ನವದೆಹಲಿ: ಹಿರಿಯ ಅಥ್ಲೀಟ್ ಅಶ್ವಿನಿ ನಾಚಪ್ಪ ಮತ್ತು ರಾಷ್ಟ್ರೀಯ ಬ್ಯಾಡ್ಮಿಂಟನ್ ತರಬೇತುದಾರರಾಗಿದ್ದ ವಿಮಲ್ ಕುಮಾರ್ ಅವರನ್ನು ಅರ್ಜುನ ಪ್ರಶಸ್ತಿ ಆಯ್ಕೆ ಸಮಿತಿಗೆ ಕ್ರೀಡಾ ಸಚಿವಾಲಯ ನೇಮಕ ಮಾಡಿದೆ.
ಸಮಿತಿಗೆ ದೆಹಲಿ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಇಂದರ್ಮಿತ್ ಕೌಲ್ ಕೊಚಾರ್ ಅವರು ಮುಖ್ಯಸ್ಥರಾಗಿದ್ದು ಮೂವರು ಹಿರಿಯ ಕ್ರೀಡಾ ಪತ್ರಕರ್ತರು ಕೂಡ ಸದಸ್ಯರಾಗಿರುತ್ತಾರೆ.
ಈ ಕುರಿತು ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಅಶ್ವಿನಿ ಅವರು ತಮಗೆ ಮೌಖಿಕವಾಗಿ ಆಹ್ವಾನ ಬಂದಿದ್ದು ಅಧಿಕೃತ ಪತ್ರಕ್ಕಾಗಿ ಕಾಯುತ್ತಿರುವುದಾಗಿ ತಿಳಿಸಿದರು.