<p><strong>ಸಿಡ್ನಿ:</strong> ಕರ್ನಾಟಕದ ಜೋಡಿ ಮಯಂಕ್ ಅಗರವಾಲ್ ಮತ್ತು ಕೆ.ಎಲ್. ರಾಹುಲ್ ಅವರು ಗುರುವಾರ ಸಿಡ್ನಿಯಲ್ಲಿ ಆರಂಭವಾಗಲಿರುವ ಟೆಸ್ಟ್ನಲ್ಲಿ ಇನಿಂಗ್ಸ್ ಆರಂಭಿಸುವರೇ?</p>.<p>ಬುಧವಾರ ಆಯ್ಕೆಯಾಗಿರುವ 13 ಆಟಗಾರರ ಭಾರತ ತಂಡದ ಪಟ್ಟಿಯ ಮೇಲೆ ಕಣ್ಣಾಡಿಸಿದರೆ ಈ ಸಾಧ್ಯತೆ ದಟ್ಟವಾಗಿದೆ. ಮೆಲ್ಬರ್ನ್ನಲ್ಲಿ ನಡೆದಿದ್ದ ಬಾರ್ಡರ್-ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಮತ್ತು ಮುರಳಿ ವಿಜಯ್ ಅವರನ್ನು ಕೈಬಿಡಲಾಗಿತ್ತು. ಕರ್ನಾಟಕದ ಮಯಂಕ್ ಅಗರವಾಲ್ ಪದಾರ್ಪಣೆ ಮಾಡಿದ್ದರು. ಅವರೊಂದಿಗೆ ಹನುಮವಿಹಾರಿ ಇನಿಂಗ್ಸ್ ಆರಂಭಿಸಿದ್ದರು.</p>.<p>ಆದರೆ, ಅಪ್ಪನಾದ ಸಂಭ್ರಮದಲ್ಲಿರುವ ರೋಹಿತ್ ಶರ್ಮಾ ಅವರು ಭಾರತಕ್ಕೆ ಮರಳಿದ್ದಾರೆ. ಆದ್ದರಿಂದ ಅವರು ಆಡುವ ಆರನೇ ಸ್ಥಾನಕ್ಕೆ ಹನುಮವಿಹಾರಿ ಕಣಕ್ಕಿಳಿಯುವುದು ಖಚಿತ. ಇದರಿಂದಾಗಿ ರಾಹುಲ್ಗೆ ಲಯಕ್ಕೆ ಮರಳಲು ಅವಕಾಶ ಸಿಗುವುದು ಬಹುತೇಕ ಖಚಿತವಾಗಿದೆ.</p>.<p>ಆದ್ದರಿಂದ ಕನ್ನಡಿಗರಿಬ್ಬರು ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಾಗಿದೆ. ಮಯಂಕ್ ಮೆಲ್ಬರ್ನ್ನ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಅರ್ಧಶತಕ ಗಳಿಸಿದ್ದರು. ಎರಡನೇ ಪಂದ್ಯದಲ್ಲಿ 42 ರನ್ ಗಳಿಸಿದ್ದರು.</p>.<p class="Subhead">ಇಶಾಂತ್, ಅಶ್ವಿನ್ ಅಲಭ್ಯ: ವೇಗದ ಬೌಲರ್ ಇಶಾಂತ್ ಶರ್ಮಾ ಮತ್ತು ಆಫ್ಸ್ಪಿನ್ನರ್ ಆರ್. ಅಶ್ವಿನ್ ಅವರು ಗಾಯದಿಂದ ಚೇತರಿಸಿಕೊಂಡಿಲ್ಲ. ಆದ್ದರಿಂದ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಅಶ್ವಿನ್ ಅವರು ಪರ್ತ್ ಮತ್ತು ಮೆಲ್ಬರ್ನ್ ಪಂದ್ಯಗಳಲ್ಲಿಯೂ ಆಡಿರಲಿಲ್ಲ.</p>.<p>‘ಅಶ್ವಿನ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ಎರಡು ಪ್ರವಾಸ ಟೂರ್ನಿಗಳಲ್ಲಿಯೂ ಇದೇ ರೀತಿ ಅಗಿತ್ತು. ಇದು ದುರದೃಷ್ಟಕರ ಸಂಗತಿ. ಅವರು ಸಂಪೂರ್ಣ ಫಿಟ್ ಆದರೆ, ತಂಡಕ್ಕೆ ಮಹತ್ವದ ಕಾಣಿಕೆ ನೀಡಬಲ್ಲರು’ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.</p>.<p>ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 2–1ರಿಂದ ಮುನ್ನಡೆ ಸಾಧಿಸಿದೆ. ಸಿಡ್ನಿಯಲ್ಲಿ ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ, ಮೊದಲ ಬಾರಿಗೆ ಕಾಂಗರೂ ನೆಲದಲ್ಲಿ ಸರಣಿ ಜಯದ ಇತಿಹಾಸ ರಚನೆಯಾಗಲಿದೆ. ಈ ಸಾಧನೆ ಮಾಡಿದ ಭಾರತ ತಂಡದ ಮೊದಲ ನಾಯಕನೆಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರರಾಗಲಿದ್ದಾರೆ. ಆದರೆ ಪಂದ್ಯ ಸೋತರೆ ಸರಣಿ ಡ್ರಾ ಆಗಲಿದೆ.