<p><strong>ಬ್ಯಾಂಬೊಲಿಮ್, ಗೋವಾ:</strong> ಎಂಟು ಪಂದ್ಯಗಳಲ್ಲಿ ಏಕೈಕ ಗೆಲುವು ಕಂಡಿರುವ ಕೇರಳ ಬ್ಲಾಸ್ಟರ್ಸ್ ಮತ್ತು ಏಳನೇ ಆವೃತ್ತಿಯಲ್ಲಿ ಈ ವರೆಗೆ ಜಯವನ್ನೇ ಕಾಣಲು ಸಾಧ್ಯವಾಗದ ಒಡಿಶಾ ಎಫ್ಸಿ ತಂಡಗಳು ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಗುರುವಾರ ಮುಖಾಮುಖಿಯಾಗಲಿವೆ. ಪಂದ್ಯ ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯಲಿದೆ.</p>.<p>ಮೂರು ಡ್ರಾ ಮತ್ತು ನಾಲ್ಕು ಸೋಲು ಕಂಡಿರುವ ಕೇರಳ ಬ್ಲಾಸ್ಟರ್ಸ್ ಈ ವರೆಗೆ ಗಳಿಸಿರುವುದು ಎಂಟು ಗೋಲು ಮಾತ್ರ. 13 ಗೋಲುಗಳನ್ನು ತಂಡ ಬಿಟ್ಟುಕೊಟ್ಟಿದೆ. ಆದ್ದರಿಂದ ಹೆಚ್ಚು ಗೋಲು ಗಳಿಸಿ ತಂಡವನ್ನು ಜಯದ ಹಾದಿಯಲ್ಲಿ ಮುನ್ನಡೆಸುವ ಬಗ್ಗೆ ಕೋಚ್ ಕಿಬು ವಿಕುನಾ ಚಿಂತಿಸತೊಡಗಿದ್ದಾರೆ. ಪಾಯಿಂಟ್ ಪಟ್ಟಿಯ ಕೊನೆಯ ಸ್ಥಾನದಲ್ಲಿರುವ ಒಡಿಶಾ ಈ ವರೆಗೆ ಎಲ್ಲ ಪಂದ್ಯಗಳಲ್ಲೂ ಗೋಲು ಬಿಟ್ಟುಕೊಟ್ಟಿದೆ. ಹೀಗಾಗಿ ಆ ತಂಡದ ವಿರುದ್ಧ ಗೆಲುವು ಸಾಧಿಸುವ ಭರವಸೆಯಲ್ಲಿದೆ ಬ್ಲಾಸ್ಟರ್ಸ್.</p>.<p>ಸೆಟ್ಪೀಸ್ ಹೊರತುಪಡಿಸಿ, ಓಪನ್ ಪ್ಲೇನಲ್ಲಿ ಮೂರು ಗೋಲು ಗಳಿಸಲಷ್ಟೇ ಬ್ಲಾಸ್ಟರ್ಸ್ಗೆ ಸಾಧ್ಯವಾಗಿದೆ. ಚೆಂಡನ್ನು ನಿಖರವಾಗಿ ಗುರಿಯತ್ತ ಒದೆಯುವುದರಲ್ಲೂ ಬ್ಲಾಸ್ಟರ್ಸ್ ಸತತ ವೈಫಲ್ಯ ಕಂಡಿದೆ. ಈ ವರೆಗೆ ತಂಡಕ್ಕಾಗಿ ಏಳು ಮಂದಿ ಗೋಲು ಗಳಿಸಿದ್ದಾರೆ. ಈ ಬೆಳವಣಿಗೆ ಒಂದರ್ಥದಲ್ಲಿ ತಂಡದಲ್ಲಿ ಭರವಸೆ ತುಂಬಿದ್ದರೂ ಫಾರ್ವರ್ಡ್ ವಿಭಾಗದವರು ಹಿನ್ನಡೆ ಅನುಭವಿಸಿದ್ದಾರೆ ಎಂಬುದನ್ನೂ ಸೂಚಿಸುತ್ತದೆ.