<p><strong>ಅಂತಾಲ್ಯ (ಟರ್ಕಿ)</strong>: ನಿರಾಶಾದಾಯಕ ನಿರ್ವಹಣೆ ತೋರಿದ ಭಾರತದ ಆರ್ಚರಿ ಪಟುಗಳು ಶನಿವಾರ ಮುಕ್ತಾಯಗೊಂಡ ಆರ್ಚರಿ ವಿಶ್ವಕಪ್ ಸ್ಟೇಜ್3 ಕೂಟದಲ್ಲಿ ಒಂದೂ ಪದಕ ಗೆಲ್ಲದೇ ಬರಿಗೈಯಲ್ಲಿ ಮರಳಿದರು. ಏಷ್ಯನ್ ಕ್ರೀಡೆಗಳಿಗೆ ಕೇವಲ ಒಂದು ವರ್ಷ ಉಳಿದಿರುವಂತೆ ಭಾರತ ತಂಡದ ಈ ಕಳಪೆ ಪ್ರದರ್ಶನವು, ತಂಡದ ಆಯ್ಕೆ, ಸಿದ್ಧತೆ, ಮನೋಬಲದ ಮೇಲೆ ಗಂಭೀರ ಪ್ರಶ್ನೆ ಮೂಡಿಸಿದೆ.</p>.<p>ಮೇ ತಿಂಗಳಲ್ಲಿ ಶಾಂಘೈನಲ್ಲಿ ನಡೆದ ವಿಶ್ವಕಪ್ ಸ್ಟೇಜ್ 2 ಕೂಟದಲ್ಲಿ ಭಾರತದ ಬಿಲ್ಗಾರರು ಎರಡು ಚಿನ್ನ, ಒಂದು ಬೆಳ್ಳಿ, ನಾಲ್ಕು ಕಂಚಿನ ಪದಕ ಗೆದ್ದುಕೊಂಡು ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದು ಗಮನಸೆಳೆದಿದ್ದರು. ಆದರೆ ಈಗ ಅದು ಗತವೈಭವದಂತೆ ಕಂಡಿದೆ. </p>.<p>ಅಂತ್ಯಾಲದಲ್ಲಿ ಕಳಪೆ ನಿರ್ವಹಣೆ ಅಚ್ಚರಿ ಮೂಡಿಸಿತು. ಭಾರತ ಪ್ರಬಲವಾಗಿರುವ ಕಾಂಪೌಂಡ್ ಆರ್ಚರಿಯಲ್ಲಿ ಒಂದೂ ಪದಕ ಬರಲಿಲ್ಲ.</p>.<p>ಶುಕ್ರವಾರ ವೈಯಕ್ತಿಕ ಮತ್ತು ಟೀಮ್ ವಿಭಾಗದಲ್ಲಿ ಕಾಂಪೌಂಡ್ ಆರ್ಚರಿ ಸ್ಪರ್ಧಿಗಳು ಹೊರಬಿದ್ದಿದ್ದರು. ನಂತರ ರಿಕರ್ವ್ ವಿಭಾಗದಲ್ಲೂ ನಿರಾಶೆ ಮುಂದುವರಿಯಿತು. ಅನುಭವಿ, ನಾಲ್ಕು ಬಾರಿಯ ಒಲಿಂಪಿಯನ್ಗಳಾದ ದೀಪಿಕಾ ಕುಮಾರಿ, ತರುಣದೀಪ್ ರೈ ಸಹ ಪದಕ ಸುತ್ತಿಗೇರಲು ವಿಫಲರಾದರು.</p>.<p>ಇದ್ದುದರಲ್ಲಿ ಸಮಾಧಾನ ಮೂಡಿಸಿದವರೆಂದರೆ ಸಿಮ್ರಣಜಿತ್ ಕೌರ್ ಅವರ ಆಟ. ಶನಿವಾರ ನಡೆದ ಕ್ವಾರ್ಟರ್ಫೈನಲ್ನಲ್ಲಿ ಸೋಲುವ ಮೊದಲು ಒಲಿಂಪಿಕ್ ಸ್ವರ್ಣ ವಿಜೇತೆ ಅನ್ ಸಾನ್ ಅವರಿಗೆ ಶೂಟ್ಆಫ್ವರೆಗೆ ಪೈಪೋಟಿ ನೀಡಿದರು.</p>.