<p><strong>ನವದೆಹಲಿ:</strong> ಒಲಿಂಪಿಕ್ ಪದಕ ವಿಜೇತೆ ಲವ್ಲೀನಾ ಬೊರ್ಗಹೇನ್ ಸೇರಿದಂತೆ ಅಸ್ಸಮ್ನ ಬಾಕ್ಸರ್ಗಳು ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಭಾಗಹಿಸದಂತೆ, ಅಮಾನತಾಗಿರುವ ಭಾರತ ಬಾಕ್ಸಿಂಗ್ ಫೆಡರೇಷನ್ನ ಮಹಾ ಪ್ರಧಾನ ಕಾರ್ಯದರ್ಶಿ ಹೇಮಂತ ಕಲಿತಾ ತಡೆಯುತ್ತಿದ್ದರು ಎಂದು ಫೆಡರೇಷನ್ನ ಅಧ್ಯಕ್ಷ ಅಜಯ್ ಸಿಂಗ್ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಹೇಮಂತ ನಿರಾಕರಿಸಿ ದ್ದಾರೆ.</p><p>ಟೋಕಿಯೊ ಒಲಿಂಪಿಕ್ಸ್ನ ಲ್ಲಿ 69 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದ ಲವ್ಲೀನಾ ಅವರು ಗುರುವಾರ ಆರಂಭವಾಗುವ ದೇಶದ ಈ ಪ್ರಮುಖ ಕೂಟದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದರು. ಆದರೆ ಅವರಿಗೆ ಹಿಂದೆಸರಿಯುವಂತೆ ಕಲಿತಾ ಸೂಚಿಸಿದರು ಎಂದು ಅಜಯ್ ಸಿಂಗ್ ಅವರು ಬುಧವಾರ ‘ತುರ್ತು ಪತ್ರಿಕಾ ಗೋಷ್ಠಿ’ಯಲ್ಲಿ ತಿಳಿಸಿದರು.</p><p>ಹೇಮಂತ ಕಲಿತಾ ಅವರು ಅಸ್ಸಾಂ ಬಾಕ್ಸಿಂಗ್ ಸಂಸ್ಥೆಯಲ್ಲಿ ಕಾರ್ಯದರ್ಶಿ ಆಗಿದ್ದಾರೆ. </p><p>ಫೆಡರೇಷನ್ನಲ್ಲಿ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿ ತನಿಖೆ ನಡೆಸಿದ್ದ ದೆಹಲಿ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರು ಮಂಗಳವಾರ ನೀಡಿದ ವರದಿಯ ಆಧಾರದಲ್ಲಿ ಹೇಮಂತ ಅವರನ್ನು ಮಂಗಳವಾರ ಅಮಾನತು ಮಾಡಲಾಗಿತ್ತು.</p><p>‘ಮಹಿಳಾ ರಾಷ್ಟ್ರೀಯ ಕೂಟದಲ್ಲಿ ಭಾಗವಹಿಸದಂತೆ ಅಸ್ಸಾಂನ ಸಂಸ್ಥೆ ಮಹಿಳೆಯರನ್ನು ನಿರುತ್ತೇಜಿಸುತ್ತಿದೆ’ ಎಂದು ಸಿಂಗ್ ದೂರಿದರು.</p><p>ನಿರಾಕರಿಸಿದ ಕಲಿತಾ: ಆದರೆ, ‘ಈ ಆರೋಪಗಳು ಆಧಾರರಹಿತ’ ಎಂದಿರುವ ಕಲಿತಾ, ಸಮಸ್ಯೆ ಇದ್ದುದು ಈ ಕೂಟದ ದಿನಾಂಕ ನಿಗದಿಯ ಬಗ್ಗೆ ಎಂದರು.</p><p>‘ನನ್ನ ಹೆಸರು ಕೆಡಿಸಲು ಇಂಥ ಆರೋಪ ಮಾಡಲಾಗುತ್ತಿದೆ. ಅಂಥ ದ್ದೇನನ್ನೂ ನಾನು ಮಾಡಿಲ್ಲ. ಈ ಟೂರ್ನಿಯ ದಿನಾಂಕದ ಬಗ್ಗೆ ರಾಜ್ಯ ಘಟಕಗಳಿಗೆ ಸಮಾಧಾನ ಇರಲಿಲ್ಲ. ಬಿಎಫ್ಐಗೆ ಹಲವು ರಾಜ್ಯ ಘಟಕಗಳು ಈ ಬಗ್ಗೆ ಪತ್ರವನ್ನೂ ಬರೆದಿದ್ದವು’ ಎಂದು ಅವರು ಪಿಟಿಐಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಒಲಿಂಪಿಕ್ ಪದಕ ವಿಜೇತೆ ಲವ್ಲೀನಾ ಬೊರ್ಗಹೇನ್ ಸೇರಿದಂತೆ ಅಸ್ಸಮ್ನ ಬಾಕ್ಸರ್ಗಳು ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಭಾಗಹಿಸದಂತೆ, ಅಮಾನತಾಗಿರುವ ಭಾರತ ಬಾಕ್ಸಿಂಗ್ ಫೆಡರೇಷನ್ನ ಮಹಾ ಪ್ರಧಾನ ಕಾರ್ಯದರ್ಶಿ ಹೇಮಂತ ಕಲಿತಾ ತಡೆಯುತ್ತಿದ್ದರು ಎಂದು ಫೆಡರೇಷನ್ನ ಅಧ್ಯಕ್ಷ ಅಜಯ್ ಸಿಂಗ್ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಹೇಮಂತ ನಿರಾಕರಿಸಿ ದ್ದಾರೆ.</p><p>ಟೋಕಿಯೊ ಒಲಿಂಪಿಕ್ಸ್ನ ಲ್ಲಿ 69 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದ ಲವ್ಲೀನಾ ಅವರು ಗುರುವಾರ ಆರಂಭವಾಗುವ ದೇಶದ ಈ ಪ್ರಮುಖ ಕೂಟದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದರು. ಆದರೆ ಅವರಿಗೆ ಹಿಂದೆಸರಿಯುವಂತೆ ಕಲಿತಾ ಸೂಚಿಸಿದರು ಎಂದು ಅಜಯ್ ಸಿಂಗ್ ಅವರು ಬುಧವಾರ ‘ತುರ್ತು ಪತ್ರಿಕಾ ಗೋಷ್ಠಿ’ಯಲ್ಲಿ ತಿಳಿಸಿದರು.</p><p>ಹೇಮಂತ ಕಲಿತಾ ಅವರು ಅಸ್ಸಾಂ ಬಾಕ್ಸಿಂಗ್ ಸಂಸ್ಥೆಯಲ್ಲಿ ಕಾರ್ಯದರ್ಶಿ ಆಗಿದ್ದಾರೆ. </p><p>ಫೆಡರೇಷನ್ನಲ್ಲಿ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿ ತನಿಖೆ ನಡೆಸಿದ್ದ ದೆಹಲಿ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರು ಮಂಗಳವಾರ ನೀಡಿದ ವರದಿಯ ಆಧಾರದಲ್ಲಿ ಹೇಮಂತ ಅವರನ್ನು ಮಂಗಳವಾರ ಅಮಾನತು ಮಾಡಲಾಗಿತ್ತು.</p><p>‘ಮಹಿಳಾ ರಾಷ್ಟ್ರೀಯ ಕೂಟದಲ್ಲಿ ಭಾಗವಹಿಸದಂತೆ ಅಸ್ಸಾಂನ ಸಂಸ್ಥೆ ಮಹಿಳೆಯರನ್ನು ನಿರುತ್ತೇಜಿಸುತ್ತಿದೆ’ ಎಂದು ಸಿಂಗ್ ದೂರಿದರು.</p><p>ನಿರಾಕರಿಸಿದ ಕಲಿತಾ: ಆದರೆ, ‘ಈ ಆರೋಪಗಳು ಆಧಾರರಹಿತ’ ಎಂದಿರುವ ಕಲಿತಾ, ಸಮಸ್ಯೆ ಇದ್ದುದು ಈ ಕೂಟದ ದಿನಾಂಕ ನಿಗದಿಯ ಬಗ್ಗೆ ಎಂದರು.</p><p>‘ನನ್ನ ಹೆಸರು ಕೆಡಿಸಲು ಇಂಥ ಆರೋಪ ಮಾಡಲಾಗುತ್ತಿದೆ. ಅಂಥ ದ್ದೇನನ್ನೂ ನಾನು ಮಾಡಿಲ್ಲ. ಈ ಟೂರ್ನಿಯ ದಿನಾಂಕದ ಬಗ್ಗೆ ರಾಜ್ಯ ಘಟಕಗಳಿಗೆ ಸಮಾಧಾನ ಇರಲಿಲ್ಲ. ಬಿಎಫ್ಐಗೆ ಹಲವು ರಾಜ್ಯ ಘಟಕಗಳು ಈ ಬಗ್ಗೆ ಪತ್ರವನ್ನೂ ಬರೆದಿದ್ದವು’ ಎಂದು ಅವರು ಪಿಟಿಐಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>