<p class="rtejustify">ಆತ್ಮೀಯರೊಬ್ಬರ ಮಗ ಇತ್ತೀಚೆಗೆ ಎದುರಿಸಿದ ದಾರುಣ ಅನುಭವವನ್ನು ಇಲ್ಲಿ ಪ್ರಸ್ತಾಪಿಸಲು ಇಚ್ಛಿಸುತ್ತೇನೆ. ಶಿಕ್ಷೆ ಈ ಹೊತ್ತಿಗೆ ತಳೆದಿರುವ ನಕಾರಾತ್ಮಕ ಸ್ವರೂಪ ಎಂಥದ್ದು ಎಂಬುದನ್ನು ಅರ್ಥೈಸಿಕೊಳ್ಳಲು ಇದು ನೆರವಾಗಬಹುದು ಎನಿಸುತ್ತದೆ.<br /> <br /> ಆಗಿದ್ದಿಷ್ಟು- ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಆ ಬಾಲಕ ಅಧ್ಯಯನದಲ್ಲಿ ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದು. ಶಿಸ್ತಿನ ವಿಷಯದಲ್ಲಂತೂ ಹಿರಿಯರಿಗಿಂತಾ ತುಸು ಹೆಚ್ಚಿನ ಕಾಳಜಿ, ಬದ್ಧತೆ. ವಯೋಸಹಜವಾಗಿ ಆಟಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರೂ ಓದಿನ ವಿಷಯದಲ್ಲಿ ಮಾತ್ರ ಕರಾರುವಾಕ್ಕು.</p>.<p class="rtejustify">ಇಂಥ ಹುಡುಗ ಒಂದು ದಿನ ಶಾಲೆಯಿಂದ ಹಿಂದಿರುಗಿದ ಬಳಿಕ ಆಟದೆಡೆಗೆ ಆಸಕ್ತಿ ತೋರುವ ಬದಲು ಮಲಗಲು ಅಣಿಯಾದ. ಅಮ್ಮನ ಜೊತೆಗೆ ಮಾತಿಲ್ಲ. `ಏನಾಯ್ತು' ಎಂಬ ಪ್ರಶ್ನೆಗೆ ಬರೀ ಮೌನವೇ ಉತ್ತರ. ಎರಡು ತಿಂಗಳ ಹಿಂದಷ್ಟೇ ಜ್ವರದಿಂದ ಬಳಲುತ್ತಿದ್ದಾಗಲೂ ಉತ್ಸಾಹದಿಂದ ಇದ್ದವ ಈಗ ಹೀಗೇಕೆ ಮಂಕಾದ ಎಂದು ಕೊರಗಿದ ಅಮ್ಮ, ಒಂದಷ್ಟು ಹೊತ್ತಿನ ನಂತರ ಮತ್ತದೇ ಪ್ರಶ್ನೆಯೊಂದಿಗೆ ವಿಚಾರಿಸಿದರು. ಆಗ ಅವನೊಳಗಿನ ಆತಂಕ ಅನಾವರಣಗೊಂಡಿತು.<br /> <br /> `ಅಮ್ಮೋ, ನಾನು ಇವತ್ತು ಒನ್ ಅವರ್ ಬಿಸಿಲಲ್ಲಿ ನಿಲ್ಲಬೇಕಾಯ್ತು. ಬೆಳಗಿನ ಪ್ರಯರ್ ಮುಗಿದ ನಂತ್ರ ಎಲ್ಲರನ್ನೂ ಹೀಗೇ ನಿಲ್ಲಿಸಿದ್ರು. ನಾನೇನೂ ತಪ್ಪು ಮಾಡಿರಲಿಲ್ಲ' ಎಂದು ಹೇಳಿದ. ಸ್ವತಃ ಶಿಕ್ಷಕಿಯಾದ ಆ ಬಾಲಕನ ತಾಯಿ ಮಗನ ಶಾಲೆಯ ಕೆಲವು ಶಿಕ್ಷಕರೊಂದಿಗೆ ಮಾತನಾಡಿದರು. ಆಗ ಸಂಪೂರ್ಣ ವಿಷಯ ತಿಳಿಯಿತು.