<p><strong>ನವದೆಹಲಿ</strong>: ಸುಲಭ ಜಯ ಸಂಪಾದಿಸಿದ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ, ಭಾರತದ ಪಿ.ವಿ.ಸಿಂಧು ಅವರು ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ. ಆದರೆ ಭರವಸೆಯ ಆಟಗಾರ್ತಿ ಮಾಳವಿಕಾ ಬಾನ್ಸೋದ್ ಅವರಿಗೆ ಮಣಿದ ಸೈನಾ ನೆಹ್ವಾಲ್ ಅಭಿಯಾನ ಟೂರ್ನಿಯಲ್ಲಿ ಗುರುವಾರ ಅಂತ್ಯವಾಯಿತು.</p>.<p>ಅಗ್ರಶ್ರೇಯಾಂಕದ ಸಿಂಧು ಮಹಿಳಾ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ 21–10, 21–10ರಿಂದ ಭಾರತದವರೇ ಆದ ಇರಾ ಶರ್ಮಾ ಅವರನ್ನು ಮಣಿಸಿದರು.</p>.<p>ಸಿಂಧು ಅವರು ಎಂಟರಘಟ್ಟದ ಪಂದ್ಯದಲ್ಲಿ ಭಾರತದವರೇ ಆದ ಅಸ್ಮಿತಾ ಚಲಿಹಾ ಅವರನ್ನು ಎದುರಿಸುವರು. ಎರಡನೇ ಸುತ್ತಿನ ಇನ್ನೊಂದು ಹಣಾಹಣಿಯಲ್ಲಿ ಅಸ್ಮಿತಾ21-17, 21-14ರಿಂದ ಫ್ರಾನ್ಸ್ನ ಯೆಲ್ಲೆ ಹೊಯಾಕ್ಸ್ ಅವರನ್ನು ಮಣಿಸಿದರು.</p>.<p>ಮಾಜಿ ಚಾಂಪಿಯನ್ ಹಾಗೂ 2012ರ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ 17–21, 9–21ರಿಂದ ಭಾರತದ ಮಾಳವಿಕಾ ಎದುರು ಎಡವಿದರು.</p>.<p>ವಿಶ್ವ ರ್ಯಾಂಕಿಂಗ್ನಲ್ಲಿ 111ನೇ ಸ್ಥಾನದಲ್ಲಿರುವ 20 ವರ್ಷದ ಮಾಳವಿಕಾ, ವಿಶ್ವದ ಮಾಜಿ ಅಗ್ರಕ್ರಮಾಂಕದ ಆಟಗಾರ್ತಿಯನ್ನು ಮಣಿಸಲು ಕೇವಲ 34 ನಿಮಿಷ ತೆಗೆದುಕೊಂಡರು.</p>.<p>‘ಸೈನಾ ಎದುರು ಮೊದಲ ಬಾರಿ ಕಣಕ್ಕಿಳಿದಿದ್ದೆ. ಬ್ಯಾಡ್ಮಿಂಟನ್ ಆಡಲು ಆರಂಭಿಸಿದಾಗಿನಿಂದ ಅವರು ನನ್ನ ಆದರ್ಶವಾಗಿದ್ದಾರೆ. ಅವರ ಎದುರು ಆಡುವುದು ಜೀವನದ ಬಹುದೊಡ್ಡ ಕನಸಾಗಿತ್ತು. ಇಂಡಿಯಾ ಓಪನ್ನಂತಹ ದೊಡ್ಡ ವೇದಿಕೆಯಲ್ಲಿ ಅದು ನನಸಾಯಿತು. ಈ ಗೆಲುವು ನನ್ನ ಬದುಕಿನ ಮಹತ್ವದ ಸಾಧನೆ‘ ಎಂದು ಗೆಲುವಿನ ಬಳಿಕ ಮಾಳವಿಕಾ ನುಡಿದರು.</p>.<p>ಗಾಯಗಳಿಂದ ಚೇತರಿಸಿಕೊಂಡು ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಸೈನಾ, ಮಂಗಳವಾರ ಮೊದಲ ಸುತ್ತಿನ ತಡೆ ದಾಟಿದ್ದರು. ಅಂಗಣದಲ್ಲಿ ತೋರಿದ ಸಾಮರ್ಥ್ಯದ ಬಗ್ಗೆ ಅವರಿಗೆ ಸಂತಸವಿದೆ. ಆದರೆ ತಾನು ಇನ್ನಷ್ಟು ಫಿಟ್ ಆಗಬೇಕಿತ್ತು ಎಂದು ಅವರು ಹೇಳಿದ್ದಾರೆ.