೆಗ್ಸ್ಟಂಪ್ ಲೈನ್ನಿಂದ ಹೊರಗೆ ನೆಲಸ್ಪರ್ಶ ಮಾಡುವ ಎಸೆತವು ಬ್ಯಾಟರ್ ಸ್ವಿಚ್ ಹಿಟ್ ಮಾಡುವ ಪ್ರಯತ್ನದಲ್ಲಿ ವಿಫಲವಾಗಿ ಪ್ಯಾಡ್ಗೆ ಅಪ್ಪಳಿಸಿದರೆ ಎಲ್ಬಿಡಬ್ಲ್ಯು ನೀಡಬೇಕು ಎಂದು ಅಶ್ವಿನ್ ಹೇಳಿದ್ದಾರೆ.</p>.<p>‘ಬ್ಯಾಟರ್ಗಳು ಸ್ವಿಚ್ ಹಿಟ್ ಆಡಲಿ, ರಿವರ್ಸ್ ಸ್ವೀಪ್ ಆಡಲಿ. ಆದರೆ, ಅವರು ತಮ್ಮ ಶೈಲಿಯನ್ನು ಬದಲಿಸಿ ತಿರುಗಲು ಅವಕಾಶವಿದೆ. ಆದರೆ ಬೌಲರ್ಗೆ ಎಲ್ಬಿಡಬ್ಲ್ಯು ತೀರ್ಪು ಪಡೆಯುವ ಅವಕಾಶ ಏಕಿಲ್ಲ. ಈ ರೀತಿಯ ತಾರತಮ್ಯ ಏಕೆ? ಬ್ಯಾಟರ್ ಮತ್ತು ಬೌಲರ್ ಇಬ್ಬರಿಗೂ ಸಮಾನ ಅವಕಾಶ ನೀಡಬೇಕು’ ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಹೇಳಿದ್ದಾರೆ.</p>.<p>‘ಈಚೆಗೆ ನಡೆದ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಸುಮಾರು 10 ಬಾರಿ ರಿವರ್ಸ್ ಸ್ವೀಪ್ ಆಡಲು ಪ್ರಯತ್ನಿಸಿದರು. ಅದರಲ್ಲಿ ಸುಮಾರು ಒಂಬತ್ತು ಸಲ ಅವರು ಯಶಸ್ವಿಯಾಗಲಿಲ್ಲ. ಆಗ ಚೆಂಡು ಪ್ಯಾಡ್ಗೆ ತಗುಲಿತ್ತು’ ಎಂದು ವಿಶ್ಲೇಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಟ್ವಿಂಟಿ–20ಕ್ರಿಕೆಟ್ ಭರಾಟೆಯಲ್ಲಿ ಏಕದಿನ ಮಾದರಿಯ ಕ್ರಿಕೆಟ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಭಾರತ ತಂಡದ ಆಫ್ಸ್ಪಿನ್ನರ್ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.</p>.<p>ವಾನಿ ಅ್ಯಂಡ್ ಟಫರ್ಸ್ ಕ್ರಿಕೆಟ್ ಕ್ಲಬ್ ಪಾಡ್ಕಾಸ್ಟ್ನಲ್ಲಿ ಮಾತನಾಡಿರುವ ಅವರು, ‘ಏಕದಿನ ಕ್ರಿಕೆಟ್ನ ಸೊಬಗೆಂದರೆ ಆಟದ ಏರಿಳಿತಗಳು. ಈ ಮಾದರಿಯಲ್ಲಿ ಬೌಲರ್ಗಳಿಗೂ ತಮ್ಮ ಸಾಮರ್ಥ್ಯ ಪಣಕ್ಕೊಡ್ಡುವ ಸೂಕ್ತ ವೇದಿಕೆ ಇರುತ್ತದೆ. ನೋಡುಗರಿಗೂ ಕ್ರಿಕೆಟ್ ಆಟವನ್ನು ಕಡಿಮೆ ಅವಧಿಯಲ್ಲಿ ಆಳವಾಗಿ ತಿಳಿದುಕೊಳ್ಳುವಂತಹ ಅವಕಾಶ ಇರುತ್ತದೆ’ ಎಂದರು.