ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕ್ಲಿಂಗ್‌: ಕರ್ನಾಟಕಕ್ಕೆ ಒಲಿದ ಐದು ಪದಕಗಳು

Last Updated 30 ಜನವರಿ 2019, 20:15 IST
ಅಕ್ಷರ ಗಾತ್ರ

ಹುಬ್ಬಳ್ಳಿ:ಕರ್ನಾಟಕದ ಸೈಕ್ಲಿಸ್ಟ್‌ಗಳು ಬುಧವಾರರಾಜಸ್ಥಾನದ ಜೈಪುರದಲ್ಲಿ ಆರಂಭವಾದ71ನೇ ರಾಷ್ಟ್ರೀಯ ಸೀನಿಯರ್‌ ಹಾಗೂ ಜೂನಿಯರ್‌ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಐದು ಪದಕಗಳನ್ನು ಜಯಿಸಿದ್ದಾರೆ.

ಬಾಲಕಿಯರ 14 ವರ್ಷದ ಒಳಗಿನವರ 500 ಮೀ. ಟೈಮ್‌ ಟ್ರಯಲ್ಸ್‌ನಲ್ಲಿ ವಿಜಯಪುರದ ಅಂಕಿತಾ ರಾಠೋಡ 42.237 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಪಡೆದರು.

16 ವರ್ಷದ ಒಳಗಿನವರ ವಿಭಾಗದ ನಾಲ್ಕು ಕಿ.ಮೀ.ಸ್ಕ್ರ್ಯಾಚ್ ರೇಸ್‌ ಸ್ಪರ್ಧೆಯಲ್ಲಿ ಬೆಂಗಳೂರಿನಕೀರ್ತಿ ರಂಗಸ್ವಾಮಿ ಬೆಳ್ಳಿ ಗೆದ್ದರು.18 ವರ್ಷದ ಒಳಗಿನವರ ಆರು ಕಿ.ಮೀ.ಸ್ಕ್ರ್ಯಾಚ್ ರೇಸ್‌ ಸ್ಪರ್ಧೆಯಲ್ಲಿ ವಿಜಯಪುರದ ಸರ್ಕಾರಿ ಸೈಕ್ಲಿಂಗ್‌ ಕ್ರೀಡಾ ನಿಲಯದಸಹನಾ ಕುಡಿಗಾನೂರ ಬೆಳ್ಳಿ ಪಡೆದರು.

ಬಾಲಕರ 16 ವರ್ಷದಒಳಗಿನವರ ವಿಭಾಗದ ಐದುಕಿ.ಮೀ. ಸ್ಕ್ರ್ಯಾಚ್ ರೇಸ್‌ ಸ್ಪರ್ಧೆಯಲ್ಲಿ ಗದಗ ಜಿಲ್ಲೆಯನ್ನು ಪ್ರತಿನಿಧಿಸಿರುವ ವಿಜಯಪುರದ ಗಣೇಶ ಕುಡಿಗನೂರ ಕಂಚು ಜಯಿಸಿದರು.

14 ವರ್ಷದ ಒಳಗಿನವರ ವಿಭಾಗದ500 ಮೀ. ಟೈಮ್‌ ಟ್ರಯಲ್ಸ್‌ನಲ್ಲಿವಿಜಯಪುರ‌ ಸರ್ಕಾರಿಸೈಕ್ಲಿಂಗ್ ಕ್ರೀಡಾ ನಿಲಯದ ಮಲ್ಲಿಕಾರ್ಜುನ ಯಾದವಾಡ39.192 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT