ಗಂಗೂಲಿಯನ್ನು ಬೆಂಬಲಿಸಿ ಟ್ವೀಟ್ ಮಾಡಿರುವ ಹರಭಜನ್ ಸಿಂಗ್, ‘ಈ ಪರಿಸ್ಥಿತಿಯು ಎಲ್ಲಿಗೆ ಹೋಗಿ ಮುಟ್ಟುವುದೋ ಗೊತ್ತಿಲ್ಲ. ದಿಗ್ಗಜ ಆಟಗಾರರಿಗೆ ನೋಟಿಸ್ ನೀಡುವುದೆಂದರೆ ಅವರನ್ನು ಅವಮಾನಿಸದಂತೆ. ಅವರ ಸೇವೆಯು ಕ್ರಿಕೆಟ್ ಬೆಳವಣಿಗೆಗೆ ಅಗತ್ಯವಾಗಿದೆ. ಹೌದು; ಕ್ರಿಕೆಟ್ ಅನ್ನು ದೇವರೇ ಕಾಪಾಡಬೇಕು’ ಎಂದಿದ್ದಾರೆ.