</p>.<p>‘ರ್ಯಾಲಿಗಳಲ್ಲಿಮಾಳವಿಕಾ ಅದ್ಭುತವಾಗಿ ಆಡಿದರು. ಅವರಿಗೆ ಉತ್ತಮ ಭವಿಷ್ಯವಿದೆ‘ ಎಂದು ಸೈನಾ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಮಾಳವಿಕಾ ಅವರು ಕ್ವಾರ್ಟರ್ಫೈನಲ್ನಲ್ಲಿ ಆಕರ್ಷಿ ಕಶ್ಯಪ್ ಅವರಿಗೆ ಮುಖಾಮುಖಿಯಾಗಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಆಕರ್ಷಿ21-10, 21-10ರಿಂದ ಭಾರತದವರೇ ಆದ ಕೆಯುರಾ ಮೊಪಾತಿನ್ ಎದುರು ಜಯಿಸಿದರು.</p>.<p><strong>ಪ್ರಣಯ್ಗೆ ವಾಕ್ಓವರ್:</strong> ಪುರುಷರ ಸಿಂಗಲ್ಸ್ನಲ್ಲಿ ಎಚ್.ಎಸ್. ಪ್ರಣಯ್ ಅವರಿಗೆ ವಾಕ್ ಓವರ್ ಲಭಿಸಿತು. ಕೊರೊನಾ ಸೋಂಕಿತ ಮಿಥುನ್ ಮಂಜುನಾಥ್ ಹಿಂದೆ ಸರಿದ ಕಾರಣ ಅವರಿಗೆ ಈ ಅವಕಾಶ ಸಿಕ್ಕಿತು. ಸಮೀರ್ ವರ್ಮಾ ಅವರ ಅಭಿಯಾನ ಕೊನೆಗೊಂಡಿತು. ಮೊಣಕಾಲು ನೋವಿನಿಂದ ಬಳಲಿದ ಅವರು ಕೆನಡಾದ ಬ್ರೇನ್ ಯಾಂಗ್ ಎದುರಿನ ಎರಡನೇ ಸುತ್ತಿನ ಪಂದ್ಯದ ನಡುವೆಯೇ ಹಿಂದೆ ಸರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಸುಲಭ ಜಯ ಸಂಪಾದಿಸಿದ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ, ಭಾರತದ ಪಿ.ವಿ.ಸಿಂಧು ಅವರು ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ. ಆದರೆ ಭರವಸೆಯ ಆಟಗಾರ್ತಿ ಮಾಳವಿಕಾ ಬಾನ್ಸೋದ್ ಅವರಿಗೆ ಮಣಿದ ಸೈನಾ ನೆಹ್ವಾಲ್ ಅಭಿಯಾನ ಟೂರ್ನಿಯಲ್ಲಿ ಗುರುವಾರ ಅಂತ್ಯವಾಯಿತು.</p>.<p>ಅಗ್ರಶ್ರೇಯಾಂಕದ ಸಿಂಧು ಮಹಿಳಾ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ 21–10, 21–10ರಿಂದ ಭಾರತದವರೇ ಆದ ಇರಾ ಶರ್ಮಾ ಅವರನ್ನು ಮಣಿಸಿದರು.</p>.<p>ಸಿಂಧು ಅವರು ಎಂಟರಘಟ್ಟದ ಪಂದ್ಯದಲ್ಲಿ ಭಾರತದವರೇ ಆದ ಅಸ್ಮಿತಾ ಚಲಿಹಾ ಅವರನ್ನು ಎದುರಿಸುವರು. ಎರಡನೇ ಸುತ್ತಿನ ಇನ್ನೊಂದು ಹಣಾಹಣಿಯಲ್ಲಿ ಅಸ್ಮಿತಾ21-17, 21-14ರಿಂದ ಫ್ರಾನ್ಸ್ನ ಯೆಲ್ಲೆ ಹೊಯಾಕ್ಸ್ ಅವರನ್ನು ಮಣಿಸಿದರು.</p>.<p>ಮಾಜಿ ಚಾಂಪಿಯನ್ ಹಾಗೂ 2012ರ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ 17–21, 9–21ರಿಂದ ಭಾರತದ ಮಾಳವಿಕಾ ಎದುರು ಎಡವಿದರು.