<br /> <br /> ಶಾಲೆಯಲ್ಲಿ ಕೆಲವು ಮಕ್ಕಳು ಶಿಸ್ತಿನಿಂದ ಇರಲಿಲ್ಲ. ಕ್ರಮೇಣ ಅಶಿಸ್ತಿನ ವರ್ತನೆಗಳು ಹೆಚ್ಚಾಗುತ್ತಿದ್ದವು. ಇಂಥ ವರ್ತನೆಗಳು ವಿದ್ಯಾಸಂಸ್ಥೆಗೆ ಕೆಟ್ಟ ಹೆಸರು ತರುತ್ತವೆ ಎಂಬ ಕಾರಣಕ್ಕೆ ಮುಖ್ಯೋಪಾಧ್ಯಾಯರು ಅಶಿಸ್ತನ್ನು ಇಲ್ಲವಾಗಿಸಲು ಕಂಡುಕೊಂಡದ್ದು ವಿಚಿತ್ರ ಶಿಕ್ಷೆಯ ಮಾರ್ಗ. ಪ್ರಾರ್ಥನೆಯ ನಂತರ ಮಕ್ಕಳನ್ನು ಅವರವರ ತರಗತಿಗಳಿಗೆ ಕಳುಹಿಸದೇ `ನಿಮ್ಮ ವರ್ತನೆಗಳು ಹದ್ದುಮೀರುತ್ತಿವೆ.<br /> <br /> ನಿಮ್ಮ ಈ ಅಶಿಸ್ತಿಗಾಗಿ ಒಂದು ಗಂಟೆಯ ಕಾಲ ನೀವೆಲ್ಲ ಹೀಗೇ ನಿಂತಿರಬೇಕು. ಆ ಮೂಲಕ, ಶಿಸ್ತಿನಿಂದ ಇರಬೇಕು ಎಂಬುದನ್ನು ತಿಳಿದುಕೊಳ್ಳಬೇಕು' ಎಂದು ತಾಕೀತು ಮಾಡಿದ್ದರು. ಈ ವೃತ್ತಾಂತವನ್ನು ಕೇಳಿದ ಮೇಲೆ ನನಗನಿಸಿದ್ದು `ಶಿಸ್ತನ್ನು ನೆಲೆಗೊಳಿಸಲು ಶಿಕ್ಷೆ ಇರಬೇಕು, ಆದರೆ ಶಿಸ್ತಿನ ಹೆಸರಲ್ಲಿ ಅಶಿಸ್ತಿನ ಶಿಕ್ಷೆ ಏಕೆ?'.<br /> <br /> ಯಾವ ತಪ್ಪೂ ಮಾಡಿರದ ಆ ಬಾಲಕನಂತೆಯೇ ಅಲ್ಲಿ ಹಲವರು ಇದ್ದಿರಬಹುದು. ಅವರಲ್ಲಿ ಕೆಲವರು ಮನೆಗೆ ಹಿಂದಿರುಗಿದ ನಂತರ ಪಾಲಕರ ಅತಿ ಭಯಂಕರ ದೂರ್ವಾಸ ರೂಪವನ್ನು ನೆನೆದು ಅದನ್ನು ಹೇಳಿಕೊಳ್ಳದೆ ಒಳಗೊಳಗೇ ಕೊರಗಿರಬಹುದು. ಆ ಕ್ಷಣಕ್ಕೆ ಅವರೊಳಗೆ ನಡೆಯುವ ನೈತಿಕ ಹೊಯ್ದೊಟಗಳು ಶಾಲೆಯನ್ನು ರಾಕ್ಷಸಾಕೃತಿಯ ಪಡಿಯಚ್ಚು ಎಂಬಂತೆ ಬಿಂಬಿಸಬಹುದು.<br /> <br /> ಡಬ್ಲ್ಯುಡಬ್ಲ್ಯುಎಫ್ನಲ್ಲಿ ದೈತ್ಯಾಕಾರದ ದೇಹಿಗಳು ಸೆಣಸಾಡುವಾಗ ತೋರುವ ಕ್ರೌರ್ಯದ ಮುಖದಂತೆಯೇ ಶಾಲೆಯನ್ನೂ ಕಲ್ಪಿಸಿಕೊಳ್ಳಬಹುದು. `ಛೋಟಾ ಭೀಮ್'ನಂತಹ ಕಾರ್ಟೂನ್ ಧಾರಾವಾಹಿಗಳಲ್ಲಿ ಬರುವ ವಿಲನ್ ಪಾತ್ರಗಳ ತದ್ರೂಪಿನಂತೆ ಮುಖ್ಯೋಪಾಧ್ಯಾಯರನ್ನು ಮತ್ತು ಇತರ ಶಿಕ್ಷಕರನ್ನು ಪರಿಗಣಿಸಬಹುದು.</p>.<p class="rtejustify">ಇಂಥ ಸಂದರ್ಭದಲ್ಲಿ ರಾಕ್ಷಸ, ವಿಲನ್ ಪಾತ್ರಗಳನ್ನು ಸದೆಬಡಿಯುವ ಹೀರೊಗಳು ನಮ್ಮ ನೆರವಿಗೆ ಬರಬಾರದೇ ಎಂಬ ಆಲೋಚನೆಗಳು ಮೊಳಕೆಯೊಡೆಯಬಹುದು. ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ಅನಿವಾರ್ಯತೆಯು ಅವರೊಳಗೆ ಇಡೀ ಶಾಲೆಯ ಬಗ್ಗೆ ತಪ್ಪು ತಿಳಿವಳಿಕೆಗಳನ್ನು ಹುಟ್ಟುಹಾಕುವಷ್ಟರ ಮಟ್ಟಿಗೆ ಪ್ರಭಾವಿ ಆಗಿರುತ್ತದೆ.</p>.<p class="rtejustify">ಇಂಥ ವೇಳೆ ಅಮ್ಮ, ಅಪ್ಪನ ಆಪ್ತತೆ, ಆತ್ಮೀಯ ಸಮಾಲೋಚನೆ ದಕ್ಕದಿದ್ದರೆ `ಸರಿಯಾಗಿದ್ದರೂ ಶಿಕ್ಷೆ, ಸರಿಯಾಗಿರದಿದ್ದರೂ ಶಿಕ್ಷೆ' ಎನ್ನುವುದಾದರೆ `ಸರಿಯಾಗಿರದೇ ಶಿಕ್ಷೆ ಅನುಭವಿಸುವುದೇ ಲೇಸು' ಎಂಬಂಥ ಅಪಾಯಕಾರಿ ನಿರ್ಣಯಕ್ಕೂ ಪಕ್ಕಾಗಬಹುದು.<br /> <br /> ಮೊದಲ ಬಾರಿಗೆ ಶಾಲೆ ಪ್ರವೇಶಿಸಿದ ಮಗು ಕ್ರಮೇಣ ಶೈಕ್ಷಣಿಕ ಶಿಸ್ತಿನ ಪ್ರಜ್ಞೆಯೊಂದಿಗೆ ತನ್ನನ್ನು ಗುರುತಿಸಿಕೊಳ್ಳುತ್ತದೆ. ತಪ್ಪುಗಳಾದ ಸಂದರ್ಭದಲ್ಲಿ ಎಚ್ಚರಿಸಿದಾಗ ಅದನ್ನು ತಿದ್ದಿಕೊಂಡು, ಇನ್ನೊಂದು ಸಲ ಹೀಗಾಗಬಾರದು ಎಂಬ ಎಚ್ಚರವನ್ನು ಜಾಗೃತಗೊಳಿಸಿಕೊಳ್ಳುತ್ತದೆ.</p>.<p class="rtejustify">ಇಂಥದ್ದೊಂದು ಪ್ರಜ್ಞೆಯೊಂದಿಗೆ ಇರುವ ಮಕ್ಕಳಿಗೆ ಅವರದಲ್ಲದ ತಪ್ಪಿಗೆ ಸಾಮೂಹಿಕವಾಗಿ ಶಿಕ್ಷೆ ಎದುರಿಸುವ ಸಂದರ್ಭ ಎದುರಾದರೆ, ಅವರೊಳಗೆ ಸಕಾರಾತ್ಮಕತೆಯ ಬಗ್ಗೆಯೇ ನಿರಾಸೆ ಮೊಳಕೆಯೊಡೆಯುತ್ತದೆ. ಆ ನಿರಾಸೆ ಅಸಮಾಧಾನವಾಗಿ ಪರಿವರ್ತಿತವಾಗುವ ಅಪಾಯ ಇರುತ್ತದೆ.</p>.<p class="rtejustify">ಅಸಮಾಧಾನ ಬಹಳ ದಿನಗಳ ಕಾಲ ಮಕ್ಕಳ ಮನಸ್ಸಿನಲ್ಲಿ ಇದ್ದರೆ ಅವರೊಳಗಿನ ಸೀಮಿತ ಆಕ್ರೋಶ, ಅಸಹಾಯಕತೆಯು ಅಧ್ಯಯನ ಮಾತ್ರವಲ್ಲದೆ ಅವರ ವಯೋಸಹಜವಾದ ಇತರ ಸಕಾರಾತ್ಮಕ ಚಟುವಟಿಕೆಗಳಲ್ಲೂ ನಿರಾಸಕ್ತಿ ಮೂಡುವಂತೆ ಮಾಡುತ್ತದೆ. ಈ ನಿರಾಸಕ್ತಿ ಅವರೊಳಗಿನ ಜೀವನಪ್ರೀತಿಯನ್ನೂ ಕಳೆದುಬಿಡಬಹುದು.