‘2019ರಲ್ಲಿ ನನ್ನ ಹೆಸರಲ್ಲಿ ಫೇಸ್ಬುಕ್ ಖಾತೆ ತೆರೆದಿದ್ದಉತ್ತರ ಪ್ರದೇಶದ ಅಮಿತ್ ಎಂಬ ವ್ಯಕ್ತಿಯು ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಚಂಡೀಗಡ ಹಾಗೂ ಕೇರಳದ ಇಬ್ಬರಿಂದ ಒಟ್ಟು ಹತ್ತು ಲಕ್ಷ ಹಣ ಪಡೆದು ವಂಚಿಸಿದ್ದ. ವಿಷಯ ಗೊತ್ತಾದ ಕೂಡಲೇ ಪುಣೆಯ ಸೈಬರ್ ಅಪರಾಧ ಘಟಕಕ್ಕೆ ದೂರು ನೀಡಿದ್ದೆ. ಅದಾಗಿ ಕೆಲವೇ ದಿನಗಳಲ್ಲಿ ಪೊಲೀಸರು ಆ ಖಾತೆ ಡಿಲೀಟ್ ಮಾಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಅಮಿತ್, ಇನ್ಸ್ಟಾಗ್ರಾಮ್ನಲ್ಲೂ ನನ್ನ ಹೆಸರಿನ ನಕಲಿ ಖಾತೆ ತೆರೆದಿದ್ದ. ನನ್ನ ಪರಿಚಯಸ್ಥರಿಗೆ ‘ಫ್ರೆಂಡ್ ರಿಕ್ವೆಸ್ಟ್’ ಕೂಡ ಕಳುಹಿಸಿದ್ದ. ಆ ವಿಷಯವನ್ನು ವಿದ್ಯಾರ್ಥಿಯೊಬ್ಬ ನನ್ನ ಗಮನಕ್ಕೆ ತಂದಿದ್ದ. ಅದಕ್ಕೆ ಈಗ ದೂರು ನೀಡಿದ್ದೇನೆ’ ಎಂದು ಕಾಶಿನಾಥ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.