</p>.<p>ವಿಶ್ವ ರ್ಯಾಂಕಿಂಗ್ನಲ್ಲಿ 111ನೇ ಸ್ಥಾನದಲ್ಲಿರುವ 20 ವರ್ಷದ ಮಾಳವಿಕಾ, ವಿಶ್ವದ ಮಾಜಿ ಅಗ್ರಕ್ರಮಾಂಕದ ಆಟಗಾರ್ತಿಯನ್ನು ಮಣಿಸಲು ಕೇವಲ 34 ನಿಮಿಷ ತೆಗೆದುಕೊಂಡರು.</p>.<p>‘ಸೈನಾ ಎದುರು ಮೊದಲ ಬಾರಿ ಕಣಕ್ಕಿಳಿದಿದ್ದೆ. ಬ್ಯಾಡ್ಮಿಂಟನ್ ಆಡಲು ಆರಂಭಿಸಿದಾಗಿನಿಂದ ಅವರು ನನ್ನ ಆದರ್ಶವಾಗಿದ್ದಾರೆ. ಅವರ ಎದುರು ಆಡುವುದು ಜೀವನದ ಬಹುದೊಡ್ಡ ಕನಸಾಗಿತ್ತು. ಇಂಡಿಯಾ ಓಪನ್ನಂತಹ ದೊಡ್ಡ ವೇದಿಕೆಯಲ್ಲಿ ಅದು ನನಸಾಯಿತು. ಈ ಗೆಲುವು ನನ್ನ ಬದುಕಿನ ಮಹತ್ವದ ಸಾಧನೆ‘ ಎಂದು ಗೆಲುವಿನ ಬಳಿಕ ಮಾಳವಿಕಾ ನುಡಿದರು.</p>.<p>ಗಾಯಗಳಿಂದ ಚೇತರಿಸಿಕೊಂಡು ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಸೈನಾ, ಮಂಗಳವಾರ ಮೊದಲ ಸುತ್ತಿನ ತಡೆ ದಾಟಿದ್ದರು. ಅಂಗಣದಲ್ಲಿ ತೋರಿದ ಸಾಮರ್ಥ್ಯದ ಬಗ್ಗೆ ಅವರಿಗೆ ಸಂತಸವಿದೆ. ಆದರೆ ತಾನು ಇನ್ನಷ್ಟು ಫಿಟ್ ಆಗಬೇಕಿತ್ತು ಎಂದು ಅವರು ಹೇಳಿದ್ದಾರೆ.</p>.<p>‘ರ್ಯಾಲಿಗಳಲ್ಲಿಮಾಳವಿಕಾ ಅದ್ಭುತವಾಗಿ ಆಡಿದರು. ಅವರಿಗೆ ಉತ್ತಮ ಭವಿಷ್ಯವಿದೆ‘ ಎಂದು ಸೈನಾ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಮಾಳವಿಕಾ ಅವರು ಕ್ವಾರ್ಟರ್ಫೈನಲ್ನಲ್ಲಿ ಆಕರ್ಷಿ ಕಶ್ಯಪ್ ಅವರಿಗೆ ಮುಖಾಮುಖಿಯಾಗಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಆಕರ್ಷಿ21-10, 21-10ರಿಂದ ಭಾರತದವರೇ ಆದ ಕೆಯುರಾ ಮೊಪಾತಿನ್ ಎದುರು ಜಯಿಸಿದರು.</p>.<p><strong>ಪ್ರಣಯ್ಗೆ ವಾಕ್ಓವರ್:</strong> ಪುರುಷರ ಸಿಂಗಲ್ಸ್ನಲ್ಲಿ ಎಚ್.ಎಸ್. ಪ್ರಣಯ್ ಅವರಿಗೆ ವಾಕ್ ಓವರ್ ಲಭಿಸಿತು. ಕೊರೊನಾ ಸೋಂಕಿತ ಮಿಥುನ್ ಮಂಜುನಾಥ್ ಹಿಂದೆ ಸರಿದ ಕಾರಣ ಅವರಿಗೆ ಈ ಅವಕಾಶ ಸಿಕ್ಕಿತು. ಸಮೀರ್ ವರ್ಮಾ ಅವರ ಅಭಿಯಾನ ಕೊನೆಗೊಂಡಿತು. ಮೊಣಕಾಲು ನೋವಿನಿಂದ ಬಳಲಿದ ಅವರು ಕೆನಡಾದ ಬ್ರೇನ್ ಯಾಂಗ್ ಎದುರಿನ ಎರಡನೇ ಸುತ್ತಿನ ಪಂದ್ಯದ ನಡುವೆಯೇ ಹಿಂದೆ ಸರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>