ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಗೌರವ ಪಡೆದ ನೀರಜ್, ‘ತೊಡೆಯ ಸ್ನಾಯು ಸೆಳೆತದ ಕಾರಣ ಕಾಮನ್ವೆಲ್ತ್ ಕೂಟದಲ್ಲಿ ಪಾಲ್ಗೊಂಡಿರಲಿಲ್ಲ. ಈ ಋತುವಿನಲ್ಲಿ ಯಾವುದೇ ಕೂಟದಲ್ಲಿ ಪಾಲ್ಗೊಳ್ಳಲು ಆಗದು ಎಂದು ಭಾವಿಸಿದ್ದೆ. ಆದರೆ ಈಗ ನೋವಿನ ಅನುಭವ ಆಗುತ್ತಿಲ್ಲ. ಬೇಗನೇ ಚೇತರಿಸಿಕೊಂಡೆ’ ಎಂದಿದ್ದಾರೆ.