<p><strong>ಚೆನ್ನೈ:</strong> ಇಂಗ್ಲೆಂಡ್ ಎದುರಿನ ಟಿ20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಭಾರತಕ್ಕೆ ಏಕಾಂಗಿಯಾಗಿ ಗೆಲುವು ತಂದುಕೊಟ್ಟ ತಿಲಕ್ ವರ್ಮಾ, ತಮ್ಮ ಇನಿಂಗ್ಸ್ ಕುರಿತು ಮಾತನಾಡಿದ್ದಾರೆ.</p><p>ಇಂಗ್ಲೆಂಡ್ನ ಶ್ರೇಷ್ಠ ವೇಗಿಯ ಎದುರು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುವುದು ಹಾಗೂ ಅದರಿಂದ ಇತರ ಬೌಲರ್ಗಳ ಮೇಲೂ ಒತ್ತಡ ಹೇರುವುದು ತಮ್ಮ ಯೋಜನೆಯಾಗಿತ್ತು ಎಂದು ಹೇಳಿದ್ದಾರೆ.</p><p>ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ನಿಗದಿತ ಓವರ್ಗಳಲ್ಲಿ 9 ವಿಕೆಟ್ಗೆ 165 ರನ್ ಕಲೆಹಾಕಿತ್ತು. ಗುರಿ ಬೆನ್ನತ್ತಿದ ಭಾರತ, 10 ಓವರ್ ಮುಗಿಯುವುದರೊಳಗೆ ಪ್ರಮುಖ ಐದು ವಿಕೆಟ್ಗಳನ್ನು ಕಳೆದುಕೊಂಡು 79 ರನ್ ಕಲೆಹಾಕಿತ್ತು. ಈ ಹಂತದಲ್ಲಿ ಸಮಯೋಚಿತ ಆಟವಾಡಿದ ತಿಲಕ್, ಕೆಳ ಕ್ರಮಾಂಕದ ಬ್ಯಾಟರ್ಗಳೊಂದಿಗೆ ಸೇರಿ ತಂಡವನ್ನು ಜಯದತ್ತ ಮುನ್ನಡೆಸಿದರು.</p><p>ಒಟ್ಟು 55 ಎಸೆತಗಳನ್ನು ಎದುರಿಸಿದ ಅವರು, 72 ರನ್ ಗಳಿಸಿ ಔಟಾಗದೆ ಉಳಿದರು. ಅವರು ಸಿಡಿಸಿದ ಐದರಲ್ಲಿ ನಾಲ್ಕು ಸಿಕ್ಸರ್ಗಳು, ಆಂಗ್ಲರ ಪಡೆಯ ಮುಂಚೂಣಿ ವೇಗಿ ಜೋಫ್ರಾ ಆರ್ಚರ್ ಅವರ ಬೌಲಿಂಗ್ನಲ್ಲೇ ಬಂದವು. ಹೀಗಾಗಿ, ಆರ್ಚರ್ 4 ಓವರ್ಗಳಲ್ಲಿ 60 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಅವರು ಕೋಲ್ಕತ್ತದಲ್ಲಿ ನಡೆದ ಮೊದಲ ಪಂದ್ಯದಲ್ಲಿ 4 ಓವರ್ಗಳಲ್ಲಿ ಕೇವಲ 21 ರನ್ ಬಿಟ್ಟುಕೊಟ್ಟು 2 ವಿಕೆಟ್ ಉರುಳಿಸಿದ್ದರು.</p><p>ಆರ್ಚರ್ ಎದುರು ಬೀಸಾಟವಾಡಿದ ಕುರಿತು ಪಂದ್ಯದ ಬಳಿಕ ತಿಲಕ್ ಮಾತನಾಡಿದ್ದಾರೆ. 'ಎದುರಾಳಿ ತಂಡದ ಇತರ ಬೌಲರ್ಗಳನ್ನು ಒತ್ತಡಕ್ಕೆ ಸಿಲುಕಿಸುವ ಸಲುವಾಗಿ, ಅವರ ಅತ್ಯುತ್ತಮ ಬೌಲರ್ ಅನ್ನು ಗುರಿಯಾಗಿಸಿ ಆಡಲು ಬಯಸುತ್ತೇನೆ. ಒಂದು ತುದಿಯಲ್ಲಿ ವಿಕೆಟ್ ಬೀಳುತ್ತಿದ್ದಾಗ, ಆ ತಂಡದ ಮುಂಚೂಣಿ ವೇಗಿಗಳನ್ನು ದಂಡಿಸಲು ನೋಡುತ್ತೇನೆ' ಎಂದಿದ್ದಾರೆ.</p>.