ಮೀರತ್ನ ಮುಲ್ತಾನನಗರದಲ್ಲಿ ಪ್ರವೀಣ್ ನೆಲೆಸಿದ್ದಾರೆ. ಅವರ ನೆರೆಮನೆಯವರಾದ ಉದ್ಯಮಿ ದೀಪಕ್ ಶರ್ಮಾ ಭಾನುವಾರ ದೂರು ನೀಡಿದ್ದರು. ಶನಿವಾರ ಮಧ್ಯಾಹ್ನ ಶಾಲಾ ಬಸ್ನಿಂದ ಮಗನನ್ನು ಇಳಿಸಿಕೊಂಡು ಬರುವ ವೇಳೆ ಕಾರಿನಲ್ಲಿ ಬಂದ ಪ್ರವೀಣ್, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಮಗನನ್ನೂ ತಳ್ಳಾಡಿ ಗಾಯಗೊಳಿಸಿದ್ದಾಗಿ ಶರ್ಮಾ ದೂರಿನಲ್ಲಿ ವಿವರಿಸಿದ್ದರು.