</p>.<p>‘ನಮಗೆ ಎಲ್ಲ ಪಂದ್ಯಗಳಲ್ಲೂ ಅವಕಾಶಗಳನ್ನು ಸೃಷ್ಟಿಸಲು ಸಾಧ್ಯವಾಗಿದೆ. ಆದರೆ ಅದನ್ನು ಗೋಲಾಗಿ ಪರಿವರ್ತಿಸಲು ಆಗಲಿಲ್ಲ ಎಂಬುದು ಬೇಸರದ ವಿಷಯ. ಈ ದೌರ್ಬಲ್ಯದಿಂದ ಹೊರಬರಲು ಪ್ರತಿ ಪಂದ್ಯದಲ್ಲೂ ಪ್ರಯತ್ನಿಸುತ್ತಿರುತ್ತೇವೆ. ಒಡಿಶಾ ಅತ್ಯುತ್ತಮ ತಂಡ ಎಂಬುದರಲ್ಲಿ ಸಂದೇಹ ಇಲ್ಲ. ಹಿಂದಿನ ಪಂದ್ಯದಲ್ಲಿ ಆ ತಂಡ ಗೆಲುವಿನ ಸನಿಹ ಮುಗ್ಗರಿಸಿತ್ತು. ಆದ್ದರಿಂದ ಗುರುವಾರದ ಪಂದ್ಯದಲ್ಲಿ ಎಚ್ಚರಿಕೆಯ ಆಟವಾಡಲು ನಮ್ಮ ಆಟಗಾರರು ಮುಂದಾಗಿದ್ದಾರೆ’ ಎಂದು ವಿಕುನಾ ಹೇಳಿದರು.</p>.<p>ಒಡಿಶಾ ಆರು ಪಂದ್ಯಗಳನ್ನು ಸೋತಿದ್ದು ಆರು ಗೋಲುಗಳನ್ನು ಮಾತ್ರ ಬಾರಿಸಿದೆ. ಇದು, ಈ ಬಾರಿಯ ಟೂರ್ನಿಯಲ್ಲಿ ತಂಡವೊಂದು ಗಳಿಸಿರುವ ಕನಿಷ್ಠ ಗೋಲುಗಳು. 14 ಗೋಲುಗಳನ್ನು ಬಿಟ್ಟುಕೊಟ್ಟಿರುವ ತಂಡ ಹೆಚ್ಚು ಗೋಲು ನೀಡಿರುವ ತಂಡಗಳ ಸಾಲಿನಲ್ಲಿ ಜಂಟಿ ಕೊನೆಯ ಸ್ಥಾನದಲ್ಲಿದೆ. ಈಸ್ಟ್ ಬೆಂಗಾಲ್ ಕೂಡ 14 ಗೋಲುಗಳನ್ನು ನೀಡಿದೆ.</p>.<p>ಹಿಂದಿನ ಪಂದ್ಯಗಳ ಫಲಿತಾಂಶಕ್ಕೂ ತಂಡದ ನಿಜವಾದ ಸಾಮರ್ಥ್ಯಕ್ಕೂ ವ್ಯತ್ಯಾಸವಿದೆ. ಆದರೆ ಆರು ಪಂದ್ಯಗಳಲ್ಲಿ ಸೋತಿರುವುದಂತೂ ನಿಜ ಎಂದು ಹೇಳಿರುವ ಒಡಿಶಾ ಕೋಚ್ ಸ್ಟುವರ್ಟ್ ಬಾಕ್ಸಟರ್ ‘ಉತ್ತಮ ಆಟವಾಡಿದರೂ ಜಯ ಗಳಿಸಲು ಸಾಧ್ಯವಾಗುತ್ತಿಲ್ಲ ಎಂಬುದು ತಂಡದ ಸದ್ಯದ ಸಮಸ್ಯೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ಯಾಂಬೊಲಿಮ್, ಗೋವಾ:</strong> ಎಂಟು