</p>.<p>1947–48ರಿಂದ ಇಲ್ಲಿಯವರೆಗೆ ಭಾರತ ತಂಡವು ಆಸ್ಟ್ರೇಲಿಯಾ ಆಡಿದ ಸರಣಿಗಳಲ್ಲಿ 1980–81, 1985–86 ಮತ್ತು 2003–04 ರಲ್ಲಿ ಮಾತ್ರ ಡ್ರಾ ಮಾಡಿಕೊಂಡಿತ್ತು. ಉಳಿದಂತೆ ಏಳು ಸಲವೂ ಸೋತಿತ್ತು.</p>.<p class="Subhead"><strong>ತಂಡಗಳು:</strong> ಭಾರತ: ವಿರಾಟ್ ಕೊಹ್ಲಿ (ನಾಯಕ), ಮಯಂಕ್ ಅಗರವಾಲ್, ಹನುಮವಿಹಾರಿ, ಕೆ.ಎಲ್. ರಾಹುಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ಕೀಪರ್), ರವೀಂದ್ರ ಜಡೇಜಾ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಕುಲದೀಪ್ ಯಾದವ್. ರವಿಶಾಸ್ತ್ರಿ(ಮುಖ್ಯ ಕೋಚ್).</p>.<p class="Subhead"><strong>ಆಸ್ಟ್ರೇಲಿಯಾ:</strong> ಟಿಮ್ ಪೇನ್(ನಾಯಕ–ವಿಕೆಟ್ಕೀಪರ್), ಮಾರ್ಕಸ್ ಹ್ಯಾರಿಸ್, ಆ್ಯರನ್ ಫಿಂಚ್, ಉಸ್ಮಾನ್ ಖ್ವಾಜಾ, ಟ್ರಾವಿಸ್ ಹೆಡ್, ಶಾನ್ ಮಾರ್ಷ್, ನೇಥನ್ ಲಯನ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್ವುಡ್, ಮಾರ್ನಸ್ ಲಬುಚಾನೆ, ಪೀಟರ್ ಹ್ಯಾಂಡ್ಸ್ಕಂಬ್, ಪೀಟರ್ ಸಿಡ್ಲ್</p>.<p class="Subhead"><strong>ಪಂದ್ಯ ಆರಂಭ:</strong> ಪ್ರತಿದಿನ ಬೆಳಿಗ್ಗೆ 5</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಡ್ನಿ:</strong> ಕರ್ನಾಟಕದ ಜೋಡಿ ಮಯಂಕ್ ಅಗರವಾಲ್ ಮತ್ತು ಕೆ.ಎಲ್. ರಾಹುಲ್ ಅವರು ಗುರುವಾರ ಸಿಡ್ನಿಯಲ್ಲಿ ಆರಂಭವಾಗಲಿರುವ ಟೆಸ್ಟ್ನಲ್ಲಿ ಇನಿಂಗ್ಸ್ ಆರಂಭಿಸುವರೇ?</p>.<p>ಬುಧವಾರ ಆಯ್ಕೆಯಾಗಿರುವ 13 ಆಟಗಾರರ ಭಾರತ ತಂಡದ ಪಟ್ಟಿಯ ಮೇಲೆ ಕಣ್ಣಾಡಿಸಿದರೆ ಈ ಸಾಧ್ಯತೆ ದಟ್ಟವಾಗಿದೆ. ಮೆಲ್ಬರ್ನ್ನಲ್ಲಿ ನಡೆದಿದ್ದ ಬಾರ್ಡರ್-ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಮತ್ತು ಮುರಳಿ ವಿಜಯ್ ಅವರನ್ನು ಕೈಬಿಡಲಾಗಿತ್ತು. ಕರ್ನಾಟಕದ ಮಯಂಕ್ ಅಗರವಾಲ್ ಪದಾರ್ಪಣೆ ಮಾಡಿದ್ದರು. ಅವರೊಂದಿಗೆ ಹನುಮವಿಹಾರಿ ಇನಿಂಗ್ಸ್ ಆರಂಭಿಸಿದ್ದರು.</p>.<p>ಆದರೆ, ಅಪ್ಪನಾದ ಸಂಭ್ರಮದಲ್ಲಿರುವ ರೋಹಿತ್ ಶರ್ಮಾ ಅವರು ಭಾರತಕ್ಕೆ ಮರಳಿದ್ದಾರೆ. ಆದ್ದರಿಂದ ಅವರು ಆಡುವ ಆರನೇ ಸ್ಥಾನಕ್ಕೆ ಹನುಮವಿಹಾರಿ ಕಣಕ್ಕಿಳಿಯುವುದು ಖಚಿತ. ಇದರಿಂದಾಗಿ ರಾಹುಲ್ಗೆ ಲಯಕ್ಕೆ ಮರಳಲು ಅವಕಾಶ ಸಿಗುವುದು ಬಹುತೇಕ ಖಚಿತವಾಗಿದೆ.</p>.<p>ಆದ್ದರಿಂದ ಕನ್ನಡಿಗರಿಬ್ಬರು ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಾಗಿದೆ. ಮಯಂಕ್ ಮೆಲ್ಬರ್ನ್ನ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಅರ್ಧಶತಕ ಗಳಿಸಿದ್ದರು. ಎರಡನೇ ಪಂದ್ಯದಲ್ಲಿ 42 ರನ್ ಗಳಿಸಿದ್ದರು.