<p><strong>ಅಹಮದಾಬಾದ್</strong>: ಸತತ ಎರಡನೇ ಶತಕ ಗಳಿಸಿದ ದೇವದತ್ತ ಪಡಿಕ್ಕಲ್ ಮತ್ತು ಕರುಣ್ ನಾಯರ್ ಅಂದದ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಬಾರಿಸಿತು. </p>.<p>ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಟೂರ್ನಿಯ ಎ ಗುಂಪಿನ ಎರಡನೇ ಪಂದ್ಯದಲ್ಲಿ ಕರ್ನಾಟಕವು 8 ವಿಕೆಟ್ಗಳಿಂದ ಕೇರಳ ವಿರುದ್ಧ ಜಯಿಸಿತು. ಟೂರ್ನಿಯಲ್ಲಿ ಕರ್ನಾಟಕ ತಂಡವು ಸತತ ಎರಡನೇ ಪಂದ್ಯದಲ್ಲಿ ಗುರಿ ಬೆನ್ನಟ್ಟಿ ಗೆದ್ದಿತು. </p>.<p>ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಎಡಗೈ ವೇಗಿ ಅಭಿಲಾಷ್ ಶೆಟ್ಟಿ (59ಕ್ಕೆ3) ಹಾಗೂ ಸ್ಪಿನ್ನರ್ ಶ್ರೇಯಸ್ ಗೋಪಾಲ್ (61ಕ್ಕೆ2) ಅವರ ಅಮೋಘ ಬೌಲಿಂಗ್ ಬಲದಿಂದ ಕೇರಳ ತಂಡವು 50 ಓವರ್ಗಳಲ್ಲಿ 7 ವಿಕೆಟ್ಗಳೀಗೆ 284 ರನ್ ಗಳಿಸಿತು. ತಂಡದ ಮೂರು ವಿಕೆಟ್ಗಳು 49 ರನ್ಗಳಿಗೇ ಪತನವಾಗಿದ್ದವು. ಇದರಿಂದಾಗಿ ಕೇರಳ ತಂಡವು ಸಾಧಾರಣ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. ಆದರೆ, ಬಾಬಾ ಅಪರಾಜಿತ್ (71; 62ಎ, 4X8, 6X2) ಮತ್ತು ಮೊಹಮ್ಮದ್ ಅಜರುದ್ದೀನ್ (ಔಟಾಗದೇ 84; 58ಎ, 4X3, 6X4) ಅವರ ಬೀಸಾಟದಿಂದಾಗಿ ಹೋರಾಟದ ಮೊತ್ತ ಗಳಿಸಿತು. ಕೊನೆಯ ಹಂತದ ಓವರ್ಗಳಲ್ಲಿ ನಿಧೀಶ್ (ಅಜೇಯ 34) ಕೂಡ ಮಿಂಚಿದರು. </p>.<p>ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಎರಡನೇ ಓವರ್ನಲ್ಲಿ ಆಘಾತವಾಯಿತು. ನಾಯಕ ಮಯಂಕ್ ಅಗರವಾಲ್ ವಿಕೆಟ್ ಪಡೆದ ಅಖಿಲ್ ಸ್ಕಾರಿಯಾ ಕೇರಳಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಅವರ ಸಂತಸ ಬಹಳ ಹೊತ್ತು ಉಳಿಯಲಿಲ್ಲ. ದೇವದತ್ತ (124; 137ಎ, 4X12, 6X3) ಮತ್ತು ಕರುಣ್ ನಾಯರ್ (ಅಜೇಯ 130; 130ಎ, 4X14) ಅವರ ಎರಡನೇ ವಿಕೆಟ್ ಜೊತೆಯಾಟದಲ್ಲಿ 223 (236ಎ) ರನ್ ಸೇರಿಸಿ ಜಯವನ್ನು ಸುಲಭಗೊಳಿಸಿದರು. ಇದರಿಂದಾಗಿ ತಂಡವು 48.2 ಓವರ್ಗಳಲ್ಲಿ 2 ವಿಕೆಟ್ಗಳಿಗೆ 285 ರನ್ ಗಳಿಸಿತು. ಸ್ಮರಣ್ ರವಿಚಂದ್ರನ್ 16 ಎಸೆತಗಳಲ್ಲಿ ಔಟಾಗದೇ 25 ರನ್ ಗಳಿಸಿದರು. </p>.