</p>.<p>‘ಏಕದಿನ ಮಾದರಿಯ ಕ್ರಿಕೆಟ್ ಈಗ ಟಿ20 ಮಾದರಿಯ ವಿಸ್ತೃತ ರೂಪವಾಗುತ್ತಿದೆ. 50–50 ಆಟದಲ್ಲಿ ಈ ಮುಂಚಿನ ಸೊಬಗು ಕಾಣುತ್ತಿಲ್ಲ. ಪಂದ್ಯದ ಒಂದು ಹಂತದಲ್ಲಿ ಏಕತಾನತೆ ಕಾಡುವುದರಿಂದ ಟಿವಿ ಸ್ವಿಚ್ ಆಫ್ ಮಾಡಿಬಿಡುತ್ತೇವೆ’ ಎಂದಿದ್ಧಾರೆ.</p>.<p>‘ಸದ್ಯದ ಏಕದಿನ ಮಾದರಿಯಲ್ಲಿ ಎರಡು ಹೊಸ ಚೆಂಡುಗಳನ್ನು ಬಳಸಲಾಗುತ್ತಿದೆ. ಆದರೆ, ಮೊದಲಿನಂತೆ ಒಂದೇ ಚೆಂಡು ಬಳಸಿದರೆ ಒಳ್ಳೆಯದು’ ಎಂದು ಸಲಹೆ ನೀಡಿದರು.</p>.<p>ಸ್ವಿಚ್ಹಿಟ್ಗೂ ಇರಲಿ ಎಲ್ಬಿಡಬ್ಲ್ಯು</p>.<p>ಲೆಗ್ಸ್ಟಂಪ್ ಲೈನ್ನಿಂದ ಹೊರಗೆ ನೆಲಸ್ಪರ್ಶ ಮಾಡುವ ಎಸೆತವು ಬ್ಯಾಟರ್ ಸ್ವಿಚ್ ಹಿಟ್ ಮಾಡುವ ಪ್ರಯತ್ನದಲ್ಲಿ ವಿಫಲವಾಗಿ ಪ್ಯಾಡ್ಗೆ ಅಪ್ಪಳಿಸಿದರೆ ಎಲ್ಬಿಡಬ್ಲ್ಯು ನೀಡಬೇಕು ಎಂದು ಅಶ್ವಿನ್ ಹೇಳಿದ್ದಾರೆ.</p>.<p>‘ಬ್ಯಾಟರ್ಗಳು ಸ್ವಿಚ್ ಹಿಟ್ ಆಡಲಿ, ರಿವರ್ಸ್ ಸ್ವೀಪ್ ಆಡಲಿ. ಆದರೆ, ಅವರು ತಮ್ಮ ಶೈಲಿಯನ್ನು ಬದಲಿಸಿ ತಿರುಗಲು ಅವಕಾಶವಿದೆ. ಆದರೆ ಬೌಲರ್ಗೆ ಎಲ್ಬಿಡಬ್ಲ್ಯು ತೀರ್ಪು ಪಡೆಯುವ ಅವಕಾಶ ಏಕಿಲ್ಲ. ಈ ರೀತಿಯ ತಾರತಮ್ಯ ಏಕೆ? ಬ್ಯಾಟರ್ ಮತ್ತು ಬೌಲರ್ ಇಬ್ಬರಿಗೂ ಸಮಾನ ಅವಕಾಶ ನೀಡಬೇಕು’ ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಹೇಳಿದ್ದಾರೆ.</p>.<p>‘ಈಚೆಗೆ ನಡೆದ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಸುಮಾರು 10 ಬಾರಿ ರಿವರ್ಸ್ ಸ್ವೀಪ್ ಆಡಲು ಪ್ರಯತ್ನಿಸಿದರು. ಅದರಲ್ಲಿ ಸುಮಾರು ಒಂಬತ್ತು ಸಲ ಅವರು ಯಶಸ್ವಿಯಾಗಲಿಲ್ಲ. ಆಗ ಚೆಂಡು ಪ್ಯಾಡ್ಗೆ ತಗುಲಿತ್ತು’ ಎಂದು ವಿಶ್ಲೇಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>