ಸೆಮಿಫೈನಲ್ ಪಂದ್ಯದ ಸಂದರ್ಭದಲ್ಲಿ ಕೊಲ್ಹಾಪುರ ಪೊಲೀಸ್ ತಂಡದವರು ರೆಫರಿ ಶ್ರೇಯಸ್ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ ಘಟನೆ ನಡೆದಿದೆ. ನಿಗದಿತ ಅವಧಿಯ ಕೊನೆಯ ನಿಮಿಷದಲ್ಲಿ ಹೈದರಾಬಾದ್ ತಂಡಕ್ಕೆ ರೆಫರಿ, ಪೆನಾಲ್ಟಿ ಕಾರ್ನರ್ ನೀಡಿದ್ದರು. ಇದನ್ನು ಪ್ರಶ್ನಿಸಿದ ಕೊಲ್ಹಾಪುರ ತಂಡದ ಆಟಗಾರರು ಹಲ್ಲೆ ಮಾಡಿದ್ದಾರೆ. ಮೂರನೇ ಸ್ಥಾನಕ್ಕಾಗಿ ನೈರುತ್ಯ ರೈಲ್ವೆ ಮತ್ತು ಕೊಲ್ಹಾಪುರ ತಂಡಗಳು ಮುಖಾಮುಖಿಯಾಗಬೇಕಾಗಿತ್ತು. ಆದರೆ ಪಂದ್ಯ ರದ್ದುಪಡಿಸಿ ರೈಲ್ವೆ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.