ಎಐಟಿಎಯು ಈ ಬಗ್ಗೆ ವಿವರಣೆ ಕೋರಿ ಸೆ.28 ರಂದು ಮುಕುಂದ್ ಅವರಿಗೆ ನೋಟಿಸ್ ನೀಡಿತ್ತು. ನೋಟಿಸ್ಗೆ ಅ.3 ರಂದು ಉತ್ತರಿಸಿದ್ದ ಮುಕುಂದ್, ‘ತಂಡದ ಪ್ರಾಯೋಜಕರು ನೀಡಿದ್ದ ಉಡುಪು ಆರಾಮದಾಯಕ ಎನಿಸದ ಕಾರಣ ಪಂದ್ಯದ ವೇಳೆ ಧರಿಸಲಿಲ್ಲ. ತಂಡದ ನಾಯಕ ಮತ್ತು ಕೋಚ್ ಅವರ ಅನುಮತಿ ಪಡೆದುಕೊಂಡೇ ಬೇರೆ ಉಡುಪು ಧರಿಸಿದ್ದೆ’ ಎಂದು ಸ್ಪಷ್ಟನೆ ನೀಡಿದ್ದರು.