ಛತ್ತೀಸಗಡ ಕ್ರಿಕೆಟ್ ಸಂಘವು ನಾಲ್ಕರ ಘಟ್ಟದಲ್ಲಿ ಬಾಂಗ್ಲಾ ಕ್ರಿಕೆಟ್ ಮಂಡಳಿಯ ವಿರುದ್ಧ ಜಯಿಸಿತ್ತು. ತಂಡದ ಜೀವನ್ಜ್ಯೋತ್ ಸಿಂಗ್, ಅಮನದೀಪ್ ಖರೆ, ರಿಷಭ್ ತಿವಾರಿ, ಅನುಜ್ ತಿವಾರಿ ಅವರು ತಂಡಕ್ಕೆ ಉತ್ತಮ ಕಾಣಿಕೆ ನೀಡುವ ಸಮರ್ಥರಾಗಿದ್ದಾರೆ. ಶುಭಂ ಅಗರವಾಲ್, ಪುನಿತ್ ದಾತೆ ಅವರು ಉತ್ತಮವಾಗಿ ಬೌಲಿಂಗ್ ಮಾಡಿದ್ದರು.