ಟಿ20 ಕ್ರಿಕೆಟ್: ಭಾರತಕ್ಕೆ ಜಯದ ‘ತಿಲಕ‘.<p>ಮುಂದುವರಿದು, 'ಅದರಲ್ಲಿ ನಾನು ಯಶಸ್ವಿಯಾದರೆ, ಇತರ ಬ್ಯಾಟರ್ಗಳಿಗೂ ಸುಲಭವಾಗಿ ರನ್ ಗಳಿಸಲು ಸಾಧ್ಯವಾಗುತ್ತದೆ. ಹಾಗಾಗಿ, ಆರ್ಚರ್ ಎದುರು ಆಕ್ರಮಣಕಾರಿಯಾಗಿ ಆಡಲು ಮುಂದಾದೆ. ನಾನು ಪ್ರಯೋಗಿಸಿದ ಹೊಡೆತಗಳನ್ನು ನೆಟ್ಸ್ನಲ್ಲಿ ಅಭ್ಯಾಸ ಮಾಡಿ, ಮಾನಸಿಕವಾಗಿ ಸಜ್ಜಾಗಿದ್ದೆ. ಅದರಿಂದಾಗಿ, ಒಳ್ಳೆ ಫಲಿತಾಂಶ ಸಿಕ್ಕಿತು' ಎಂದು ವಿವರಿಸಿದ್ದಾರೆ.</p><p>ಆರ್ಚರ್ ಹಾಕಿದ ಇನಿಂಗ್ಸ್ನ 5ನೇ ಓವರ್ ಹಾಗೂ 16ನೇ ಓವರ್ನಲ್ಲಿ ತಿಲಕ್ ವರ್ಮಾ, ತಲಾ ಎರಡು ಸಿಕ್ಸರ್ ಹಾಗೂ ಒಂದೊಂದು ಬೌಂಡರಿ ಬಾರಿಸಿದ್ದರು.</p><p><strong>2–0 ಮುನ್ನಡೆ<br></strong>ಸರಣಿಯ ಮೊದಲ ಪಂದ್ಯದಲ್ಲೂ ಗೆಲುವು ಸಾಧಿಸಿದ್ದ ಭಾರತ 5 ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಸಾಧಿಸಿದೆ. ಮುಂದಿನ ಪಂದ್ಯವು, ರಾಜ್ಕೋಟ್ನಲ್ಲಿ ಮಂಗಳವಾರ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ಇಂಗ್ಲೆಂಡ್ ಎದುರಿನ ಟಿ20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಭಾರತಕ್ಕೆ ಏಕಾಂಗಿಯಾಗಿ ಗೆಲುವು ತಂದುಕೊಟ್ಟ ತಿಲಕ್ ವರ್ಮಾ, ತಮ್ಮ ಇನಿಂಗ್ಸ್ ಕುರಿತು ಮಾತನಾಡಿದ್ದಾರೆ.</p><p>ಇಂಗ್ಲೆಂಡ್ನ ಶ್ರೇಷ್ಠ ವೇಗಿಯ ಎದುರು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುವುದು ಹಾಗೂ ಅದರಿಂದ ಇತರ ಬೌಲರ್ಗಳ ಮೇಲೂ ಒತ್ತಡ ಹೇರುವುದು ತಮ್ಮ ಯೋಜನೆಯಾಗಿತ್ತು ಎಂದು ಹೇಳಿದ್ದಾರೆ.</p><p>ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ನಿಗದಿತ ಓವರ್ಗಳಲ್ಲಿ 9 ವಿಕೆಟ್ಗೆ 165 ರನ್ ಕಲೆಹಾಕಿತ್ತು. ಗುರಿ ಬೆನ್ನತ್ತಿದ ಭಾರತ, 10 ಓವರ್ ಮುಗಿಯುವುದರೊಳಗೆ ಪ್ರಮುಖ ಐದು ವಿಕೆಟ್ಗಳನ್ನು ಕಳೆದುಕೊಂಡು 79 ರನ್ ಕಲೆಹಾಕಿತ್ತು. ಈ ಹಂತದಲ್ಲಿ ಸಮಯೋಚಿತ ಆಟವಾಡಿದ ತಿಲಕ್, ಕೆಳ ಕ್ರಮಾಂಕದ ಬ್ಯಾಟರ್ಗಳೊಂದಿಗೆ ಸೇರಿ ತಂಡವನ್ನು ಜಯದತ್ತ ಮುನ್ನಡೆಸಿದರು.</p><p>ಒಟ್ಟು 55 ಎಸೆತಗಳನ್ನು ಎದುರಿಸಿದ ಅವರು, 72 ರನ್ ಗಳಿಸಿ ಔಟಾಗದೆ ಉಳಿದರು. ಅವರು ಸಿಡಿಸಿದ ಐದರಲ್ಲಿ ನಾಲ್ಕು ಸಿಕ್ಸರ್ಗಳು, ಆಂಗ್ಲರ ಪಡೆಯ ಮುಂಚೂಣಿ ವೇಗಿ ಜೋಫ್ರಾ ಆರ್ಚರ್ ಅವರ ಬೌಲಿಂಗ್ನಲ್ಲೇ ಬಂದವು. ಹೀಗಾಗಿ, ಆರ್ಚರ್ 4 ಓವರ್ಗಳಲ್ಲಿ 60 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಅವರು ಕೋಲ್ಕತ್ತದಲ್ಲಿ ನಡೆದ ಮೊದಲ ಪಂದ್ಯದಲ್ಲಿ 4 ಓವರ್ಗಳಲ್ಲಿ ಕೇವಲ 21 ರನ್ ಬಿಟ್ಟುಕೊಟ್ಟು 2 ವಿಕೆಟ್ ಉರುಳಿಸಿದ್ದರು.</p><p>ಆರ್ಚರ್ ಎದುರು ಬೀಸಾಟವಾಡಿದ ಕುರಿತು ಪಂದ್ಯದ ಬಳಿಕ ತಿಲಕ್ ಮಾತನಾಡಿದ್ದಾರೆ. 'ಎದುರಾಳಿ ತಂಡದ ಇತರ ಬೌಲರ್ಗಳನ್ನು ಒತ್ತಡಕ್ಕೆ ಸಿಲುಕಿಸುವ ಸಲುವಾಗಿ, ಅವರ ಅತ್ಯುತ್ತಮ ಬೌಲರ್ ಅನ್ನು ಗುರಿಯಾಗಿಸಿ ಆಡಲು ಬಯಸುತ್ತೇನೆ. ಒಂದು ತುದಿಯಲ್ಲಿ ವಿಕೆಟ್ ಬೀಳುತ್ತಿದ್ದಾಗ, ಆ ತಂಡದ ಮುಂಚೂಣಿ ವೇಗಿಗಳನ್ನು ದಂಡಿಸಲು ನೋಡುತ್ತೇನೆ' ಎಂದಿದ್ದಾರೆ.</p>.ಟಿ20 ಕ್ರಿಕೆಟ್: ಭಾರತಕ್ಕೆ ಜಯದ ‘ತಿಲಕ‘.<p>ಮುಂದುವರಿದು, 'ಅದರಲ್ಲಿ ನಾನು ಯಶಸ್ವಿಯಾದರೆ, ಇತರ ಬ್ಯಾಟರ್ಗಳಿಗೂ ಸುಲಭವಾಗಿ ರನ್ ಗಳಿಸಲು ಸಾಧ್ಯವಾಗುತ್ತದೆ. ಹಾಗಾಗಿ, ಆರ್ಚರ್ ಎದುರು ಆಕ್ರಮಣಕಾರಿಯಾಗಿ ಆಡಲು ಮುಂದಾದೆ. ನಾನು ಪ್ರಯೋಗಿಸಿದ ಹೊಡೆತಗಳನ್ನು ನೆಟ್ಸ್ನಲ್ಲಿ ಅಭ್ಯಾಸ ಮಾಡಿ, ಮಾನಸಿಕವಾಗಿ ಸಜ್ಜಾಗಿದ್ದೆ. ಅದರಿಂದಾಗಿ, ಒಳ್ಳೆ ಫಲಿತಾಂಶ ಸಿಕ್ಕಿತು' ಎಂದು ವಿವರಿಸಿದ್ದಾರೆ.</p><p>ಆರ್ಚರ್ ಹಾಕಿದ ಇನಿಂಗ್ಸ್ನ 5ನೇ ಓವರ್ ಹಾಗೂ 16ನೇ ಓವರ್ನಲ್ಲಿ ತಿಲಕ್ ವರ್ಮಾ, ತಲಾ ಎರಡು ಸಿಕ್ಸರ್ ಹಾಗೂ ಒಂದೊಂದು ಬೌಂಡರಿ ಬಾರಿಸಿದ್ದರು.</p><p><strong>2–0 ಮುನ್ನಡೆ<br></strong>ಸರಣಿಯ ಮೊದಲ ಪಂದ್ಯದಲ್ಲೂ ಗೆಲುವು ಸಾಧಿಸಿದ್ದ ಭಾರತ 5 ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಸಾಧಿಸಿದೆ. ಮುಂದಿನ ಪಂದ್ಯವು, ರಾಜ್ಕೋಟ್ನಲ್ಲಿ ಮಂಗಳವಾರ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>