<p>ಟೂರ್ನಿಯ ಮೊದಲ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ 413 ರನ್ ಗುರಿ ಬೆನ್ನಟ್ಟಿದ್ದ ಕರ್ನಾಟಕ ಗೆದ್ದಿತ್ತು. ಆ ಪಂದ್ಯದಲ್ಲಿಯೂ ದೇವದತ್ತ ಭರ್ಜರಿ ಶತಕ ಹೊಡೆದಿದ್ದರು. ಇಲ್ಲಿಯೂ ಮಿಂಚಿದರು. ಎಡಗೈ ಬ್ಯಾಟರ್ ದೇವದತ್ತ ಸೊಗಸಾದ ಡ್ರೈವ್, ಪಂಚ್ ಮತ್ತು ಪುಲ್ಗಳನ್ನು ಪ್ರದರ್ಶಿಸಿದರು. ಬೌಲರ್ಗಳು ಅವರ ಆಟದ ಮುಂದೆ ಬಸವಳಿದರು. </p>.<p>ಇನ್ನೊಂದು ಬದಿಯಲ್ಲಿ ಅನುಭವಿ ಕರುಣ್ ಕೂಡ ಅಬ್ಬರಸಿದರು. 100ರ ಸ್ಟ್ರೈಕ್ರೇಟ್ನಲ್ಲಿ ರನ್ ಸೂರೆ ಮಾಡಿದರು. ಇದರಿಂದಾಗಿ ವಿಕೆಟ್ ಗಳಿಸಲು ಕೇರಳದ ಬೌಲರ್ಗಳಿಗೆ ಸಾಧ್ಯವಾಗಲಿಲ್ಲ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಹಮದಾಬಾದ್</strong>: ಸತತ ಎರಡನೇ ಶತಕ ಗಳಿಸಿದ ದೇವದತ್ತ ಪಡಿಕ್ಕಲ್ ಮತ್ತು ಕರುಣ್ ನಾಯರ್ ಅಂದದ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಬಾರಿಸಿತು. </p>.<p>ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಟೂರ್ನಿಯ ಎ ಗುಂಪಿನ ಎರಡನೇ ಪಂದ್ಯದಲ್ಲಿ ಕರ್ನಾಟಕವು 8 ವಿಕೆಟ್ಗಳಿಂದ ಕೇರಳ ವಿರುದ್ಧ ಜಯಿಸಿತು. ಟೂರ್ನಿಯಲ್ಲಿ ಕರ್ನಾಟಕ ತಂಡವು ಸತತ ಎರಡನೇ ಪಂದ್ಯದಲ್ಲಿ ಗುರಿ ಬೆನ್ನಟ್ಟಿ ಗೆದ್ದಿತು. </p>.<p>ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಎಡಗೈ ವೇಗಿ ಅಭಿಲಾಷ್ ಶೆಟ್ಟಿ (59ಕ್ಕೆ3) ಹಾಗೂ ಸ್ಪಿನ್ನರ್ ಶ್ರೇಯಸ್ ಗೋಪಾಲ್ (61ಕ್ಕೆ2) ಅವರ ಅಮೋಘ ಬೌಲಿಂಗ್ ಬಲದಿಂದ ಕೇರಳ ತಂಡವು 50 ಓವರ್ಗಳಲ್ಲಿ 7 ವಿಕೆಟ್ಗಳೀಗೆ 284 ರನ್ ಗಳಿಸಿತು. ತಂಡದ ಮೂರು ವಿಕೆಟ್ಗಳು 49 ರನ್ಗಳಿಗೇ ಪತನವಾಗಿದ್ದವು. ಇದರಿಂದಾಗಿ ಕೇರಳ ತಂಡವು ಸಾಧಾರಣ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. ಆದರೆ, ಬಾಬಾ ಅಪರಾಜಿತ್ (71; 62ಎ, 4X8, 6X2) ಮತ್ತು ಮೊಹಮ್ಮದ್ ಅಜರುದ್ದೀನ್ (ಔಟಾಗದೇ 84; 58ಎ, 4X3, 6X4) ಅವರ ಬೀಸಾಟದಿಂದಾಗಿ ಹೋರಾಟದ ಮೊತ್ತ ಗಳಿಸಿತು. ಕೊನೆಯ ಹಂತದ ಓವರ್ಗಳಲ್ಲಿ ನಿಧೀಶ್ (ಅಜೇಯ 34) ಕೂಡ ಮಿಂಚಿದರು. </p>.<p>ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಎರಡನೇ ಓವರ್ನಲ್ಲಿ ಆಘಾತವಾಯಿತು. ನಾಯಕ ಮಯಂಕ್ ಅಗರವಾಲ್ ವಿಕೆಟ್ ಪಡೆದ ಅಖಿಲ್ ಸ್ಕಾರಿಯಾ ಕೇರಳಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಅವರ ಸಂತಸ ಬಹಳ ಹೊತ್ತು ಉಳಿಯಲಿಲ್ಲ. ದೇವದತ್ತ (124; 137ಎ, 4X12, 6X3) ಮತ್ತು ಕರುಣ್ ನಾಯರ್ (ಅಜೇಯ 130; 130ಎ, 4X14) ಅವರ ಎರಡನೇ ವಿಕೆಟ್ ಜೊತೆಯಾಟದಲ್ಲಿ 223 (236ಎ) ರನ್ ಸೇರಿಸಿ ಜಯವನ್ನು ಸುಲಭಗೊಳಿಸಿದರು. ಇದರಿಂದಾಗಿ ತಂಡವು 48.2 ಓವರ್ಗಳಲ್ಲಿ 2 ವಿಕೆಟ್ಗಳಿಗೆ 285 ರನ್ ಗಳಿಸಿತು. ಸ್ಮರಣ್ ರವಿಚಂದ್ರನ್ 16 ಎಸೆತಗಳಲ್ಲಿ ಔಟಾಗದೇ 25 ರನ್ ಗಳಿಸಿದರು. </p>.<p>ಟೂರ್ನಿಯ ಮೊದಲ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ 413 ರನ್ ಗುರಿ ಬೆನ್ನಟ್ಟಿದ್ದ ಕರ್ನಾಟಕ ಗೆದ್ದಿತ್ತು. ಆ ಪಂದ್ಯದಲ್ಲಿಯೂ ದೇವದತ್ತ ಭರ್ಜರಿ ಶತಕ ಹೊಡೆದಿದ್ದರು. ಇಲ್ಲಿಯೂ ಮಿಂಚಿದರು. ಎಡಗೈ ಬ್ಯಾಟರ್ ದೇವದತ್ತ ಸೊಗಸಾದ ಡ್ರೈವ್, ಪಂಚ್ ಮತ್ತು ಪುಲ್ಗಳನ್ನು ಪ್ರದರ್ಶಿಸಿದರು. ಬೌಲರ್ಗಳು ಅವರ ಆಟದ ಮುಂದೆ ಬಸವಳಿದರು. </p>.<p>ಇನ್ನೊಂದು ಬದಿಯಲ್ಲಿ ಅನುಭವಿ ಕರುಣ್ ಕೂಡ ಅಬ್ಬರಸಿದರು. 100ರ ಸ್ಟ್ರೈಕ್ರೇಟ್ನಲ್ಲಿ ರನ್ ಸೂರೆ ಮಾಡಿದರು. ಇದರಿಂದಾಗಿ ವಿಕೆಟ್ ಗಳಿಸಲು ಕೇರಳದ ಬೌಲರ್ಗಳಿಗೆ ಸಾಧ್ಯವಾಗಲಿಲ್ಲ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>