ಆಗಸ್ಟ್ನಲ್ಲಿ ನಡೆದ ಆನ್ಲೈನ್ ಚೆಸ್ ಒಲಿಂಪಿಯಾಡ್ನಲ್ಲಿ ಶ್ರೀನಾಥ್ ಪದಕ ಗೆದ್ದಿದ್ದರು. ಆದರೆ ಅದನ್ನು ಪಡೆದುಕೊಳ್ಳಬೇಕಾದರೆ ₹ 6,300 ಮೊತ್ತದ ಸುಂಕವನ್ನು ನೀಡಿದ್ದರು. ಈ ವಿಷಯವನ್ನು ಸಾಮಾಜಿಕ ತಾಣಗಳ ಮೂಲಕ ಶ್ರೀನಾಥ್ ಬಹಿರಂಗ ಮಾಡಿದ ಬೇಸರ ವ್ಯಕ್ತಪಡಿಸಿದ್ದರು. ಕ್ರೀಡಾ ಸಚಿವರ ಗಮನಕ್ಕೆ ಬಂದಿತ್ತು. ಈ ಕುರಿತು ಟ್ವೀಟ್ ಮಾಡಿರುವ ಕಿರಣ್ ರಿಜಿಜು ತಮ್ಮ ಕಚೇರಿಯ ಸಿಬ್ಬಂದಿ ಶ್ರೀನಾಥ್ ನಾರಾಯಣನ್ ಅವರೊಂದಿಗೆ ಮಾತನಾಡಿದ್ದು ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ತಿಳಿಸಿದ್ದಾರೆ.