‘ಅಂಪೈರ್ಸ್ ಕಾಲ್’ ಇಲ್ಲ ಕತ್ತರಿ: ಐಸಿಸಿ ನಿರ್ಧಾರ

ದುಬೈ: ಎಲ್ಬಿಡಬ್ಲ್ಯುಗೆ ಸಂಬಂಧಿಸಿ ಅಂಪೈರ್ಗಳ ನಿರ್ಧಾರ ಮರುಪರಿಶೀಲನೆ ಮಾಡುವ ಸಂದರ್ಭದಲ್ಲಿ ‘ಅಂಪೈರ್ಸ್ ಕಾಲ್’ ಕೈಬಿಡದೇ ಇರಲು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ನಿರ್ಧರಿಸಿದೆ. ಆದರೆ ಸದ್ಯ ಅನಸರಿಸುತ್ತಿರುವ ಡಿಆರ್ಎಸ್ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಮುಂದಾಗಿದೆ.
ಅಂಪೈರ್ಸ್ ಕಾಲ್ನಲ್ಲಿ ಗೊಂದಲಗಳಿವೆ ಎಂದು ಇಂಗ್ಲೆಂಡ್ ಮತ್ತು ಭಾರತ ನಡುವಿನ ಕ್ರಿಕೆಟ್ ಸರಣಿ ಸಂದರ್ಭದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದರು. ಅದರ ನಂತರ ಇದು ಚರ್ಚೆಗೆ ಗ್ರಾಸವಾಗಿತ್ತು. ಸದ್ಯದ ನಿಯಮದ ಪ್ರಕಾರ ಅಂಪೈರ್ ನೀಡಿದ ನಾಟೌಟ್ ತೀರ್ಪನ್ನು ಪ್ರಶ್ನಿಸಿ ಔಟ್ ಎಂದು ಮೂರನೇ ಅಂಪೈರ್ಗೆ ಮನವರಿಕೆಯಾಗಬೇಕಾದರೆ ಚೆಂಡಿನ ಅರ್ಧಕ್ಕಿಂತಲೂ ಹೆಚ್ಚಿನ ಭಾಗ ಸ್ಟಂಪ್ಗೆ ತಾಗುವಂತಿರಬೇಕು. ಆದರೆ ಚೆಂಡು ಸ್ಟಂಪಿಗೆ ಸ್ವಲ್ಪವೇ ಬಡಿಯುವಂತಿದ್ದರೂ ಔಟ್ ಕೊಡಬೇಕು ಎಂದು ವಿರಾಟ್ ಕೊಹ್ಲಿ ವಾದಿಸಿದ್ದರು.
ಗುರುವಾರ ನಡೆದ ಸಭೆಯಲ್ಲಿ ಡಿಆರ್ಎಸ್ಗೆ ಮೂರು ಸಣ್ಣ ಬದಲಾವಣೆಗಳನ್ನು ತರಲು ಐಸಿಸಿ ನಿರ್ಧರಿಸಿತು. ಎಲ್ಬಿಡಬ್ಲ್ಯುಗೆ ಸಂಬಂಧಿಸಿದ ತೀರ್ಪು ಮರುಪರಿಶೀಲನೆ ವೇಳೆ ಸ್ಟಂಪಿನ ಎತ್ತರವನ್ನು ಬೇಲ್ಸ್ನ ಮೇಲ್ಭಾಗದ ವರೆಗೂ ಪರಿಗಣಿಸಲು ನಿರ್ಧರಿಸಲಾಗಿದೆ.
ಎಲ್ಬಿಡಬ್ಲ್ಯುಗೆ ಸಂಬಂಧಿಸಿ ಅಂಪೈರ್ಗೆ ಮನವಿ ಸಲ್ಲಿಸುವುದಕ್ಕೂ ಮೊದಲು ಆಟಗಾರ ತಾನು ಹೊಡೆತಕ್ಕೆ ಮುಂದಾಗಿದ್ದನೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಬ್ಯಾಟ್ಸ್ಮನ್ಗೇ ಅವಕಾಶ ನೀಡಲಾಗಿದೆ. ಶಾರ್ಟ್ ರನ್ ಕೂಡ ಮೂರನೇ ಅಂಪೈರ್ ಪರಿಶೀಲಿಸುವರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.