ಅರ್ಜುನ್ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯ 14 ವರ್ಷದ ನರೇನ್ ನಿಕಟ ಪೈಪೋಟಿಯನ್ನು ಎದುರಿಸಿ ಪ್ರಥಮರಾದರು. ತುಮಕೂರಿನ ವಿವೇಕಾನಂದ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ನ ಕಿರಣ್ ನಂದನ ಅವರು ಬೆಳ್ಳಿ ಮತ್ತುಕರ್ನಾಟಕ ರೈಫಲ್ಸ್ ಅಸೋಸಿಯೇಷನ್ನ ಶ್ರೀಕೃಷ್ಣ ಕಂಚು ಗಳಿಸಿದರು. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದವರಿಗೆ ಕ್ರಮವಾಗಿ ₹1 ಲಕ್ಷ, ₹ 50ಸಾವಿರ ಮತ್ತು ₹ 25 ಸಾವಿರ ನಗದು ಪ್ರಶಸ್ತಿ ನೀಡಲಾಯಿತು. ಅಂಗವಿಕಲರ ವಿಭಾ ಗದಲ್ಲಿ ಜ್ಯೋತಿ ಸಣ್ಣಕ್ಕಿ ಚಿನ್ನ ಗೆದ್ದರೆ, ಸಚಿನ್ ಸಿದ್ದಣ್ಣವರ್ ಬೆಳ್ಳಿ ಹಾಗೂ ಶಂಕರಲಿಂಗ ತವಳಿ ಕಂಚು ಗಳಿಸಿದರು.