<p><strong>ಹುಬ್ಬಳ್ಳಿ:</strong>ಕರ್ನಾಟಕದ ಸೈಕ್ಲಿಸ್ಟ್ಗಳು ಬುಧವಾರರಾಜಸ್ಥಾನದ ಜೈಪುರದಲ್ಲಿ ಆರಂಭವಾದ71ನೇ ರಾಷ್ಟ್ರೀಯ ಸೀನಿಯರ್ ಹಾಗೂ ಜೂನಿಯರ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ಐದು ಪದಕಗಳನ್ನು ಜಯಿಸಿದ್ದಾರೆ.</p>.<p>ಬಾಲಕಿಯರ 14 ವರ್ಷದ ಒಳಗಿನವರ 500 ಮೀ. ಟೈಮ್ ಟ್ರಯಲ್ಸ್ನಲ್ಲಿ ವಿಜಯಪುರದ ಅಂಕಿತಾ ರಾಠೋಡ 42.237 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಪಡೆದರು.</p>.<p>16 ವರ್ಷದ ಒಳಗಿನವರ ವಿಭಾಗದ ನಾಲ್ಕು ಕಿ.ಮೀ.ಸ್ಕ್ರ್ಯಾಚ್ ರೇಸ್ ಸ್ಪರ್ಧೆಯಲ್ಲಿ ಬೆಂಗಳೂರಿನಕೀರ್ತಿ ರಂಗಸ್ವಾಮಿ ಬೆಳ್ಳಿ ಗೆದ್ದರು.18 ವರ್ಷದ ಒಳಗಿನವರ ಆರು ಕಿ.ಮೀ.ಸ್ಕ್ರ್ಯಾಚ್ ರೇಸ್ ಸ್ಪರ್ಧೆಯಲ್ಲಿ ವಿಜಯಪುರದ ಸರ್ಕಾರಿ ಸೈಕ್ಲಿಂಗ್ ಕ್ರೀಡಾ ನಿಲಯದಸಹನಾ ಕುಡಿಗಾನೂರ ಬೆಳ್ಳಿ ಪಡೆದರು.</p>.<p>ಬಾಲಕರ 16 ವರ್ಷದಒಳಗಿನವರ ವಿಭಾಗದ ಐದುಕಿ.ಮೀ. ಸ್ಕ್ರ್ಯಾಚ್ ರೇಸ್ ಸ್ಪರ್ಧೆಯಲ್ಲಿ ಗದಗ ಜಿಲ್ಲೆಯನ್ನು ಪ್ರತಿನಿಧಿಸಿರುವ ವಿಜಯಪುರದ ಗಣೇಶ ಕುಡಿಗನೂರ ಕಂಚು ಜಯಿಸಿದರು.</p>.<p>14 ವರ್ಷದ ಒಳಗಿನವರ ವಿಭಾಗದ500 ಮೀ. ಟೈಮ್ ಟ್ರಯಲ್ಸ್ನಲ್ಲಿವಿಜಯಪುರ ಸರ್ಕಾರಿಸೈಕ್ಲಿಂಗ್ ಕ್ರೀಡಾ ನಿಲಯದ ಮಲ್ಲಿಕಾರ್ಜುನ ಯಾದವಾಡ39.192 ಸೆಕೆಂಡ್ಗಳಲ್ಲಿ ಗುರಿ ತಲುಪಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong>ಕರ್ನಾಟಕದ ಸೈಕ್ಲಿಸ್ಟ್ಗಳು ಬುಧವಾರರಾಜಸ್ಥಾನದ ಜೈಪುರದಲ್ಲಿ ಆರಂಭವಾದ71ನೇ ರಾಷ್ಟ್ರೀಯ ಸೀನಿಯರ್ ಹಾಗೂ ಜೂನಿಯರ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ಐದು ಪದಕಗಳನ್ನು ಜಯಿಸಿದ್ದಾರೆ.</p>.<p>ಬಾಲಕಿಯರ 14 ವರ್ಷದ ಒಳಗಿನವರ 500 ಮೀ. ಟೈಮ್ ಟ್ರಯಲ್ಸ್ನಲ್ಲಿ ವಿಜಯಪುರದ ಅಂಕಿತಾ ರಾಠೋಡ 42.237 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಪಡೆದರು.</p>.<p>16 ವರ್ಷದ ಒಳಗಿನವರ ವಿಭಾಗದ ನಾಲ್ಕು ಕಿ.ಮೀ.ಸ್ಕ್ರ್ಯಾಚ್ ರೇಸ್ ಸ್ಪರ್ಧೆಯಲ್ಲಿ ಬೆಂಗಳೂರಿನಕೀರ್ತಿ ರಂಗಸ್ವಾಮಿ ಬೆಳ್ಳಿ ಗೆದ್ದರು.18 ವರ್ಷದ ಒಳಗಿನವರ ಆರು ಕಿ.ಮೀ.ಸ್ಕ್ರ್ಯಾಚ್ ರೇಸ್ ಸ್ಪರ್ಧೆಯಲ್ಲಿ ವಿಜಯಪುರದ ಸರ್ಕಾರಿ ಸೈಕ್ಲಿಂಗ್ ಕ್ರೀಡಾ ನಿಲಯದಸಹನಾ ಕುಡಿಗಾನೂರ ಬೆಳ್ಳಿ ಪಡೆದರು.</p>.<p>ಬಾಲಕರ 16 ವರ್ಷದಒಳಗಿನವರ ವಿಭಾಗದ ಐದುಕಿ.ಮೀ. ಸ್ಕ್ರ್ಯಾಚ್ ರೇಸ್ ಸ್ಪರ್ಧೆಯಲ್ಲಿ ಗದಗ ಜಿಲ್ಲೆಯನ್ನು ಪ್ರತಿನಿಧಿಸಿರುವ ವಿಜಯಪುರದ ಗಣೇಶ ಕುಡಿಗನೂರ ಕಂಚು ಜಯಿಸಿದರು.</p>.<p>14 ವರ್ಷದ ಒಳಗಿನವರ ವಿಭಾಗದ500 ಮೀ. ಟೈಮ್ ಟ್ರಯಲ್ಸ್ನಲ್ಲಿವಿಜಯಪುರ ಸರ್ಕಾರಿಸೈಕ್ಲಿಂಗ್ ಕ್ರೀಡಾ ನಿಲಯದ ಮಲ್ಲಿಕಾರ್ಜುನ ಯಾದವಾಡ39.192 ಸೆಕೆಂಡ್ಗಳಲ್ಲಿ ಗುರಿ ತಲುಪಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>