<p><strong>ಮೈಸೂರು:</strong> ಕೆ.ಬಿ.ಪವನ್ ಮತ್ತು ನಾಯಕ ಆರ್.ವಿನಯ್ ಕುಮಾರ್ ಅವರ ಬಿರುಸಿನ ಆಟದ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ತಂಡ ಕೆಪಿಎಲ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ಗೆ 191 ರನ್ಗಳ ನೀಡಿದೆ.</p>.<p>ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಎಲಿಮಿನೇಟರ್’ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್ 20 ಓವರ್ಗಳಲ್ಲಿ 5 ವಿಕೆಟ್ಗೆ 190 ರನ್ ಗಳಿಸಿತು.</p>.<p>ಪವನ್ (ಔಟಾಗದೆ 56, 39 ಎಸೆತ) ಮತ್ತು ವಿನಯ್ (55, 45 ಎಸೆತ) ಅರ್ಧಶತಕ ಗಳಿಸಿ ಮಿಂಚಿದರು. ಈ ಜೋಡಿ ಮೂರನೇ ವಿಕೆಟ್ಗೆ 93 ರನ್ ಸೇರಿಸಿ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿತು.</p>.<p>ಟಾಸ್ ಗೆದ್ದ ಲಯನ್ಸ್ ತಂಡದ ನಾಯಕ ಅಭಿಮನ್ಯು ಮಿಥುನ್ ಅವರು ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಇಳಿಸಿದರು. ಲವನೀತ್ ಸಿಸೋಡಿಯಾ (2) ಅವರನ್ನು ಮಿಥುನ್ ಬೇಗನೇ ಔಟ್ ಮಾಡಿದರು.</p>.<p>ವಿನಯ್ ಮತ್ತು ಮೊಹಮ್ಮದ್ ತಾಹ (41, 22 ಎಸೆತ, 7 ಬೌಂ, 1 ಸಿ.) ಎರಡನೇ ವಿಕೆಟ್ಗೆ 23 ಎಸೆತಗಳಲ್ಲಿ 42 ರನ್ ಸೇರಿಸಿ ತಂಡವನ್ನು ಆರಂಭಿಕ ಕುಸಿತದಿಂದ ಪಾರುಮಾಡಿದರು. ಐದು ಓವರ್ಗಳಲ್ಲಿ ತಂಡದ ಮೊತ್ತ 50ರ ಗಡಿ ದಾಟಿತು.</p>.<p>ಆದರೆ ಏಳನೇ ಓವರ್ನಲ್ಲಿ ತಾಹ ವಿಕೆಟ್ ಪಡೆದ ರಿಷಭ್ ಸಿಂಗ್ ಎದುರಾಳಿ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು. 5 ರಿಂದ 10 ಓವರ್ಗಳ ಅವಧಿಯಲ್ಲಿ 31 ರನ್ಗಳು ಮಾತ್ರ ಬಂದವು. ಕಳೆದ ಪಂದ್ಯದಲ್ಲೂ ಬಿರುಸಿನ ಆಟವಾಡಿದ್ದ ತಾಹ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದರು.</p>.<p>11ನೇ ಓವರ್ನಲ್ಲಿ ಸತತ ಎರಡು ಸಿಕ್ಸರ್ಗಳನ್ನು ಬಾರಿಸಿದ ಪವನ್ ತಂಡದ ರನ್ ವೇಗ ಹೆಚ್ಚಿಸಿದರು. ವಿನಯ್ ಕೂಡಾ ಬಿರುಸಿನ ಹೊಡೆತಗಳ ಮೂಲಕ ಮಿಂಚಿದರು.</p>.<p>ವಿನಯ್ ನಿರ್ಗಮನದ ಬಳಿಕ ಕ್ರೀಸ್ಗೆ ಬಂದ ಪ್ರವೀಣ್ ದುಬೆ ಕೇವಲ 8 ಎಸೆತಗಳಲ್ಲಿ 23 ರನ್ ಗಳಿಸಿದರು. ಇದರಿಂದ ಟೈಗರ್ಸ್ ತಂಡ ಸವಾಲಿನ ಗುರಿ ನೀಡಿತು. ಈ ಪಂದ್ಯದಲ್ಲಿ ಗೆಲುವು ಪಡೆಯುವ ತಂಡ ಶುಕ್ರವಾರ ನಡೆಯುವ ಎರಡನೇ ಕ್ವಾಲಿಫೈಯರ್ನಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಎದುರಿಸಲಿದೆ. ಪ್ಯಾಂಥರ್ಸ್ ತಂಡ ಬುಧವಾರ ನಡೆದಿದ್ದ ಕ್ವಾಲಿಫೈಯರ್–1 ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ಎದುರು 37 ರನ್ಗಳಿಂದ ಪರಾಭವಗೊಂಡಿತ್ತು. ಟಸ್ಕರ್ಸ್ ತಂಡ ಟೂರ್ನಿಯ ಫೈನಲ್ ಪ್ರವೇಶಿಸಿದೆ.</p>.<p><strong>ಸಂಕ್ಷಿಪ್ತ ಸ್ಕೋರ್:</strong> ಹುಬ್ಬಳ್ಳಿ ಟೈಗರ್ಸ್ 20 ಓವರ್ಗಳಲ್ಲಿ 5 ವಿಕೆಟ್ಗೆ 190 (ಮೊಹಮ್ಮದ್ ತಾಹ 42, ಆರ್.ವಿನಯ್ ಕುಮಾರ್ 55, ಕೆ.ಬಿ.ಪವನ್ ಔಟಾಗದೆ 56, ಪ್ರವೀಣ್ ದುಬೆ 23, ಅಭಿಮನ್ಯು ಮಿಥುನ್ 27ಕ್ಕೆ 1,ರಿಷಬ್ ಸಿಂಗ್ 34ಕ್ಕೆ 1).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಕೆ.ಬಿ.ಪವನ್ ಮತ್ತು ನಾಯಕ ಆರ್.ವಿನಯ್ ಕುಮಾರ್ ಅವರ ಬಿರುಸಿನ ಆಟದ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ತಂಡ ಕೆಪಿಎಲ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ಗೆ 191 ರನ್ಗಳ ನೀಡಿದೆ.</p>.<p>ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಎಲಿಮಿನೇಟರ್’ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್ 20 ಓವರ್ಗಳಲ್ಲಿ 5 ವಿಕೆಟ್ಗೆ 190 ರನ್ ಗಳಿಸಿತು.</p>.<p>ಪವನ್ (ಔಟಾಗದೆ 56, 39 ಎಸೆತ) ಮತ್ತು ವಿನಯ್ (55, 45 ಎಸೆತ) ಅರ್ಧಶತಕ ಗಳಿಸಿ ಮಿಂಚಿದರು. ಈ ಜೋಡಿ ಮೂರನೇ ವಿಕೆಟ್ಗೆ 93 ರನ್ ಸೇರಿಸಿ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿತು.</p>.<p>ಟಾಸ್ ಗೆದ್ದ ಲಯನ್ಸ್ ತಂಡದ ನಾಯಕ ಅಭಿಮನ್ಯು ಮಿಥುನ್ ಅವರು ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಇಳಿಸಿದರು. ಲವನೀತ್ ಸಿಸೋಡಿಯಾ (2) ಅವರನ್ನು ಮಿಥುನ್ ಬೇಗನೇ ಔಟ್ ಮಾಡಿದರು.