ಕ್ರಿಕೆಟ್ ಮಂಡಳಿಯ ಆಡಳಿತದ ಲೋಪಗಳನ್ನು ಪ್ರಾಯೋಜಕರು ಮತ್ತು ರಾಷ್ಟ್ರೀಯ ತಂಡದ ಆಟಗಾರರು ಟೀಕಿಸಿದ್ದರು. ತನಿಖಾ ವರದಿಯನ್ನು ಬಹಿರಂಗ ಮಾಡದೇ ಇರುವುದು ಮತ್ತು ಸೆಪ್ಟೆಂಬರ್ ಐದರಂದು ನಡೆಯಬೇಕಾಗಿದ್ದ ವಾರ್ಷಿಕ ಸಭೆಯನ್ನು ಮುಂದೂಡಿರುವುದು ಮಂಡಳಿಯ ಸ್ವಾರ್ಥಕ್ಕೆ ಹಿಡಿದ ಕನ್ನಡಿ ಎಂದು ಆಟಗಾರರು ಆರೋಪಿಸಿದ್ದರು. ಕಳೆದ ತಿಂಗಳಲ್ಲಿ ರಾಜೀನಾಮೆ ನೀಡಿದ ಅಧ್ಯಕ್ಷ ಕ್ರಿಸ್ ನೆಂಜಾನಿ ಅವರ ಸ್ಥಾನಕ್ಕೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವುದು ವಾರ್ಷಿಕ ಸಭೆಯ ಪ್ರಮುಖ ಅಂಶವಾಗಿತ್ತು.