ನವದೆಹಲಿ; ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಂತಹ ದಬ್ಬಾಳಿಕೆಗಾರರನ್ನು ಭಾರತದ ಕ್ರೀಡಾ ಕ್ಷೇತ್ರದಿಂದ ಹೊರಹಾಕಲು ಏನಾದರೂ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿರುವ ಪ್ರತಿಭಟನನಿರತ ಕುಸ್ತಿಪಟುಗಳಾದ ವಿನೇಶಾ ಫೋಗಾಟ್ ಮತ್ತು ಸಾಕ್ಷಿ ಮಲಿಕ್, ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ)ಗೆ ಆಡಳಿತಾತ್ಮಕ ಅಧಿಕಾರ ಹಸ್ತಾಂತರಿಸಿರುವ ಐಒಎ ನಿರ್ಧಾರವನ್ನು ಖಂಡಿಸಿದ್ದಾರೆ.