ಪಂದ್ಯಗಳಲ್ಲಿ ಏಕೈಕ ಗೆಲುವು ಕಂಡಿರುವ ಕೇರಳ ಬ್ಲಾಸ್ಟರ್ಸ್ ಮತ್ತು ಏಳನೇ ಆವೃತ್ತಿಯಲ್ಲಿ ಈ ವರೆಗೆ ಜಯವನ್ನೇ ಕಾಣಲು ಸಾಧ್ಯವಾಗದ ಒಡಿಶಾ ಎಫ್ಸಿ ತಂಡಗಳು ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಗುರುವಾರ ಮುಖಾಮುಖಿಯಾಗಲಿವೆ. ಪಂದ್ಯ ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯಲಿದೆ.</p>.<p>ಮೂರು ಡ್ರಾ ಮತ್ತು ನಾಲ್ಕು ಸೋಲು ಕಂಡಿರುವ ಕೇರಳ ಬ್ಲಾಸ್ಟರ್ಸ್ ಈ ವರೆಗೆ ಗಳಿಸಿರುವುದು ಎಂಟು ಗೋಲು ಮಾತ್ರ. 13 ಗೋಲುಗಳನ್ನು ತಂಡ ಬಿಟ್ಟುಕೊಟ್ಟಿದೆ. ಆದ್ದರಿಂದ ಹೆಚ್ಚು ಗೋಲು ಗಳಿಸಿ ತಂಡವನ್ನು ಜಯದ ಹಾದಿಯಲ್ಲಿ ಮುನ್ನಡೆಸುವ ಬಗ್ಗೆ ಕೋಚ್ ಕಿಬು ವಿಕುನಾ ಚಿಂತಿಸತೊಡಗಿದ್ದಾರೆ. ಪಾಯಿಂಟ್ ಪಟ್ಟಿಯ ಕೊನೆಯ ಸ್ಥಾನದಲ್ಲಿರುವ ಒಡಿಶಾ ಈ ವರೆಗೆ ಎಲ್ಲ ಪಂದ್ಯಗಳಲ್ಲೂ ಗೋಲು ಬಿಟ್ಟುಕೊಟ್ಟಿದೆ. ಹೀಗಾಗಿ ಆ ತಂಡದ ವಿರುದ್ಧ ಗೆಲುವು ಸಾಧಿಸುವ ಭರವಸೆಯಲ್ಲಿದೆ ಬ್ಲಾಸ್ಟರ್ಸ್.</p>.<p>ಸೆಟ್ಪೀಸ್ ಹೊರತುಪಡಿಸಿ, ಓಪನ್ ಪ್ಲೇನಲ್ಲಿ ಮೂರು ಗೋಲು ಗಳಿಸಲಷ್ಟೇ ಬ್ಲಾಸ್ಟರ್ಸ್ಗೆ ಸಾಧ್ಯವಾಗಿದೆ. ಚೆಂಡನ್ನು ನಿಖರವಾಗಿ ಗುರಿಯತ್ತ ಒದೆಯುವುದರಲ್ಲೂ ಬ್ಲಾಸ್ಟರ್ಸ್ ಸತತ ವೈಫಲ್ಯ ಕಂಡಿದೆ. ಈ ವರೆಗೆ ತಂಡಕ್ಕಾಗಿ ಏಳು ಮಂದಿ ಗೋಲು ಗಳಿಸಿದ್ದಾರೆ. ಈ ಬೆಳವಣಿಗೆ ಒಂದರ್ಥದಲ್ಲಿ ತಂಡದಲ್ಲಿ ಭರವಸೆ ತುಂಬಿದ್ದರೂ ಫಾರ್ವರ್ಡ್ ವಿಭಾಗದವರು ಹಿನ್ನಡೆ ಅನುಭವಿಸಿದ್ದಾರೆ ಎಂಬುದನ್ನೂ ಸೂಚಿಸುತ್ತದೆ.