‘ಆರ್ಸಿಬಿ ವಿರುದ್ಧ ಇದೇ 21ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಹೆಚ್ಚು ಜಾಗರೂಕತೆಯಿಂದ ಕಣಕ್ಕೆ ಇಳಿಯಬೇಕಾಗಿದೆ. ಎದುರಾಳಿ ತಂಡದ ಫಲಿತಾಂಶಗಳನ್ನು ನೋಡಿ ತಂತ್ರಗಳನ್ನು ರೂಪಿಸಲು ಸಾಧ್ಯವಿಲ್ಲ. ಪ್ಲೇ ಆಫ್ ಹಾದಿಯಲ್ಲಿ ಎಲ್ಲ ಪಂದ್ಯಗಳೂ ಮುಖ್ಯ ಆಗಿರುವುದರಿಂದ ಎಚ್ಚರಿಕೆಯ ಹೆಜ್ಜೆ ಇರಿಸಬೇಕಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.