‘ಬಿಎಫ್ಸಿಯು ಮೊದಲಿನಿಂದಲೂ ಯುವ ಆಟಗಾರರಿಗೆ ಅವಕಾಶಗಳನ್ನು ನೀಡುತ್ತಾ ಅವರ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಮಾಡುತ್ತಿದೆ. ಈ ಪಟ್ಟಿಗೆ ಪ್ರಭ್ಶುಕನ್ ಮತ್ತು ಸುರೇಶ್ ಸೇರ್ಪಡೆಯಾಗಿದ್ದಾರೆ. ಇಬ್ಬರೂ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿದ್ದಾರೆ’ ಎಂದು ಬಿಎಫ್ಸಿ ಮುಖ್ಯ ಕೋಚ್ ಕಾರ್ಲಸ್ ಕುದ್ರತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.