<p><strong>ನವದೆಹಲಿ</strong>: ವಿಶ್ವ ಜೂನಿಯರ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿರುವ ಅನುಪಮಾ ಉಪಾಧ್ಯಾಯ ಮತ್ತು ಒಡಿಶಾ ಓಪನ್ ಚಾಂಪಿಯನ್ ಉನ್ನತಿ ಹೂಡಾ ಅವರು ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ.</p>.<p>ಸ್ಪೇನ್ನಲ್ಲಿ ಅಕ್ಟೋಬರ್ 17ರಿಂದ 30ರವರೆಗೆ ವಿಶ್ವ ಚಾಂಪಿಯನ್ಷಿಪ್ ನಡೆಯಲಿದೆ. ಕೋವಿಡ್ ಕಾರಣದಿಂದಾಗಿ ಎರಡು ವರ್ಷ ಸ್ಥಗಿತಗೊಂಡಿದ್ದ ಚಾಂಪಿಯನ್ಷಿಪ್ ಈ ಬಾರಿ ನಿಗದಿಯಾಗಿದೆ.</p>.<p>ಅಖಿಲ ಭಾರತ ರ್ಯಾಂಕಿಂಗ್ ಟೂರ್ನಿಗಳು ಮತ್ತು ಆಯ್ಕೆ ಟ್ರಯಲ್ಸ್ ಮೂಲಕ ತಂಡಗಳನ್ನು ಆಯ್ಕೆ ಮಾಡಲಾಗಿದೆ.</p>.<p>ಉತ್ತಮ ಫಾರ್ಮ್ನಲ್ಲಿರುವ ಭರತ್ ರಾಘವ್ ಹಾಗೂ ವಿಶ್ವ ರ್ಯಾಂಕಿಂಗ್ನಲ್ಲಿ ಈ ಹಿಂದೆ ಅಗ್ರಸ್ಥಾನದಲ್ಲಿದ್ದ ಶಂಕರ್ ಮುತ್ತುಸ್ವಾಮಿ ಅವರು ಬಾಲಕರ ಸಿಂಗಲ್ಸ್ನಲ್ಲಿ ಸ್ಥಾನ ಪಡೆದಿದ್ದಾರೆ.</p>.<p>ಈ ಹಿಂದಿನ ಚಾಂಪಿಯನ್ಷಿಪ್ಗಳಲ್ಲಿ ಭಾರತ ತಲಾ ಮೂರು ಚಿನ್ನ, ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಜಯಿಸಿದೆ.</p>.<p><strong>ಭಾರತ ತಂಡ ಇಂತಿದೆ:</strong>ಬಾಲಕರು: ಸಿಂಗಲ್ಸ್: ಭರತ್ ರಾಘವ್, ಶಂಕರ್ ಮುತ್ತುಸಾಮಿ ಎಸ್, ಆಯುಷ್ ಶೆಟ್ಟಿ.ಡಬಲ್ಸ್: ಅರ್ಷ್ ಮೊಹಮ್ಮದ್/ಅಭಿನವ್ ಠಾಕೂರ್, ನಿಕೋಲಸ್ ನಾಥನ್ ರಾಜ್/ತುಷಾರ್ ಸುವೀರ್.</p>.<p><strong>ಬಾಲಕಿಯರು</strong>: ಸಿಂಗಲ್ಸ್: ಉನ್ನತಿ ಹೂಡಾ, ರಕ್ಷಿತಾ ಶ್ರೀ ಎಸ್, ಅನುಪಮಾ ಉಪಾಧ್ಯಾಯ. ಡಬಲ್ಸ್: ಇಶಾರಾಣಿ ಬರುವಾ/ದೇವಿಕಾ ಸಿಹಾಗ್, ಶ್ರೇಯಾ ಬಾಲಾಜಿ/ಶ್ರೀನಿಧಿ ಎನ್.</p>.