<p><strong>ನವದೆಹಲಿ:</strong> ಸಿಎಎಫ್ಎ ನೇಷನ್ಸ್ ಕಪ್ ಟೂರ್ನಿಗಾಗಿ ಭಾರತ ಫುಟ್ಬಾಲ್ ತಂಡದ ನೂತನ ಮುಖ್ಯ ಕೋಚ್ ಖಾಲಿದ್ ಜಮೀಲ್ ಅವರು 35 ಸಂಭಾವ್ಯ ಆಟಗಾರರನ್ನು ಪ್ರಕಟಿಸಿದ್ದು, ಅನುಭವಿ ಸುನಿಲ್ ಚೆಟ್ರಿ ಅವರನ್ನು ಕೈಬಿಡಲಾಗಿದೆ. </p>.<p>ಅಂತರರಾಷ್ಟ್ರೀಯ ನಿವೃತ್ತಿಯಿಂದ ಹಿಂತಿರುಗಿದ ನಂತರ 41 ವರ್ಷದ ಚೆಟ್ರಿ ಆಡಿದ ನಾಲ್ಕು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಅವರನ್ನು ಕೈಬಿಡಲಾಗಿದೆ ಎನ್ನಲಾಗಿದೆ. </p>.<p>ತಜಿಕಿಸ್ತಾನ ಮತ್ತು ಉಜ್ಬೇಕಿಸ್ತಾನನಲ್ಲಿ ನಡೆಯಲಿರುವ ನೇಷನ್ಸ್ ಕಪ್ ಟೂರ್ನಿಯು ಜಮೀಲ್ ಅವರ ಪಾಲಿಗೆ ಮೊದಲ ಸವಾಲು ಆಗಿದೆ. ಆ ಟೂರ್ನಿಯ ಬಿ ಗುಂಪಿನಲ್ಲಿರುವ ಭಾರತವು, ತಜಿಕಿಸ್ತಾನ (ಆ. 29ರಂದು), ಇರಾನ್ (ಸೆ. 1) ಮತ್ತು ಅಫ್ಗಾನಿಸ್ತಾನ (ಸೆ. 4) ತಂಡಗಳನ್ನು ಎದುರಿಸಲಿದೆ. </p>.<p>ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಟೂರ್ನಿಗೆ ತಮ್ಮನ್ನು ಪರಿಗಣಿಸಬೇಡಿ ಎಂದು ಚೆಟ್ರಿ ಅವರೇ ವಿನಂತಿಸಿದ್ದಾರೆಯೇ ಅಥವಾ ಐಎಸ್ಎಲ್ನಲ್ಲಿ ಅವರು ಪ್ರತಿನಿಧಿಸುವ ಬೆಂಗಳೂರು ಎಫ್ಸಿ ತಂಡವು ಇನ್ನೂ ಪೂರ್ವ ಋತುವಿನ ತರಬೇತಿಯನ್ನು ಆರಂಭಿಸದ ಕಾರಣ ಅವರಿಗೆ ವಿಶ್ರಾಂತಿ ನೀಡಲಾಗಿದೆಯೇ ಎಂಬುದು ಗೊತ್ತಾಗಿಲ್ಲ. </p>.<p>ಐಎಸ್ಎಲ್ ಭವಿಷ್ಯದ ಬಗ್ಗೆ ಅನಿಶ್ಚಿತತೆ ಇರುವುದರಿಂದ ಬೆಂಗಳೂರು ಎಫ್ಸಿ ಇತ್ತೀಚೆಗೆ ತನ್ನ ತಂಡದ ಆಟಗಾರರು ಮತ್ತು ಸಿಬ್ಬಂದಿಗೆ ಸಂಬಳವನ್ನು ಸ್ಥಗಿತಗೊಳಿಸಿತ್ತು. </p>.<p>ಜಮೀಲ್ ಪ್ರಕಟಿಸಿದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಬೆಂಗಳೂರು ಎಫ್ಸಿ ತಂಡದ ಗೋಲ್ಕೀಪರ್ ಗುರುಪ್ರೀತ್ ಸಿಂಗ್ ಸಂಧು, ಡಿಫೆಂಡರ್ಗಳಾದ ಚಿಂಗ್ಲೆನ್ಸನಾ ಸಿಂಗ್, ರಾಹುಲ್ ಭೇಕೆ, ರೋಷನ್ ಸಿಂಗ್ ನೌರೆಮ್ ಮತ್ತು ಮಿಡ್ಫೀಲರ್ ಸುರೇಶ್ ಸಿಂಗ್ ಸ್ಥಾನ ಪಡೆದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಸಿಎಎಫ್ಎ ನೇಷನ್ಸ್ ಕಪ್ ಟೂರ್ನಿಗಾಗಿ ಭಾರತ ಫುಟ್ಬಾಲ್ ತಂಡದ ನೂತನ ಮುಖ್ಯ ಕೋಚ್ ಖಾಲಿದ್ ಜಮೀಲ್ ಅವರು 35 ಸಂಭಾವ್ಯ ಆಟಗಾರರನ್ನು ಪ್ರಕಟಿಸಿದ್ದು, ಅನುಭವಿ ಸುನಿಲ್ ಚೆಟ್ರಿ ಅವರನ್ನು ಕೈಬಿಡಲಾಗಿದೆ. </p>.