<p>ಬರ್ಮಿಂಗ್ಹ್ಯಾಮ್: ಭಾರತ ಟೇಬಲ್ ಟೆನಿಸ್ ತಂಡದ ವಿವಾದ ಈಗ ಕಾಮನ್ವೆಲ್ತ್ ಕ್ರೀಡಾಕೂಟದ ಅಂಗಳಕ್ಕೂ ಕಾಲಿಟ್ಟಿದೆ.</p>.<p>ಕೂಟದ ಹಾಲಿ ಚಾಂಪಿಯನ್ ಆಗಿ ಇಲ್ಲಿಗೆ ಬಂದಿದ್ದ ಭಾರತ ಮಹಿಳಾ ತಂಡವು ಕ್ವಾರ್ಟರ್ಫೈನಲ್ನಲ್ಲಿ ತನಗಿಂತ ದುರ್ಬಲ ಮಲೇಷ್ಯಾ ತಂಡದ ಎದುರು ಆಘಾತ ಅನುಭವಿಸಿತ್ತು.</p>.<p>ತಂಡದ ಕೋಚ್ ಆಗಿ ನಿಯೋಜನೆಗೊಂಡಿದ್ದ ಅನಿಂದಿತಾ ಚಕ್ರವರ್ತಿ ಅವರು ಈ ಪಂದ್ಯದ ವೇಳೆ ಹಾಜರಿರಲಿಲ್ಲ. ಅವರ ಬದಲಾಗಿ ಪುರುಷರ ತಂಡದ ಕೋಚ್ ಎಸ್.ರಮಣ್ ಉಪಸ್ಥಿತರಿದ್ದದ್ದು ವಿವಾದಕ್ಕೆ ಕಾರಣವಾಗಿದೆ.</p>.<p>‘ಈ ಪ್ರಸಂಗ ನಡೆಯಬಾರದಿತ್ತು. ಮಹಿಳಾ ಕೋಚ್ ತಂಡಕ್ಕೆ ಮಾರ್ಗದರ್ಶನ ನೀಡಬೇಕಿತ್ತು. ಈ ಕುರಿತು ನಾನು ತಂಡದೊಂದಿಗೆ ಚರ್ಚಿಸುವೆ‘ ಎಂದು ಭಾರತ ಟೇಬಲ್ ಟೆನಿಸ್ ಫೆಡರೇಷನ್ಅನ್ನು (ಟಿಟಿಎಫ್ಐ) ಮುನ್ನಡೆಸುತ್ತಿರುವ ಆಡಳಿತಗಾರರ ಸಮಿತಿ ಸದಸ್ಯ ಎಸ್.ಡಿ. ಮುದ್ಗಿಲ್ ಹೇಳಿದ್ದಾರೆ.</p>.<p>ಮುದ್ಗಿಲ್ ಅವರು ಮ್ಯಾನೇಜರ್ ಆಗಿ ತಂಡದೊಂದಿಗೆ ಇರಬೇಕಿತ್ತು. ಆದರೆ ಆಟಗಾರರ ಮನವಿಯ ಮೇರೆಗೆ, ಫಿಸಿಯೊ ಗಾಯತ್ರಿ ವರ್ತಕ್ ಅವರಿಗೆ ಅವಕಾಶ ಮಾಡಿಕೊಟ್ಟು ಅವರು ಭಾರತದಲ್ಲೇ<br />ಉಳಿದುಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬರ್ಮಿಂಗ್ಹ್ಯಾಮ್: ಭಾರತ ಟೇಬಲ್ ಟೆನಿಸ್ ತಂಡದ ವಿವಾದ ಈಗ ಕಾಮನ್ವೆಲ್ತ್ ಕ್ರೀಡಾಕೂಟದ ಅಂಗಳಕ್ಕೂ ಕಾಲಿಟ್ಟಿದೆ.</p>.<p>ಕೂಟದ ಹಾಲಿ ಚಾಂಪಿಯನ್ ಆಗಿ ಇಲ್ಲಿಗೆ ಬಂದಿದ್ದ ಭಾರತ ಮಹಿಳಾ ತಂಡವು ಕ್ವಾರ್ಟರ್ಫೈನಲ್ನಲ್ಲಿ ತನಗಿಂತ ದುರ್ಬಲ ಮಲೇಷ್ಯಾ ತಂಡದ ಎದುರು ಆಘಾತ ಅನುಭವಿಸಿತ್ತು.</p>.<p>ತಂಡದ ಕೋಚ್ ಆಗಿ ನಿಯೋಜನೆಗೊಂಡಿದ್ದ ಅನಿಂದಿತಾ ಚಕ್ರವರ್ತಿ ಅವರು ಈ ಪಂದ್ಯದ ವೇಳೆ ಹಾಜರಿರಲಿಲ್ಲ. ಅವರ ಬದಲಾಗಿ ಪುರುಷರ ತಂಡದ ಕೋಚ್ ಎಸ್.ರಮಣ್ ಉಪಸ್ಥಿತರಿದ್ದದ್ದು ವಿವಾದಕ್ಕೆ ಕಾರಣವಾಗಿದೆ.</p>.<p>‘ಈ ಪ್ರಸಂಗ ನಡೆಯಬಾರದಿತ್ತು. ಮಹಿಳಾ ಕೋಚ್ ತಂಡಕ್ಕೆ ಮಾರ್ಗದರ್ಶನ ನೀಡಬೇಕಿತ್ತು. ಈ ಕುರಿತು ನಾನು ತಂಡದೊಂದಿಗೆ ಚರ್ಚಿಸುವೆ‘ ಎಂದು ಭಾರತ ಟೇಬಲ್ ಟೆನಿಸ್ ಫೆಡರೇಷನ್ಅನ್ನು (ಟಿಟಿಎಫ್ಐ) ಮುನ್ನಡೆಸುತ್ತಿರುವ ಆಡಳಿತಗಾರರ ಸಮಿತಿ ಸದಸ್ಯ ಎಸ್.ಡಿ. ಮುದ್ಗಿಲ್ ಹೇಳಿದ್ದಾರೆ.</p>.<p>ಮುದ್ಗಿಲ್ ಅವರು ಮ್ಯಾನೇಜರ್ ಆಗಿ ತಂಡದೊಂದಿಗೆ ಇರಬೇಕಿತ್ತು. ಆದರೆ ಆಟಗಾರರ ಮನವಿಯ ಮೇರೆಗೆ, ಫಿಸಿಯೊ ಗಾಯತ್ರಿ ವರ್ತಕ್ ಅವರಿಗೆ ಅವಕಾಶ ಮಾಡಿಕೊಟ್ಟು ಅವರು ಭಾರತದಲ್ಲೇ<br />ಉಳಿದುಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>