ಅಂಪೈರ್ಸ್ ಕಾಲ್ನಲ್ಲಿ ಗೊಂದಲಗಳಿವೆ ಎಂದು ಇಂಗ್ಲೆಂಡ್ ಮತ್ತು ಭಾರತ ನಡುವಿನ ಕ್ರಿಕೆಟ್ ಸರಣಿ ಸಂದರ್ಭದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದರು. ಅದರ ನಂತರ ಇದು ಚರ್ಚೆಗೆ ಗ್ರಾಸವಾಗಿತ್ತು. ಸದ್ಯದ ನಿಯಮದ ಪ್ರಕಾರ ಅಂಪೈರ್ ನೀಡಿದ ನಾಟೌಟ್ ತೀರ್ಪನ್ನು ಪ್ರಶ್ನಿಸಿ ಔಟ್ ಎಂದು ಮೂರನೇ ಅಂಪೈರ್ಗೆ ಮನವರಿಕೆಯಾಗಬೇಕಾದರೆ ಚೆಂಡಿನ ಅರ್ಧಕ್ಕಿಂತಲೂ ಹೆಚ್ಚಿನ ಭಾಗ ಸ್ಟಂಪ್ಗೆ ತಾಗುವಂತಿರಬೇಕು. ಆದರೆ ಚೆಂಡು ಸ್ಟಂಪಿಗೆ ಸ್ವಲ್ಪವೇ ಬಡಿಯುವಂತಿದ್ದರೂ ಔಟ್ ಕೊಡಬೇಕು ಎಂದು ವಿರಾಟ್ ಕೊಹ್ಲಿ ವಾದಿಸಿದ್ದರು.