<p><strong>ಪುದುಚೇರಿ/ ಚೆನ್ನೈ:</strong> ಪಶ್ಚಿಮ ವಲಯ ಮತ್ತು ಉತ್ತರ ವಲಯ ತಂಡಗಳು ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದವು.</p>.<p>ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಶ್ಚಿಮ ವಲಯ– ಈಶಾನ್ಯ ವಲಯ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಅಜಿಂಕ್ಯ ರಹಾನೆ ನೇತೃತ್ವದ ಪಶ್ಚಿಮ ವಲಯ ಮೊದಲ ಇನಿಂಗ್ಸ್ನಲ್ಲಿ 355 ರನ್ ಮುನ್ನಡೆ ಗಳಿಸಿತ್ತು. ಕೊನೆಯ ದಿನವೂ ‘ಬ್ಯಾಟಿಂಗ್ ತಾಲೀಮು’ ನಡೆಸಿದ ಈ ತಂಡ ಪಂದ್ಯ ಡ್ರಾದಲ್ಲಿ ಕೊನೆಗೊಳ್ಳುವಾಗ ಎರಡನೇ ಇನಿಂಗ್ಸ್ನಲ್ಲಿ ಐದು ವಿಕೆಟ್ಗೆ 268 ರನ್ ಗಳಿಸಿತ್ತು.</p>.<p>ಪುದುಚೇರಿಯಲ್ಲಿ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಉತ್ತರ ವಲಯ ತಂಡ, ಪೂರ್ವ ವಲಯ ಎದುರು ಇನಿಂಗ್ಸ್ ಮುನ್ನಡೆ ಗಳಿಸಿತು. ಮೂರು ವಿಕೆಟ್ಗೆ 433 ರನ್ಗಳಿಂದ ಭಾನುವಾರ ಆಟ ಮುಂದುವರಿಸಿದ ಉತ್ತರ ವಲಯ, ಮೊದಲ ಇನಿಂಗ್ಸ್ನಲ್ಲಿ 545 ರನ್ಗಳಿಗೆ ಆಲೌಟಾಯಿತು.</p>.<p><strong>ಸಂಕ್ಷಿಪ್ತ ಸ್ಕೋರ್: </strong>ಮೊದಲ ಇನಿಂಗ್ಸ್: ಪಶ್ಚಿಮ ವಲಯ 123 ಓವರ್ಗಳಲ್ಲಿ 2ಕ್ಕೆ 590 ಡಿಕ್ಲೇರ್ಡ್. ಈಶಾನ್ಯ ವಲಯ 81.5 ಓವರ್ಗಳಲ್ಲಿ 235. ಎರಡನೇ ಇನಿಂಗ್ಸ್: ಪಶ್ಚಿಮ ವಲಯ 64.3 ಓವರ್ಗಳಲ್ಲಿ 5 ವಿಕೆಟ್ಗೆ 268 (ಅತಿಥ್ ಶೇಟ್ ಔಟಾಗದೆ 102, ಶಮ್ಸ್ ಮುಲಾನಿ 97, ದಿಪ್ಪು ಸಂಗ್ಮಾ 70ಕ್ಕೆ 3) ಫಲಿತಾಂಶ: ಪಂದ್ಯ ಡ್ರಾ</p>.<p>ಪುದುಚೇರಿ ಪಂದ್ಯ: ಮೊದಲ ಇನಿಂಗ್ಸ್: ಪೂರ್ವ ವಲಯ 136.4 ಓವರ್ಗಳಲ್ಲಿ 397. ಉತ್ತರ ವಲಯ148.5 ಓವರ್ಗಳಲ್ಲಿ 545 (ಮನ್ದೀಪ್ ಸಿಂಗ್ 63, ಹಿಮಾನ್ಶು ರಾಣಾ 81, ಶಹಬಾಜ್ ಅಹ್ಮದ್ 86ಕ್ಕೆ 5). ಎರಡನೇ ಇನಿಂಗ್ಸ್: ಪೂರ್ವ ವಲಯ 21 ಓವರ್ಗಳಲ್ಲಿ 3 ವಿಕೆಟ್ಗೆ 102 (ಅಭಿಷೇಕ್ ಔಟಾಗದೆ 50) ಫಲಿತಾಂಶ: ಪಂದ್ಯ ಡ್ರಾ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುದುಚೇರಿ/ ಚೆನ್ನೈ:</strong> ಪಶ್ಚಿಮ ವಲಯ ಮತ್ತು ಉತ್ತರ ವಲಯ ತಂಡಗಳು ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದವು.</p>.<p>ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಶ್ಚಿಮ ವಲಯ– ಈಶಾನ್ಯ ವಲಯ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಅಜಿಂಕ್ಯ ರಹಾನೆ ನೇತೃತ್ವದ ಪಶ್ಚಿಮ ವಲಯ ಮೊದಲ ಇನಿಂಗ್ಸ್ನಲ್ಲಿ 355 ರನ್ ಮುನ್ನಡೆ ಗಳಿಸಿತ್ತು. ಕೊನೆಯ ದಿನವೂ ‘ಬ್ಯಾಟಿಂಗ್ ತಾಲೀಮು’ ನಡೆಸಿದ ಈ ತಂಡ ಪಂದ್ಯ ಡ್ರಾದಲ್ಲಿ ಕೊನೆಗೊಳ್ಳುವಾಗ ಎರಡನೇ ಇನಿಂಗ್ಸ್ನಲ್ಲಿ ಐದು ವಿಕೆಟ್ಗೆ 268 ರನ್ ಗಳಿಸಿತ್ತು.</p>.<p>ಪುದುಚೇರಿಯಲ್ಲಿ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಉತ್ತರ ವಲಯ ತಂಡ, ಪೂರ್ವ ವಲಯ ಎದುರು ಇನಿಂಗ್ಸ್ ಮುನ್ನಡೆ ಗಳಿಸಿತು. ಮೂರು ವಿಕೆಟ್ಗೆ 433 ರನ್ಗಳಿಂದ ಭಾನುವಾರ ಆಟ ಮುಂದುವರಿಸಿದ ಉತ್ತರ ವಲಯ, ಮೊದಲ ಇನಿಂಗ್ಸ್ನಲ್ಲಿ 545 ರನ್ಗಳಿಗೆ ಆಲೌಟಾಯಿತು.</p>.<p><strong>ಸಂಕ್ಷಿಪ್ತ ಸ್ಕೋರ್: </strong>ಮೊದಲ ಇನಿಂಗ್ಸ್: ಪಶ್ಚಿಮ ವಲಯ 123 ಓವರ್ಗಳಲ್ಲಿ 2ಕ್ಕೆ 590 ಡಿಕ್ಲೇರ್ಡ್. ಈಶಾನ್ಯ ವಲಯ 81.5 ಓವರ್ಗಳಲ್ಲಿ 235. ಎರಡನೇ ಇನಿಂಗ್ಸ್: ಪಶ್ಚಿಮ ವಲಯ 64.3 ಓವರ್ಗಳಲ್ಲಿ 5 ವಿಕೆಟ್ಗೆ 268 (ಅತಿಥ್ ಶೇಟ್ ಔಟಾಗದೆ 102, ಶಮ್ಸ್ ಮುಲಾನಿ 97, ದಿಪ್ಪು ಸಂಗ್ಮಾ 70ಕ್ಕೆ 3) ಫಲಿತಾಂಶ: ಪಂದ್ಯ ಡ್ರಾ</p>.<p>ಪುದುಚೇರಿ ಪಂದ್ಯ: ಮೊದಲ ಇನಿಂಗ್ಸ್: ಪೂರ್ವ ವಲಯ 136.4 ಓವರ್ಗಳಲ್ಲಿ 397. ಉತ್ತರ ವಲಯ148.5 ಓವರ್ಗಳಲ್ಲಿ 545 (ಮನ್ದೀಪ್ ಸಿಂಗ್ 63, ಹಿಮಾನ್ಶು ರಾಣಾ 81, ಶಹಬಾಜ್ ಅಹ್ಮದ್ 86ಕ್ಕೆ 5). ಎರಡನೇ ಇನಿಂಗ್ಸ್: ಪೂರ್ವ ವಲಯ 21 ಓವರ್ಗಳಲ್ಲಿ 3 ವಿಕೆಟ್ಗೆ 102 (ಅಭಿಷೇಕ್ ಔಟಾಗದೆ 50) ಫಲಿತಾಂಶ: ಪಂದ್ಯ ಡ್ರಾ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>