<p>ಮಿಶ್ರ ಡಬಲ್ಸ್: ಸಮರವೀರ್/ರಾಧಿಕಾ ಶರ್ಮಾ, ವಿಘ್ನೇಶ್ ತತಿನೇನಿ/ಶ್ರೀ ಸಾಯಿ ಶ್ರಾವ್ಯಾ ಲಕ್ಕಮ್ರಾಜು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ವಿಶ್ವ ಜೂನಿಯರ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿರುವ ಅನುಪಮಾ ಉಪಾಧ್ಯಾಯ ಮತ್ತು ಒಡಿಶಾ ಓಪನ್ ಚಾಂಪಿಯನ್ ಉನ್ನತಿ ಹೂಡಾ ಅವರು ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ.</p>.<p>ಸ್ಪೇನ್ನಲ್ಲಿ ಅಕ್ಟೋಬರ್ 17ರಿಂದ 30ರವರೆಗೆ ವಿಶ್ವ ಚಾಂಪಿಯನ್ಷಿಪ್ ನಡೆಯಲಿದೆ. ಕೋವಿಡ್ ಕಾರಣದಿಂದಾಗಿ ಎರಡು ವರ್ಷ ಸ್ಥಗಿತಗೊಂಡಿದ್ದ ಚಾಂಪಿಯನ್ಷಿಪ್ ಈ ಬಾರಿ ನಿಗದಿಯಾಗಿದೆ.</p>.<p>ಅಖಿಲ ಭಾರತ ರ್ಯಾಂಕಿಂಗ್ ಟೂರ್ನಿಗಳು ಮತ್ತು ಆಯ್ಕೆ ಟ್ರಯಲ್ಸ್ ಮೂಲಕ ತಂಡಗಳನ್ನು ಆಯ್ಕೆ ಮಾಡಲಾಗಿದೆ.</p>.<p>ಉತ್ತಮ ಫಾರ್ಮ್ನಲ್ಲಿರುವ ಭರತ್ ರಾಘವ್ ಹಾಗೂ ವಿಶ್ವ ರ್ಯಾಂಕಿಂಗ್ನಲ್ಲಿ ಈ ಹಿಂದೆ ಅಗ್ರಸ್ಥಾನದಲ್ಲಿದ್ದ ಶಂಕರ್ ಮುತ್ತುಸ್ವಾಮಿ ಅವರು ಬಾಲಕರ ಸಿಂಗಲ್ಸ್ನಲ್ಲಿ ಸ್ಥಾನ ಪಡೆದಿದ್ದಾರೆ.</p>.<p>ಈ ಹಿಂದಿನ ಚಾಂಪಿಯನ್ಷಿಪ್ಗಳಲ್ಲಿ ಭಾರತ ತಲಾ ಮೂರು ಚಿನ್ನ, ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಜಯಿಸಿದೆ.</p>.<p><strong>ಭಾರತ ತಂಡ ಇಂತಿದೆ:</strong>ಬಾಲಕರು: ಸಿಂಗಲ್ಸ್: ಭರತ್ ರಾಘವ್, ಶಂಕರ್ ಮುತ್ತುಸಾಮಿ ಎಸ್, ಆಯುಷ್ ಶೆಟ್ಟಿ.ಡಬಲ್ಸ್: ಅರ್ಷ್ ಮೊಹಮ್ಮದ್/ಅಭಿನವ್ ಠಾಕೂರ್, ನಿಕೋಲಸ್ ನಾಥನ್ ರಾಜ್/ತುಷಾರ್ ಸುವೀರ್.</p>.<p><strong>ಬಾಲಕಿಯರು</strong>: ಸಿಂಗಲ್ಸ್: ಉನ್ನತಿ ಹೂಡಾ, ರಕ್ಷಿತಾ ಶ್ರೀ ಎಸ್, ಅನುಪಮಾ ಉಪಾಧ್ಯಾಯ. ಡಬಲ್ಸ್: ಇಶಾರಾಣಿ ಬರುವಾ/ದೇವಿಕಾ ಸಿಹಾಗ್, ಶ್ರೇಯಾ ಬಾಲಾಜಿ/ಶ್ರೀನಿಧಿ ಎನ್.</p>.<p>ಮಿಶ್ರ ಡಬಲ್ಸ್: ಸಮರವೀರ್/ರಾಧಿಕಾ ಶರ್ಮಾ, ವಿಘ್ನೇಶ್ ತತಿನೇನಿ/ಶ್ರೀ ಸಾಯಿ ಶ್ರಾವ್ಯಾ ಲಕ್ಕಮ್ರಾಜು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>