<p><strong>ಮುಂಬೈ: </strong>ಕರ್ನಾಟಕ ತಂಡ, ಶನಿವಾರ ಮುಂಬೈ ವಿರುದ್ಧ ಆರಂಭವಾದಕೂಚ್ ಬಿಹಾರ್ ಟ್ರೋಫಿ (19 ವರ್ಷದೊಳಗಿನವರ) ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ 185 ರನ್ಗಳಿಗೆ ಆಲೌಟ್ ಆಯಿತು. ದಿನದಾಟ ಮುಗಿದಾಗ ಮುಂಬೈ 2 ವಿಕೆಟ್ಗೆ 96 ರನ್ ಗಳಿಸಿತ್ತು.</p>.<p>ಬಾಂದ್ರಾ –ಕುರ್ಲಾ ಕಾಂಪ್ಲೆಕ್ಸ್ನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಟಾಸ್ ಗೆದ್ದ ಆತಿಥೇಯರು, ಕರ್ನಾಟಕವನ್ನು ಬ್ಯಾಟಿಂಗ್ಗೆ ಇಳಿಸಿದರು. ಒಂದು ಹಂತದಲ್ಲಿ 2 ವಿಕೆಟ್ಗೆ 84 ರನ್ ಗಳಿಸಿದ್ದ ಕರ್ನಾಟಕ ನಂತರ ನಿಯಮಿತವಾಗಿ ವಿಕೆಟ್ಗಳನ್ನು ಕಳೆದುಕೊಂಡಿತು. ನಾಯಕ ಹಾಗೂ ಆರಂಭ ಆಟಗಾರ ಲೋಚನ್ ಎಸ್.ಗೌಡ (92 ಎಸೆತ, 7 ಬೌಂಡರಿಗಳಿದ್ದ 47) ಮತ್ತು ಬ್ಯಾಟ್ಸ್ಮನ್ ಸ್ಮರಣ್ ಆರ್. (82 ಎಸೆತಗಳಲ್ಲಿ 57, 1 ಸಿ, 10 ಬೌಂ.) ಬಿಟ್ಟರೆ ಉಳಿದವರು 20ರ ಗಡಿ ದಾಟಲಿಲ್ಲ.</p>.<p>ಆತಿಥೇಯರು ಮೊದಲ ಇನಿಂಗ್ಸ್ ಮುನ್ನಡೆ ಗಳಿಸಲು ಇನ್ನೂ 89 ರನ್ ಗಳಿಸಬೇಕಾಗಿದೆ.</p>.<p><strong>ಸ್ಕೋರುಗಳು: ಕರ್ನಾಟಕ:</strong> 57.5 ಓವರುಗಳಲ್ಲಿ 185 (ಲೋಚನ್ ಎಸ್.ಗೌಡ 47, ಸ್ಮರಣ್ ಆರ್. 57; ತುಷಾರ್ ಕದಂ 37ಕ್ಕೆ3, ಧನಿತ್ ರಾವುತ್ 46ಕ್ಕೆ3, ಸೂರ್ಯಾನ್ಷ್ ಶೆಡ್ಗೆ 27ಕ್ಕೆ3); <strong>ಮುಂಬೈ: </strong>26 ಓವರುಗಳಲ್ಲಿ 2 ವಿಕೆಟ್ಗೆ 96 (ವರುಣ್ ಲಾವಂಡೆ 49, ಪ್ರಗ್ನೇಶ್ ಕಣಪಿಲ್ಲೇವರ್ ಬ್ಯಾಟಿಂಗ್ 25; ತಹಾ ಖಾನ್ 25ಕ್ಕೆ1, ಅಕಿಬ್ ಜವಾದ್ 29ಕ್ಕೆ1).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ: </strong>ಕರ್ನಾಟಕ ತಂಡ, ಶನಿವಾರ ಮುಂಬೈ ವಿರುದ್ಧ ಆರಂಭವಾದಕೂಚ್ ಬಿಹಾರ್ ಟ್ರೋಫಿ (19 ವರ್ಷದೊಳಗಿನವರ) ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ 185 ರನ್ಗಳಿಗೆ ಆಲೌಟ್ ಆಯಿತು. ದಿನದಾಟ ಮುಗಿದಾಗ ಮುಂಬೈ 2 ವಿಕೆಟ್ಗೆ 96 ರನ್ ಗಳಿಸಿತ್ತು.</p>.<p>ಬಾಂದ್ರಾ –ಕುರ್ಲಾ ಕಾಂಪ್ಲೆಕ್ಸ್ನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಟಾಸ್ ಗೆದ್ದ ಆತಿಥೇಯರು, ಕರ್ನಾಟಕವನ್ನು ಬ್ಯಾಟಿಂಗ್ಗೆ ಇಳಿಸಿದರು. ಒಂದು ಹಂತದಲ್ಲಿ 2 ವಿಕೆಟ್ಗೆ 84 ರನ್ ಗಳಿಸಿದ್ದ ಕರ್ನಾಟಕ ನಂತರ ನಿಯಮಿತವಾಗಿ ವಿಕೆಟ್ಗಳನ್ನು ಕಳೆದುಕೊಂಡಿತು. ನಾಯಕ ಹಾಗೂ ಆರಂಭ ಆಟಗಾರ ಲೋಚನ್ ಎಸ್.ಗೌಡ (92 ಎಸೆತ, 7 ಬೌಂಡರಿಗಳಿದ್ದ 47) ಮತ್ತು ಬ್ಯಾಟ್ಸ್ಮನ್ ಸ್ಮರಣ್ ಆರ್. (82 ಎಸೆತಗಳಲ್ಲಿ 57, 1 ಸಿ, 10 ಬೌಂ.) ಬಿಟ್ಟರೆ ಉಳಿದವರು 20ರ ಗಡಿ ದಾಟಲಿಲ್ಲ.</p>.<p>ಆತಿಥೇಯರು ಮೊದಲ ಇನಿಂಗ್ಸ್ ಮುನ್ನಡೆ ಗಳಿಸಲು ಇನ್ನೂ 89 ರನ್ ಗಳಿಸಬೇಕಾಗಿದೆ.</p>.<p><strong>ಸ್ಕೋರುಗಳು: ಕರ್ನಾಟಕ:</strong> 57.5 ಓವರುಗಳಲ್ಲಿ 185 (ಲೋಚನ್ ಎಸ್.ಗೌಡ 47, ಸ್ಮರಣ್ ಆರ್. 57; ತುಷಾರ್ ಕದಂ 37ಕ್ಕೆ3, ಧನಿತ್ ರಾವುತ್ 46ಕ್ಕೆ3, ಸೂರ್ಯಾನ್ಷ್ ಶೆಡ್ಗೆ 27ಕ್ಕೆ3); <strong>ಮುಂಬೈ: </strong>26 ಓವರುಗಳಲ್ಲಿ 2 ವಿಕೆಟ್ಗೆ 96 (ವರುಣ್ ಲಾವಂಡೆ 49, ಪ್ರಗ್ನೇಶ್ ಕಣಪಿಲ್ಲೇವರ್ ಬ್ಯಾಟಿಂಗ್ 25; ತಹಾ ಖಾನ್ 25ಕ್ಕೆ1, ಅಕಿಬ್ ಜವಾದ್ 29ಕ್ಕೆ1).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>