‘ಗಾಯದಿಂದ ಚೇತರಿಸಿಕೊಂಡ ಬಳಿಕ ತಂಡವನ್ನು ಸೇರುವ ಧಾವಂತ ಇಲ್ಲ. ಟ್ವೆಂಟಿ–20 ವಿಶ್ವಕಪ್ ಮತ್ತು ಆ ಬಳಿಕ ನಡೆಯುವ ಆ್ಯಶಸ್ ಸರಣಿಗೆ ತಂಡದ ಪರ ಕಣಕ್ಕಿಳಿಯುವುದರತ್ತ ಚಿತ್ತ ನೆಟ್ಟಿದ್ದೇನೆ. ಅವರೆಡೂ ಟೂರ್ನಿಗಳೇ ಸದ್ಯ ನನ್ನ ಮುಂದಿರುವ ಗುರಿಗಳು. ಅದಕ್ಕೂ ಮೊದಲು ಸಂಪೂರ್ಣ ಚೇತರಿಸಿಕೊಂಡು ಭಾರತ ತಂಡದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಯಲ್ಲಿ ಆಡುವುದು ಸಾಧ್ಯವಾದರೆ ಉತ್ತಮ‘ ಎಂದು ‘ಡೇಲಿ ಮೇಲ್‘ಗೆ ಬರೆದಿರುವ ಅಂಕಣದಲ್ಲಿ ಆರ್ಚರ್ ತಿಳಿಸಿದ್ದಾರೆ.