</p>.<p>ವಿನಯ್ ಮತ್ತು ಮೊಹಮ್ಮದ್ ತಾಹ (41, 22 ಎಸೆತ, 7 ಬೌಂ, 1 ಸಿ.) ಎರಡನೇ ವಿಕೆಟ್ಗೆ 23 ಎಸೆತಗಳಲ್ಲಿ 42 ರನ್ ಸೇರಿಸಿ ತಂಡವನ್ನು ಆರಂಭಿಕ ಕುಸಿತದಿಂದ ಪಾರುಮಾಡಿದರು. ಐದು ಓವರ್ಗಳಲ್ಲಿ ತಂಡದ ಮೊತ್ತ 50ರ ಗಡಿ ದಾಟಿತು.</p>.<p>ಆದರೆ ಏಳನೇ ಓವರ್ನಲ್ಲಿ ತಾಹ ವಿಕೆಟ್ ಪಡೆದ ರಿಷಭ್ ಸಿಂಗ್ ಎದುರಾಳಿ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು. 5 ರಿಂದ 10 ಓವರ್ಗಳ ಅವಧಿಯಲ್ಲಿ 31 ರನ್ಗಳು ಮಾತ್ರ ಬಂದವು. ಕಳೆದ ಪಂದ್ಯದಲ್ಲೂ ಬಿರುಸಿನ ಆಟವಾಡಿದ್ದ ತಾಹ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದರು.</p>.<p>11ನೇ ಓವರ್ನಲ್ಲಿ ಸತತ ಎರಡು ಸಿಕ್ಸರ್ಗಳನ್ನು ಬಾರಿಸಿದ ಪವನ್ ತಂಡದ ರನ್ ವೇಗ ಹೆಚ್ಚಿಸಿದರು. ವಿನಯ್ ಕೂಡಾ ಬಿರುಸಿನ ಹೊಡೆತಗಳ ಮೂಲಕ ಮಿಂಚಿದರು.</p>.<p>ವಿನಯ್ ನಿರ್ಗಮನದ ಬಳಿಕ ಕ್ರೀಸ್ಗೆ ಬಂದ ಪ್ರವೀಣ್ ದುಬೆ ಕೇವಲ 8 ಎಸೆತಗಳಲ್ಲಿ 23 ರನ್ ಗಳಿಸಿದರು. ಇದರಿಂದ ಟೈಗರ್ಸ್ ತಂಡ ಸವಾಲಿನ ಗುರಿ ನೀಡಿತು. ಈ ಪಂದ್ಯದಲ್ಲಿ ಗೆಲುವು ಪಡೆಯುವ ತಂಡ ಶುಕ್ರವಾರ ನಡೆಯುವ ಎರಡನೇ ಕ್ವಾಲಿಫೈಯರ್ನಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಎದುರಿಸಲಿದೆ. ಪ್ಯಾಂಥರ್ಸ್ ತಂಡ ಬುಧವಾರ ನಡೆದಿದ್ದ ಕ್ವಾಲಿಫೈಯರ್–1 ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ಎದುರು 37 ರನ್ಗಳಿಂದ ಪರಾಭವಗೊಂಡಿತ್ತು. ಟಸ್ಕರ್ಸ್ ತಂಡ ಟೂರ್ನಿಯ ಫೈನಲ್ ಪ್ರವೇಶಿಸಿದೆ.</p>.<p><strong>ಸಂಕ್ಷಿಪ್ತ ಸ್ಕೋರ್:</strong> ಹುಬ್ಬಳ್ಳಿ ಟೈಗರ್ಸ್ 20 ಓವರ್ಗಳಲ್ಲಿ 5 ವಿಕೆಟ್ಗೆ 190 (ಮೊಹಮ್ಮದ್ ತಾಹ 42, ಆರ್.ವಿನಯ್ ಕುಮಾರ್ 55, ಕೆ.ಬಿ.ಪವನ್ ಔಟಾಗದೆ 56, ಪ್ರವೀಣ್ ದುಬೆ 23, ಅಭಿಮನ್ಯು ಮಿಥುನ್ 27ಕ್ಕೆ 1,ರಿಷಬ್ ಸಿಂಗ್ 34ಕ್ಕೆ 1).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>