<br /> <br /> ಶಿಸ್ತನ್ನು ನೆಲೆಗೊಳಿಸುವ ಉದ್ದೇಶದ ಶಿಕ್ಷೆ ಮಕ್ಕಳನ್ನು ಧನಾತ್ಮಕ ನೆಲೆಯಲ್ಲಿ ಬದಲಾಯಿಸುವಂತೆ ಇರಬೇಕೇ ಹೊರತು ತನ್ನ ಅಶಿಸ್ತಿನ ಮುಖದೊಂದಿಗೆ ಎದುರುಗೊಳ್ಳಬಾರದು. ಅಂಥ ಅಶಿಸ್ತಿನ ಸ್ವರೂಪದ ಶಿಕ್ಷೆಯ ನಿರಂತರ ಅವತಾರಗಳು ಭವಿಷ್ಯದಲ್ಲಿ ಅವರನ್ನು ಪ್ರಜಾಪ್ರಭುತ್ವ ವಿರೋಧಿಗಳನ್ನಾಗಿ ರೂಪಿಸುತ್ತವೆ.</p>.<p class="rtejustify">ಈ ಹಿಂದೆ ಮಾಜಿ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋದಾಗ `ಅವರನ್ಯಾಕೆ ಜೈಲಲ್ಲಿ ಇಟ್ಟಿದ್ದಾರೆ?' ಎಂದು ಸಂಬಂಧಿಕರ ಮಗನೊಬ್ಬ ಮುಗ್ಧ ಪ್ರಶ್ನೆಯನ್ನಿಟ್ಟಿದ್ದ. ತಪ್ಪು ಮಾಡಿದವರಿಗೆ ಶಿಕ್ಷೆ ಎಂಬ ನಿಯಮವನ್ನು ಪಾಲಕರು ತಿಳಿಸಿ ಸುಮ್ಮನಾಗಿದ್ದರು. ನಂತರ ಅದೇ ವ್ಯಕ್ತಿ ಬಿಡುಗಡೆಯಾಗಿ ವಿಜಯದ ಸಂಕೇತದೊಂದಿಗೆ ಮಾಧ್ಯಮಗಳಲ್ಲಿ ಮಿಂಚಿದಾಗ `ತಪ್ಪು ಮಾಡಿ ಜೈಲಿಗೆ ಹೋಗಿ, ಮತ್ತೆ ತಪ್ಪಿಸಿಕೊಂಡು ಹಾಗೆ ಹೊರಗೆ ಬರಬಹುದಾ?' ಎಂಬ ಮತ್ತೊಂದು ಪ್ರಶ್ನೆ ಎದುರಾದಾಗ ಪಾಲಕರಿಗೆ ಉತ್ತರಿಸಲು ಕಷ್ಟವಾಯಿತಂತೆ.<br /> <br /> ಇದು ನಮ್ಮ ವ್ಯವಸ್ಥೆ ಅಳವಡಿಸಿಕೊಂಡಿರುವ ಶಿಕ್ಷೆ ಹಂಚಿಕೆಯ ಸ್ವರೂಪದ ಒಂದು ಉದಾಹರಣೆ ಮಾತ್ರ. ವ್ಯವಸ್ಥೆಯ ಒಳಗೇ ಇರುವ ಅಶಿಸ್ತು, ಅವ್ಯವಸ್ಥೆಯ ರಾಜಕಾರಣವು ಶಿಕ್ಷೆಯ ಸ್ವರೂಪವನ್ನೇ ಬದಲಾಯಿಸುವಷ್ಟರ ಮಟ್ಟಿಗೆ ಪ್ರಭಾವಿ ಆಗಿರುವ ಬಗ್ಗೆ ಮಕ್ಕಳಿಗೆ ತಿಳಿಹೇಳುವುದು ಕಷ್ಟ.</p>.<p class="rtejustify">ಆದರೆ, ಅವರವರ ಹಂತಗಳಲ್ಲಿ ಸರಿ-ತಪ್ಪುಗಳನ್ನು ವಿವೇಚಿಸುವ ಸಾಮರ್ಥ್ಯವನ್ನು ನೆಲೆಗೊಳಿಸುವಲ್ಲಿ ಶಿಕ್ಷೆ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಅದು ಪ್ರಜಾಸತ್ತಾತ್ಮಕ ಅಲ್ಲದ ನೆಲೆಗಟ್ಟಿನಲ್ಲಿ ಹಂಚಿಕೆಯಾದರೆ ಈ ವ್ಯವಸ್ಥೆಗೆ ಕ್ರಮೇಣ ನಾವು ಅಪಾಯಕಾರಿ ವ್ಯಕ್ತಿತ್ವಗಳನ್ನು ಕೊಡುಗೆಯಾಗಿ ನೀಡಿದಂತೆ ಆಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="rtejustify">ಆತ್ಮೀಯರೊಬ್ಬರ ಮಗ ಇತ್ತೀಚೆಗೆ ಎದುರಿಸಿದ ದಾರುಣ ಅನುಭವವನ್ನು ಇಲ್ಲಿ ಪ್ರಸ್ತಾಪಿಸಲು ಇಚ್ಛಿಸುತ್ತೇನೆ. ಶಿಕ್ಷೆ ಈ ಹೊತ್ತಿಗೆ ತಳೆದಿರುವ ನಕಾರಾತ್ಮಕ ಸ್ವರೂಪ ಎಂಥದ್ದು ಎಂಬುದನ್ನು ಅರ್ಥೈಸಿಕೊಳ್ಳಲು ಇದು ನೆರವಾಗಬಹುದು ಎನಿಸುತ್ತದೆ.<br /> <br /> ಆಗಿದ್ದಿಷ್ಟು- ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಆ ಬಾಲಕ ಅಧ್ಯಯನದಲ್ಲಿ ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದು. ಶಿಸ್ತಿನ ವಿಷಯದಲ್ಲಂತೂ ಹಿರಿಯರಿಗಿಂತಾ ತುಸು ಹೆಚ್ಚಿನ ಕಾಳಜಿ, ಬದ್ಧತೆ. ವಯೋಸಹಜವಾಗಿ ಆಟಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರೂ ಓದಿನ ವಿಷಯದಲ್ಲಿ ಮಾತ್ರ ಕರಾರುವಾಕ್ಕು.</p>.<p class="rtejustify">ಇಂಥ ಹುಡುಗ ಒಂದು ದಿನ ಶಾಲೆಯಿಂದ ಹಿಂದಿರುಗಿದ ಬಳಿಕ ಆಟದೆಡೆಗೆ ಆಸಕ್ತಿ ತೋರುವ ಬದಲು ಮಲಗಲು ಅಣಿಯಾದ. ಅಮ್ಮನ ಜೊತೆಗೆ ಮಾತಿಲ್ಲ. `ಏನಾಯ್ತು' ಎಂಬ ಪ್ರಶ್ನೆಗೆ ಬರೀ ಮೌನವೇ ಉತ್ತರ. ಎರಡು ತಿಂಗಳ ಹಿಂದಷ್ಟೇ ಜ್ವರದಿಂದ ಬಳಲುತ್ತಿದ್ದಾಗಲೂ ಉತ್ಸಾಹದಿಂದ ಇದ್ದವ ಈಗ ಹೀಗೇಕೆ ಮಂಕಾದ ಎಂದು ಕೊರಗಿದ ಅಮ್ಮ, ಒಂದಷ್ಟು ಹೊತ್ತಿನ ನಂತರ ಮತ್ತದೇ ಪ್ರಶ್ನೆಯೊಂದಿಗೆ ವಿಚಾರಿಸಿದರು. ಆಗ ಅವನೊಳಗಿನ ಆತಂಕ ಅನಾವರಣಗೊಂಡಿತು.<br /> <br /> `ಅಮ್ಮೋ, ನಾನು ಇವತ್ತು ಒನ್ ಅವರ್ ಬಿಸಿಲಲ್ಲಿ ನಿಲ್ಲಬೇಕಾಯ್ತು. ಬೆಳಗಿನ ಪ್ರಯರ್ ಮುಗಿದ ನಂತ್ರ ಎಲ್ಲರನ್ನೂ ಹೀಗೇ ನಿಲ್ಲಿಸಿದ್ರು. ನಾನೇನೂ ತಪ್ಪು ಮಾಡಿರಲಿಲ್ಲ' ಎಂದು ಹೇಳಿದ. ಸ್ವತಃ ಶಿಕ್ಷಕಿಯಾದ ಆ ಬಾಲಕನ ತಾಯಿ ಮಗನ ಶಾಲೆಯ ಕೆಲವು ಶಿಕ್ಷಕರೊಂದಿಗೆ ಮಾತನಾಡಿದರು. ಆಗ ಸಂಪೂರ್ಣ ವಿಷಯ ತಿಳಿಯಿತು.