<p>ದೀಪಿಕಾ, ಕೊರಿಯಾದ ಪ್ರಬಲ ಎದುರಾಳಿ ವಿರುದ್ಧ ಮತ್ತೊಮ್ಮೆ ನಿರಾಶೆ ಮೂಡಿಸಿದರು. ಅಂಕಿಯಾ ಭಕತ್ ಮೊದಲ ಸುತ್ತಿನಲ್ಲೇ ಹೊರಬಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಂತಾಲ್ಯ (ಟರ್ಕಿ)</strong>: ನಿರಾಶಾದಾಯಕ ನಿರ್ವಹಣೆ ತೋರಿದ ಭಾರತದ ಆರ್ಚರಿ ಪಟುಗಳು ಶನಿವಾರ ಮುಕ್ತಾಯಗೊಂಡ ಆರ್ಚರಿ ವಿಶ್ವಕಪ್ ಸ್ಟೇಜ್3 ಕೂಟದಲ್ಲಿ ಒಂದೂ ಪದಕ ಗೆಲ್ಲದೇ ಬರಿಗೈಯಲ್ಲಿ ಮರಳಿದರು. ಏಷ್ಯನ್ ಕ್ರೀಡೆಗಳಿಗೆ ಕೇವಲ ಒಂದು ವರ್ಷ ಉಳಿದಿರುವಂತೆ ಭಾರತ ತಂಡದ ಈ ಕಳಪೆ ಪ್ರದರ್ಶನವು, ತಂಡದ ಆಯ್ಕೆ, ಸಿದ್ಧತೆ, ಮನೋಬಲದ ಮೇಲೆ ಗಂಭೀರ ಪ್ರಶ್ನೆ ಮೂಡಿಸಿದೆ.</p>.<p>ಮೇ ತಿಂಗಳಲ್ಲಿ ಶಾಂಘೈನಲ್ಲಿ ನಡೆದ ವಿಶ್ವಕಪ್ ಸ್ಟೇಜ್ 2 ಕೂಟದಲ್ಲಿ ಭಾರತದ ಬಿಲ್ಗಾರರು ಎರಡು ಚಿನ್ನ, ಒಂದು ಬೆಳ್ಳಿ, ನಾಲ್ಕು ಕಂಚಿನ ಪದಕ ಗೆದ್ದುಕೊಂಡು ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದು ಗಮನಸೆಳೆದಿದ್ದರು. ಆದರೆ ಈಗ ಅದು ಗತವೈಭವದಂತೆ ಕಂಡಿದೆ. </p>.<p>ಅಂತ್ಯಾಲದಲ್ಲಿ ಕಳಪೆ ನಿರ್ವಹಣೆ ಅಚ್ಚರಿ ಮೂಡಿಸಿತು. ಭಾರತ ಪ್ರಬಲವಾಗಿರುವ ಕಾಂಪೌಂಡ್ ಆರ್ಚರಿಯಲ್ಲಿ ಒಂದೂ ಪದಕ ಬರಲಿಲ್ಲ.</p>.<p>ಶುಕ್ರವಾರ ವೈಯಕ್ತಿಕ ಮತ್ತು ಟೀಮ್ ವಿಭಾಗದಲ್ಲಿ ಕಾಂಪೌಂಡ್ ಆರ್ಚರಿ ಸ್ಪರ್ಧಿಗಳು ಹೊರಬಿದ್ದಿದ್ದರು. ನಂತರ ರಿಕರ್ವ್ ವಿಭಾಗದಲ್ಲೂ ನಿರಾಶೆ ಮುಂದುವರಿಯಿತು. ಅನುಭವಿ, ನಾಲ್ಕು ಬಾರಿಯ ಒಲಿಂಪಿಯನ್ಗಳಾದ ದೀಪಿಕಾ ಕುಮಾರಿ, ತರುಣದೀಪ್ ರೈ ಸಹ ಪದಕ ಸುತ್ತಿಗೇರಲು ವಿಫಲರಾದರು.</p>.<p>ಇದ್ದುದರಲ್ಲಿ ಸಮಾಧಾನ ಮೂಡಿಸಿದವರೆಂದರೆ ಸಿಮ್ರಣಜಿತ್ ಕೌರ್ ಅವರ ಆಟ. ಶನಿವಾರ ನಡೆದ ಕ್ವಾರ್ಟರ್ಫೈನಲ್ನಲ್ಲಿ ಸೋಲುವ ಮೊದಲು ಒಲಿಂಪಿಕ್ ಸ್ವರ್ಣ ವಿಜೇತೆ ಅನ್ ಸಾನ್ ಅವರಿಗೆ ಶೂಟ್ಆಫ್ವರೆಗೆ ಪೈಪೋಟಿ ನೀಡಿದರು.</p>.<p>ದೀಪಿಕಾ, ಕೊರಿಯಾದ ಪ್ರಬಲ ಎದುರಾಳಿ ವಿರುದ್ಧ ಮತ್ತೊಮ್ಮೆ ನಿರಾಶೆ ಮೂಡಿಸಿದರು. ಅಂಕಿಯಾ ಭಕತ್ ಮೊದಲ ಸುತ್ತಿನಲ್ಲೇ ಹೊರಬಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>