</p>.<p>‘ನಮಗೆ ಎಲ್ಲ ಪಂದ್ಯಗಳಲ್ಲೂ ಅವಕಾಶಗಳನ್ನು ಸೃಷ್ಟಿಸಲು ಸಾಧ್ಯವಾಗಿದೆ. ಆದರೆ ಅದನ್ನು ಗೋಲಾಗಿ ಪರಿವರ್ತಿಸಲು ಆಗಲಿಲ್ಲ ಎಂಬುದು ಬೇಸರದ ವಿಷಯ. ಈ ದೌರ್ಬಲ್ಯದಿಂದ ಹೊರಬರಲು ಪ್ರತಿ ಪಂದ್ಯದಲ್ಲೂ ಪ್ರಯತ್ನಿಸುತ್ತಿರುತ್ತೇವೆ. ಒಡಿಶಾ ಅತ್ಯುತ್ತಮ ತಂಡ ಎಂಬುದರಲ್ಲಿ ಸಂದೇಹ ಇಲ್ಲ. ಹಿಂದಿನ ಪಂದ್ಯದಲ್ಲಿ ಆ ತಂಡ ಗೆಲುವಿನ ಸನಿಹ ಮುಗ್ಗರಿಸಿತ್ತು. ಆದ್ದರಿಂದ ಗುರುವಾರದ ಪಂದ್ಯದಲ್ಲಿ ಎಚ್ಚರಿಕೆಯ ಆಟವಾಡಲು ನಮ್ಮ ಆಟಗಾರರು ಮುಂದಾಗಿದ್ದಾರೆ’ ಎಂದು ವಿಕುನಾ ಹೇಳಿದರು.</p>.<p>ಒಡಿಶಾ ಆರು ಪಂದ್ಯಗಳನ್ನು ಸೋತಿದ್ದು ಆರು ಗೋಲುಗಳನ್ನು ಮಾತ್ರ ಬಾರಿಸಿದೆ. ಇದು, ಈ ಬಾರಿಯ ಟೂರ್ನಿಯಲ್ಲಿ ತಂಡವೊಂದು ಗಳಿಸಿರುವ ಕನಿಷ್ಠ ಗೋಲುಗಳು. 14 ಗೋಲುಗಳನ್ನು ಬಿಟ್ಟುಕೊಟ್ಟಿರುವ ತಂಡ ಹೆಚ್ಚು ಗೋಲು ನೀಡಿರುವ ತಂಡಗಳ ಸಾಲಿನಲ್ಲಿ ಜಂಟಿ ಕೊನೆಯ ಸ್ಥಾನದಲ್ಲಿದೆ. ಈಸ್ಟ್ ಬೆಂಗಾಲ್ ಕೂಡ 14 ಗೋಲುಗಳನ್ನು ನೀಡಿದೆ.</p>.<p>ಹಿಂದಿನ ಪಂದ್ಯಗಳ ಫಲಿತಾಂಶಕ್ಕೂ ತಂಡದ ನಿಜವಾದ ಸಾಮರ್ಥ್ಯಕ್ಕೂ ವ್ಯತ್ಯಾಸವಿದೆ. ಆದರೆ ಆರು ಪಂದ್ಯಗಳಲ್ಲಿ ಸೋತಿರುವುದಂತೂ ನಿಜ ಎಂದು ಹೇಳಿರುವ ಒಡಿಶಾ ಕೋಚ್ ಸ್ಟುವರ್ಟ್ ಬಾಕ್ಸಟರ್ ‘ಉತ್ತಮ ಆಟವಾಡಿದರೂ ಜಯ ಗಳಿಸಲು ಸಾಧ್ಯವಾಗುತ್ತಿಲ್ಲ ಎಂಬುದು ತಂಡದ ಸದ್ಯದ ಸಮಸ್ಯೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>