<br /> <br /> ಶಾಲೆಯಲ್ಲಿ ಕೆಲವು ಮಕ್ಕಳು ಶಿಸ್ತಿನಿಂದ ಇರಲಿಲ್ಲ. ಕ್ರಮೇಣ ಅಶಿಸ್ತಿನ ವರ್ತನೆಗಳು ಹೆಚ್ಚಾಗುತ್ತಿದ್ದವು. ಇಂಥ ವರ್ತನೆಗಳು ವಿದ್ಯಾಸಂಸ್ಥೆಗೆ ಕೆಟ್ಟ ಹೆಸರು ತರುತ್ತವೆ ಎಂಬ ಕಾರಣಕ್ಕೆ ಮುಖ್ಯೋಪಾಧ್ಯಾಯರು ಅಶಿಸ್ತನ್ನು ಇಲ್ಲವಾಗಿಸಲು ಕಂಡುಕೊಂಡದ್ದು ವಿಚಿತ್ರ ಶಿಕ್ಷೆಯ ಮಾರ್ಗ. ಪ್ರಾರ್ಥನೆಯ ನಂತರ ಮಕ್ಕಳನ್ನು ಅವರವರ ತರಗತಿಗಳಿಗೆ ಕಳುಹಿಸದೇ `ನಿಮ್ಮ ವರ್ತನೆಗಳು ಹದ್ದುಮೀರುತ್ತಿವೆ.<br /> <br /> ನಿಮ್ಮ ಈ ಅಶಿಸ್ತಿಗಾಗಿ ಒಂದು ಗಂಟೆಯ ಕಾಲ ನೀವೆಲ್ಲ ಹೀಗೇ ನಿಂತಿರಬೇಕು. ಆ ಮೂಲಕ, ಶಿಸ್ತಿನಿಂದ ಇರಬೇಕು ಎಂಬುದನ್ನು ತಿಳಿದುಕೊಳ್ಳಬೇಕು' ಎಂದು ತಾಕೀತು ಮಾಡಿದ್ದರು. ಈ ವೃತ್ತಾಂತವನ್ನು ಕೇಳಿದ ಮೇಲೆ ನನಗನಿಸಿದ್ದು `ಶಿಸ್ತನ್ನು ನೆಲೆಗೊಳಿಸಲು ಶಿಕ್ಷೆ ಇರಬೇಕು, ಆದರೆ ಶಿಸ್ತಿನ ಹೆಸರಲ್ಲಿ ಅಶಿಸ್ತಿನ ಶಿಕ್ಷೆ ಏಕೆ?'.<br /> <br /> ಯಾವ ತಪ್ಪೂ ಮಾಡಿರದ ಆ ಬಾಲಕನಂತೆಯೇ ಅಲ್ಲಿ ಹಲವರು ಇದ್ದಿರಬಹುದು. ಅವರಲ್ಲಿ ಕೆಲವರು ಮನೆಗೆ ಹಿಂದಿರುಗಿದ ನಂತರ ಪಾಲಕರ ಅತಿ ಭಯಂಕರ ದೂರ್ವಾಸ ರೂಪವನ್ನು ನೆನೆದು ಅದನ್ನು ಹೇಳಿಕೊಳ್ಳದೆ ಒಳಗೊಳಗೇ ಕೊರಗಿರಬಹುದು. ಆ ಕ್ಷಣಕ್ಕೆ ಅವರೊಳಗೆ ನಡೆಯುವ ನೈತಿಕ ಹೊಯ್ದೊಟಗಳು ಶಾಲೆಯನ್ನು ರಾಕ್ಷಸಾಕೃತಿಯ ಪಡಿಯಚ್ಚು ಎಂಬಂತೆ ಬಿಂಬಿಸಬಹುದು.<br /> <br /> ಡಬ್ಲ್ಯುಡಬ್ಲ್ಯುಎಫ್ನಲ್ಲಿ ದೈತ್ಯಾಕಾರದ ದೇಹಿಗಳು ಸೆಣಸಾಡುವಾಗ ತೋರುವ ಕ್ರೌರ್ಯದ ಮುಖದಂತೆಯೇ ಶಾಲೆಯನ್ನೂ ಕಲ್ಪಿಸಿಕೊಳ್ಳಬಹುದು. `ಛೋಟಾ ಭೀಮ್'ನಂತಹ ಕಾರ್ಟೂನ್ ಧಾರಾವಾಹಿಗಳಲ್ಲಿ ಬರುವ ವಿಲನ್ ಪಾತ್ರಗಳ ತದ್ರೂಪಿನಂತೆ ಮುಖ್ಯೋಪಾಧ್ಯಾಯರನ್ನು ಮತ್ತು ಇತರ ಶಿಕ್ಷಕರನ್ನು ಪರಿಗಣಿಸಬಹುದು.</p>.<p class="rtejustify">ಇಂಥ ಸಂದರ್ಭದಲ್ಲಿ ರಾಕ್ಷಸ, ವಿಲನ್ ಪಾತ್ರಗಳನ್ನು ಸದೆಬಡಿಯುವ ಹೀರೊಗಳು ನಮ್ಮ ನೆರವಿಗೆ ಬರಬಾರದೇ ಎಂಬ ಆಲೋಚನೆಗಳು ಮೊಳಕೆಯೊಡೆಯಬಹುದು. ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ಅನಿವಾರ್ಯತೆಯು ಅವರೊಳಗೆ ಇಡೀ ಶಾಲೆಯ ಬಗ್ಗೆ ತಪ್ಪು ತಿಳಿವಳಿಕೆಗಳನ್ನು ಹುಟ್ಟುಹಾಕುವಷ್ಟರ ಮಟ್ಟಿಗೆ ಪ್ರಭಾವಿ ಆಗಿರುತ್ತದೆ.</p>.<p class="rtejustify">ಇಂಥ ವೇಳೆ ಅಮ್ಮ, ಅಪ್ಪನ ಆಪ್ತತೆ, ಆತ್ಮೀಯ ಸಮಾಲೋಚನೆ ದಕ್ಕದಿದ್ದರೆ `ಸರಿಯಾಗಿದ್ದರೂ ಶಿಕ್ಷೆ, ಸರಿಯಾಗಿರದಿದ್ದರೂ ಶಿಕ್ಷೆ' ಎನ್ನುವುದಾದರೆ `ಸರಿಯಾಗಿರದೇ ಶಿಕ್ಷೆ ಅನುಭವಿಸುವುದೇ ಲೇಸು' ಎಂಬಂಥ ಅಪಾಯಕಾರಿ ನಿರ್ಣಯಕ್ಕೂ ಪಕ್ಕಾಗಬಹುದು.<br /> <br /> ಮೊದಲ ಬಾರಿಗೆ ಶಾಲೆ ಪ್ರವೇಶಿಸಿದ ಮಗು ಕ್ರಮೇಣ ಶೈಕ್ಷಣಿಕ ಶಿಸ್ತಿನ ಪ್ರಜ್ಞೆಯೊಂದಿಗೆ ತನ್ನನ್ನು ಗುರುತಿಸಿಕೊಳ್ಳುತ್ತದೆ. ತಪ್ಪುಗಳಾದ ಸಂದರ್ಭದಲ್ಲಿ ಎಚ್ಚರಿಸಿದಾಗ ಅದನ್ನು ತಿದ್ದಿಕೊಂಡು, ಇನ್ನೊಂದು ಸಲ ಹೀಗಾಗಬಾರದು ಎಂಬ ಎಚ್ಚರವನ್ನು ಜಾಗೃತಗೊಳಿಸಿಕೊಳ್ಳುತ್ತದೆ.</p>.<p class="rtejustify">ಇಂಥದ್ದೊಂದು ಪ್ರಜ್ಞೆಯೊಂದಿಗೆ ಇರುವ ಮಕ್ಕಳಿಗೆ ಅವರದಲ್ಲದ ತಪ್ಪಿಗೆ ಸಾಮೂಹಿಕವಾಗಿ ಶಿಕ್ಷೆ ಎದುರಿಸುವ ಸಂದರ್ಭ ಎದುರಾದರೆ, ಅವರೊಳಗೆ ಸಕಾರಾತ್ಮಕತೆಯ ಬಗ್ಗೆಯೇ ನಿರಾಸೆ ಮೊಳಕೆಯೊಡೆಯುತ್ತದೆ. ಆ ನಿರಾಸೆ ಅಸಮಾಧಾನವಾಗಿ ಪರಿವರ್ತಿತವಾಗುವ ಅಪಾಯ ಇರುತ್ತದೆ.</p>.<p class="rtejustify">ಅಸಮಾಧಾನ ಬಹಳ ದಿನಗಳ ಕಾಲ ಮಕ್ಕಳ ಮನಸ್ಸಿನಲ್ಲಿ ಇದ್ದರೆ ಅವರೊಳಗಿನ ಸೀಮಿತ ಆಕ್ರೋಶ, ಅಸಹಾಯಕತೆಯು ಅಧ್ಯಯನ ಮಾತ್ರವಲ್ಲದೆ ಅವರ ವಯೋಸಹಜವಾದ ಇತರ ಸಕಾರಾತ್ಮಕ ಚಟುವಟಿಕೆಗಳಲ್ಲೂ ನಿರಾಸಕ್ತಿ ಮೂಡುವಂತೆ ಮಾಡುತ್ತದೆ. ಈ ನಿರಾಸಕ್ತಿ ಅವರೊಳಗಿನ ಜೀವನಪ್ರೀತಿಯನ್ನೂ ಕಳೆದುಬಿಡಬಹುದು.