</p>.<p class="Subhead">ಇಶಾಂತ್, ಅಶ್ವಿನ್ ಅಲಭ್ಯ: ವೇಗದ ಬೌಲರ್ ಇಶಾಂತ್ ಶರ್ಮಾ ಮತ್ತು ಆಫ್ಸ್ಪಿನ್ನರ್ ಆರ್. ಅಶ್ವಿನ್ ಅವರು ಗಾಯದಿಂದ ಚೇತರಿಸಿಕೊಂಡಿಲ್ಲ. ಆದ್ದರಿಂದ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಅಶ್ವಿನ್ ಅವರು ಪರ್ತ್ ಮತ್ತು ಮೆಲ್ಬರ್ನ್ ಪಂದ್ಯಗಳಲ್ಲಿಯೂ ಆಡಿರಲಿಲ್ಲ.</p>.<p>‘ಅಶ್ವಿನ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ಎರಡು ಪ್ರವಾಸ ಟೂರ್ನಿಗಳಲ್ಲಿಯೂ ಇದೇ ರೀತಿ ಅಗಿತ್ತು. ಇದು ದುರದೃಷ್ಟಕರ ಸಂಗತಿ. ಅವರು ಸಂಪೂರ್ಣ ಫಿಟ್ ಆದರೆ, ತಂಡಕ್ಕೆ ಮಹತ್ವದ ಕಾಣಿಕೆ ನೀಡಬಲ್ಲರು’ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.</p>.<p>ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 2–1ರಿಂದ ಮುನ್ನಡೆ ಸಾಧಿಸಿದೆ. ಸಿಡ್ನಿಯಲ್ಲಿ ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ, ಮೊದಲ ಬಾರಿಗೆ ಕಾಂಗರೂ ನೆಲದಲ್ಲಿ ಸರಣಿ ಜಯದ ಇತಿಹಾಸ ರಚನೆಯಾಗಲಿದೆ. ಈ ಸಾಧನೆ ಮಾಡಿದ ಭಾರತ ತಂಡದ ಮೊದಲ ನಾಯಕನೆಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರರಾಗಲಿದ್ದಾರೆ. ಆದರೆ ಪಂದ್ಯ ಸೋತರೆ ಸರಣಿ ಡ್ರಾ ಆಗಲಿದೆ.</p>.<p>1947–48ರಿಂದ ಇಲ್ಲಿಯವರೆಗೆ ಭಾರತ ತಂಡವು ಆಸ್ಟ್ರೇಲಿಯಾ ಆಡಿದ ಸರಣಿಗಳಲ್ಲಿ 1980–81, 1985–86 ಮತ್ತು 2003–04 ರಲ್ಲಿ ಮಾತ್ರ ಡ್ರಾ ಮಾಡಿಕೊಂಡಿತ್ತು. ಉಳಿದಂತೆ ಏಳು ಸಲವೂ ಸೋತಿತ್ತು.</p>.<p class="Subhead"><strong>ತಂಡಗಳು:</strong> ಭಾರತ: ವಿರಾಟ್ ಕೊಹ್ಲಿ (ನಾಯಕ), ಮಯಂಕ್ ಅಗರವಾಲ್, ಹನುಮವಿಹಾರಿ, ಕೆ.ಎಲ್. ರಾಹುಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ಕೀಪರ್), ರವೀಂದ್ರ ಜಡೇಜಾ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಕುಲದೀಪ್ ಯಾದವ್. ರವಿಶಾಸ್ತ್ರಿ(ಮುಖ್ಯ ಕೋಚ್).</p>.<p class="Subhead"><strong>ಆಸ್ಟ್ರೇಲಿಯಾ:</strong> ಟಿಮ್ ಪೇನ್(ನಾಯಕ–ವಿಕೆಟ್ಕೀಪರ್), ಮಾರ್ಕಸ್ ಹ್ಯಾರಿಸ್, ಆ್ಯರನ್ ಫಿಂಚ್, ಉಸ್ಮಾನ್ ಖ್ವಾಜಾ, ಟ್ರಾವಿಸ್ ಹೆಡ್, ಶಾನ್ ಮಾರ್ಷ್, ನೇಥನ್ ಲಯನ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್ವುಡ್, ಮಾರ್ನಸ್ ಲಬುಚಾನೆ, ಪೀಟರ್ ಹ್ಯಾಂಡ್ಸ್ಕಂಬ್, ಪೀಟರ್ ಸಿಡ್ಲ್</p>.<p class="Subhead"><strong>ಪಂದ್ಯ ಆರಂಭ:</strong> ಪ್ರತಿದಿನ ಬೆಳಿಗ್ಗೆ 5</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>