ಯುವ ಆಟಗಾರರಿಗೆ ಬೇಡಿಕೆ: ಯುವ ಮತ್ತು ಕೆಪಿಎಲ್ನಲ್ಲಿ ಪಳಗಿದ ಆಟಗಾರರನ್ನು ತಂಡಗಳ ಪಾಲಾಗಿಸಲು ಎಲ್ಲ ಫ್ರಾಂಚೈಸ್ನವರು ಕೂಡ ಮುಗಿ ಬಿದ್ದರು. ಹೀಗಾಗಿ ಕೆ.ಬಿ.ಪವನ್, ಅರ್ಜುನ್ ಹೊಯ್ಸಳ, ಸುನಿಲ್ ರಾಜು, ಕೆ.ಪಿ.ಅಪ್ಪಣ್ಣ, ಅಬ್ರಾರ್ ಕಾಜಿ, ಸ್ವಪ್ನಿಲ್ ಯಳವೆ ಮುಂತಾದವರು ಉತ್ತಮ ಬೆಲೆ ಪಡೆದರು. ಭಾರತ ತಂಡದಲ್ಲಿರುವ ಮತ್ತು ಭಾರತ ‘ಎ’ ತಂಡದಲ್ಲಿ ಆಡಲು ಅವಕಾಶ ಪಡೆಯುವ ಹಾದಿಯಲ್ಲಿರುವ ರಾಜ್ಯದ ಕೆಲ ಪ್ರಮುಖ ಆಟಗಾರರತ್ತ ಫ್ರಾಂಚೈಸ್ಗಳು ಒಲವು ತೋರಲಿಲ್ಲ. ಮಯಂಕ್ ಅಗರವಾಲ್ ಮತ್ತು ಪ್ರಸಿದ್ಧ ಕೃಷ್ಣ ಅವರನ್ನು ಮೊದಲ ಹಂತದಲ್ಲಿ ಖರೀದಿಸದೆ ನಂತರ ಕಡಿಮೆ ಬೆಲೆಗೆ ಪಡೆದುಕೊಂಡರು.