<br /> <br /> ಶಿಸ್ತನ್ನು ನೆಲೆಗೊಳಿಸುವ ಉದ್ದೇಶದ ಶಿಕ್ಷೆ ಮಕ್ಕಳನ್ನು ಧನಾತ್ಮಕ ನೆಲೆಯಲ್ಲಿ ಬದಲಾಯಿಸುವಂತೆ ಇರಬೇಕೇ ಹೊರತು ತನ್ನ ಅಶಿಸ್ತಿನ ಮುಖದೊಂದಿಗೆ ಎದುರುಗೊಳ್ಳಬಾರದು. ಅಂಥ ಅಶಿಸ್ತಿನ ಸ್ವರೂಪದ ಶಿಕ್ಷೆಯ ನಿರಂತರ ಅವತಾರಗಳು ಭವಿಷ್ಯದಲ್ಲಿ ಅವರನ್ನು ಪ್ರಜಾಪ್ರಭುತ್ವ ವಿರೋಧಿಗಳನ್ನಾಗಿ ರೂಪಿಸುತ್ತವೆ.</p>.<p class="rtejustify">ಈ ಹಿಂದೆ ಮಾಜಿ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋದಾಗ `ಅವರನ್ಯಾಕೆ ಜೈಲಲ್ಲಿ ಇಟ್ಟಿದ್ದಾರೆ?' ಎಂದು ಸಂಬಂಧಿಕರ ಮಗನೊಬ್ಬ ಮುಗ್ಧ ಪ್ರಶ್ನೆಯನ್ನಿಟ್ಟಿದ್ದ. ತಪ್ಪು ಮಾಡಿದವರಿಗೆ ಶಿಕ್ಷೆ ಎಂಬ ನಿಯಮವನ್ನು ಪಾಲಕರು ತಿಳಿಸಿ ಸುಮ್ಮನಾಗಿದ್ದರು. ನಂತರ ಅದೇ ವ್ಯಕ್ತಿ ಬಿಡುಗಡೆಯಾಗಿ ವಿಜಯದ ಸಂಕೇತದೊಂದಿಗೆ ಮಾಧ್ಯಮಗಳಲ್ಲಿ ಮಿಂಚಿದಾಗ `ತಪ್ಪು ಮಾಡಿ ಜೈಲಿಗೆ ಹೋಗಿ, ಮತ್ತೆ ತಪ್ಪಿಸಿಕೊಂಡು ಹಾಗೆ ಹೊರಗೆ ಬರಬಹುದಾ?' ಎಂಬ ಮತ್ತೊಂದು ಪ್ರಶ್ನೆ ಎದುರಾದಾಗ ಪಾಲಕರಿಗೆ ಉತ್ತರಿಸಲು ಕಷ್ಟವಾಯಿತಂತೆ.<br /> <br /> ಇದು ನಮ್ಮ ವ್ಯವಸ್ಥೆ ಅಳವಡಿಸಿಕೊಂಡಿರುವ ಶಿಕ್ಷೆ ಹಂಚಿಕೆಯ ಸ್ವರೂಪದ ಒಂದು ಉದಾಹರಣೆ ಮಾತ್ರ. ವ್ಯವಸ್ಥೆಯ ಒಳಗೇ ಇರುವ ಅಶಿಸ್ತು, ಅವ್ಯವಸ್ಥೆಯ ರಾಜಕಾರಣವು ಶಿಕ್ಷೆಯ ಸ್ವರೂಪವನ್ನೇ ಬದಲಾಯಿಸುವಷ್ಟರ ಮಟ್ಟಿಗೆ ಪ್ರಭಾವಿ ಆಗಿರುವ ಬಗ್ಗೆ ಮಕ್ಕಳಿಗೆ ತಿಳಿಹೇಳುವುದು ಕಷ್ಟ.</p>.<p class="rtejustify">ಆದರೆ, ಅವರವರ ಹಂತಗಳಲ್ಲಿ ಸರಿ-ತಪ್ಪುಗಳನ್ನು ವಿವೇಚಿಸುವ ಸಾಮರ್ಥ್ಯವನ್ನು ನೆಲೆಗೊಳಿಸುವಲ್ಲಿ ಶಿಕ್ಷೆ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಅದು ಪ್ರಜಾಸತ್ತಾತ್ಮಕ ಅಲ್ಲದ ನೆಲೆಗಟ್ಟಿನಲ್ಲಿ ಹಂಚಿಕೆಯಾದರೆ ಈ ವ್ಯವಸ್ಥೆಗೆ ಕ್ರಮೇಣ ನಾವು ಅಪಾಯಕಾರಿ ವ್ಯಕ್ತಿತ್ವಗಳನ್ನು ಕೊಡುಗೆಯಾಗಿ ನೀಡಿದಂತೆ ಆಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>