<p>ಅಂತರರಾಷ್ಟ್ರೀಯ ನಿವೃತ್ತಿಯಿಂದ ಹಿಂತಿರುಗಿದ ನಂತರ 41 ವರ್ಷದ ಚೆಟ್ರಿ ಆಡಿದ ನಾಲ್ಕು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಅವರನ್ನು ಕೈಬಿಡಲಾಗಿದೆ ಎನ್ನಲಾಗಿದೆ. </p>.<p>ತಜಿಕಿಸ್ತಾನ ಮತ್ತು ಉಜ್ಬೇಕಿಸ್ತಾನನಲ್ಲಿ ನಡೆಯಲಿರುವ ನೇಷನ್ಸ್ ಕಪ್ ಟೂರ್ನಿಯು ಜಮೀಲ್ ಅವರ ಪಾಲಿಗೆ ಮೊದಲ ಸವಾಲು ಆಗಿದೆ. ಆ ಟೂರ್ನಿಯ ಬಿ ಗುಂಪಿನಲ್ಲಿರುವ ಭಾರತವು, ತಜಿಕಿಸ್ತಾನ (ಆ. 29ರಂದು), ಇರಾನ್ (ಸೆ. 1) ಮತ್ತು ಅಫ್ಗಾನಿಸ್ತಾನ (ಸೆ. 4) ತಂಡಗಳನ್ನು ಎದುರಿಸಲಿದೆ. </p>.<p>ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಟೂರ್ನಿಗೆ ತಮ್ಮನ್ನು ಪರಿಗಣಿಸಬೇಡಿ ಎಂದು ಚೆಟ್ರಿ ಅವರೇ ವಿನಂತಿಸಿದ್ದಾರೆಯೇ ಅಥವಾ ಐಎಸ್ಎಲ್ನಲ್ಲಿ ಅವರು ಪ್ರತಿನಿಧಿಸುವ ಬೆಂಗಳೂರು ಎಫ್ಸಿ ತಂಡವು ಇನ್ನೂ ಪೂರ್ವ ಋತುವಿನ ತರಬೇತಿಯನ್ನು ಆರಂಭಿಸದ ಕಾರಣ ಅವರಿಗೆ ವಿಶ್ರಾಂತಿ ನೀಡಲಾಗಿದೆಯೇ ಎಂಬುದು ಗೊತ್ತಾಗಿಲ್ಲ. </p>.<p>ಐಎಸ್ಎಲ್ ಭವಿಷ್ಯದ ಬಗ್ಗೆ ಅನಿಶ್ಚಿತತೆ ಇರುವುದರಿಂದ ಬೆಂಗಳೂರು ಎಫ್ಸಿ ಇತ್ತೀಚೆಗೆ ತನ್ನ ತಂಡದ ಆಟಗಾರರು ಮತ್ತು ಸಿಬ್ಬಂದಿಗೆ ಸಂಬಳವನ್ನು ಸ್ಥಗಿತಗೊಳಿಸಿತ್ತು. </p>.<p>ಜಮೀಲ್ ಪ್ರಕಟಿಸಿದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಬೆಂಗಳೂರು ಎಫ್ಸಿ ತಂಡದ ಗೋಲ್ಕೀಪರ್ ಗುರುಪ್ರೀತ್ ಸಿಂಗ್ ಸಂಧು, ಡಿಫೆಂಡರ್ಗಳಾದ ಚಿಂಗ್ಲೆನ್ಸನಾ ಸಿಂಗ್, ರಾಹುಲ್ ಭೇಕೆ, ರೋಷನ್ ಸಿಂಗ್ ನೌರೆಮ್ ಮತ್ತು ಮಿಡ್ಫೀಲರ್ ಸುರೇಶ್ ಸಿಂಗ್ ಸ್ಥಾನ ಪಡೆದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>