ಪಾಂಡವಪುರ (ಮಂಡ್ಯ ಜಿಲ್ಲೆ): ಕರ್ನಾಟಕ ಕೊಕ್ಕೊ ತಂಡವು ಕ್ಯಾತನಹಳ್ಳಿಯವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಸ್ಮರಣಾರ್ಥ ಅಖಿಲ ಭಾರತ ಪುರುಷರ ಹೊನಲು–ಬೆಳಕಿನ ಕೊಕ್ಕೊ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಬಾರಿಸಿತು.
ಶುಕ್ರವಾರ ಸಂಜೆ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡವು ಕೇವಲ 1 ಅಂಕದ ಅಂತರದಿಂದ ಮುಂಬೈ ಪೊಲೀಸ್ ತಂಡದ ಎದುರು ಜಯಿಸಿತು ಹಾಗೂ ಮುಂಬೈ ಆರ್ಬಿಐ ತಂಡವನ್ನು 2 ಅಂಕಗಳಿಂದ ಸೋಲಿಸಿತು. ನವಮುಂಬೈ ನಗರಪಾಲಿಕೆ ತಂಡವು ಮುಂಬೈ ಪೊಲೀಸ್ ತಂಡವನ್ನು 2 ಅಂಕಗಳಿಂದ ಮಣಿಸಿತು. ಮುಂಬೈ ಪಶ್ವಿಮ ರೈಲ್ವೆ ತಂಡವು ಮಹರಾಷ್ಟ್ರ ರಾಜ್ಯ ಪೊಲೀಸ್ ತಂಡವನ್ನು 11 ಅಂಕಗಳಿಂದ ಸೋಲಿಸಿತು. ಮಹಾರಾಷ್ಟ್ರ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ತಂಡವು ಸಿಕಂದರಾಬಾದ್ ರೈಲ್ವೆ ತಂಡವನ್ನು 1 ಅಂಕದಿಂದ ಪರಾಭವಗೊಳಿಸಿತು.
ಸೆಂಟರ್ ರೈಲ್ವೆ 1 ಅಂಕದಿಂದ ಗ್ರೇಟರ್ ಮುಂಬೈ ನಗರ ಪಾಲಿಕೆಯನ್ನು, ನವ ಮುಂಬೈ ನಗರ ಪಾಲಿಕೆ ತಂಡವು ಸಿಕಂದರಾಬಾದ್ ತಂಡವನ್ನು ಏಕೈಕ ಅಂಕದಿಂದ ಮಣಿಸಿತು. ಮಹಾರಾಷ್ಟ್ರ ರಾಜ್ಯ ಪೊಲೀಸ್, ಕರ್ನಾಟಕ ಅಧ್ಯಕ್ಷರ ಇಲೆವೆನ್ ತಂಡವನ್ನು ಮಣಿಸಿತು.