ನರಗುಂದ: ಪಟ್ಟಣದ ಅಧ್ಯಾಪಕ ನಗರದ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿ ವಿವಿಪ್ಯಾಟ್ ಯಂತ್ರದ ಬಳಿ ನಿಂತು, ಮತದಾರರಿಗೆ ನಿರ್ದೇಶನ ಮಾಡುತ್ತಿದ್ದಾರೆ ಎಂದು ನರಗುಂದ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಸಿ ಪಾಟೀಲ ಆರೋಪಿಸಿದರು. ಅಲ್ಲಿಂದಲೇ ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮನೋಜ್ ಜೈನ್ ಅವರಿಗೆ ಕರೆ ಮಾಡಿ, ಈ ಅಧಿಕಾರಿಯನ್ನು ಬದಲಿಸುವಂತೆ ದೂರಿದರು.