‘ಈ ಹಿಂದೆ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಸರಣಿಯ ಮುಕ್ತಾಯದ ಸಂದರ್ಭದಲ್ಲಿ ಇನ್ನೊಂದು ಎಡವಟ್ಟಾಗಿತ್ತು. ಅಲ್ಲಿ ಖನ್ನಾ ತಾವು ಪ್ರಶಸ್ತಿ ನೀಡಿರಲಿಲ್ಲ. ಬದಲಿಗೆ ಡಿಡಿಸಿಎ ಅಧ್ಯಕ್ಷ ರಜತ್ ಶರ್ಮಾ ಅವರಿಂದ ಕೊಡಿಸಿದ್ದರು. ಆ ಕುರಿತು ವಿವರಣೆ ನೀಡುವಂತೆ ನಾವು ಹಾಕಿದ ಪತ್ರಗಳಿಗೆ ಇನ್ನೂ ಸರಿಯಾದ ಉತ್ತರಗಳನ್ನು ಖನ್ನಾ ಅವರು ಕೊಟ್ಟಿಲ್ಲ. ಆದರೆ, 2017ರಲ್ಲಿ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿಯವರು ಹಾಕಿದ್ದ ಇಮೇಲ್ ತೋರಿಸುತ್ತಿದ್ದಾರೆ. ಅದರಲ್ಲಿ ಬಿಸಿಸಿಐ ಅಧ್ಯಕ್ಷರೇ ಟ್ರೋಫಿ ನೀಡಬೇಕು ಎಂದು ಆ ಇಮೇಲ್ನಲ್ಲಿ ಉಲ್ಲೇಖವಾಗಿತ್ತು’ ಎಂದು ಎಡುಲ್ಜಿ ಆಕ್ರೋಶ ವ್ಯಕ್ತಪಡಿಸಿದರು.